Ultimate magazine theme for WordPress.

samudrik shastra  ನಿಮ್ಮ ಕೈಯಲ್ಲಿ ಈ ರೀತಿ ಗುರುತುಗಳು ಇದ್ದರೆ

0 25,359

samudrik shastra  If you have marks like this on your hands ಗೆಳೆಯರೇ ಭಾರತೀಯ ಸಂಸ್ಕೃತಿಯಲ್ಲಿ ಭವಿಷ್ಯವನ್ನು ನೋಡಲು ಕೆಲವು ವಿಧಾನಗಳನ್ನು ತಿಳಿಸಲಾಗಿದೆ. ಇದರಲ್ಲಿ ಸಾಮುದ್ರಿಕ ಶಾಸ್ತ್ರವಾಗಿದೆ. ಇದು ಭವಿಷ್ಯವನ್ನು ನೋಡಲು ಪ್ರಾಚೀನ ವಿಜ್ಞಾನವಾಗಿದೆ. ವಿಷ್ಣು ಪುರಾಣದ ಪ್ರಕಾರ ಈ ಒಂದು ಶಾಸ್ತ್ರ ಲಕ್ಷ್ಮಿ ತನ್ನ ಪತಿ ವಿಷ್ಣುವಿಗೆ ಹೇಳಿದಂತಹ ಶಾಸ್ತ್ರವಾಗಿದೆ. ಈ ಒಂದು ಶಾಸ್ತ್ರವನ್ನು ಕೇಳಿ ಪ್ರಸನ್ನನಾಗಿ

ಈ ಒಂದು ಶಾಸ್ತ್ರಕ್ಕೆ ಸಾಮುದ್ರಿಕ ಶಾಸ್ತ್ರವೆಂಬ ಹೆಸರನ್ನು ಇಡುತ್ತಾರೆ. ಕೈಯಲ್ಲಿರುವಂತಹ ರೇಖೆಗಳಾಗಲಿ, ದೇಹದ ಮೇಲಿರುವ ಮಚ್ಚೆಗಳಾಗಲಿ ಇಂತಹ ಸಾಕಷ್ಟು ಇರುವಂತಹ ವಿಶೇಷತೆಗಳಿಗೆ ಈ ಶಾಸ್ತ್ರ ವಿಕಾಸವಾಗಿದೆ. ಇನ್ನು ಅಂಗೈಯಲ್ಲಿ ಚಿಕ್ಕ ಚಿಕ್ಕ ಈ ಗೆರೆಗಳು ಸೇರಿ ಒಂದು ರೇಖೆಯಾಗುತ್ತದೆ. ಇದರ ಮೂಲಕ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು.

ಮೊದಲನೆಯದಾಗಿ ನಿಮ್ಮ ಅಂಗೈಯಲ್ಲಿ ಶಂಖದ ತರಹ ಮಾರ್ಕ್‌ ಇದ್ದರೆ ಇದು ಮುಂದೆ ಬರುವಂತಹ ಧನಕ್ಕೆ ಸಂಬಂಧ ಪಟ್ಟಂಗೆ ಯಶಸ್ವಿಯಾಗುತ್ತಿರ ಮುಂದೆ ಧನಕ್ಕೆ ಸಂಬಂಧ ಪಟ್ಟ ವಿಷಯಗಳಲ್ಲಿ ಎಷ್ಟು ಅದೃಷ್ಟವಂತರಾಗುತ್ತೀರ ಎಂಬುದರ ಬಗ್ಗೆ ಒಂದು ಸಂಕೇತ ಎಂದು ಹೇಳಲಾಗುತ್ತೆ. ಹಾಗೆ ದೃಢನಿಶ್ಚಯ ನೀವು ಒಂದು ಕೆಲಸ ಇಡಿದುಕೊಂಡರೆ ಅದನ್ನು ಮಾಡುವವರೆಗೂ ಬಿಡುವುದಿಲ್ಲ. samudrik shastra 

ಇನ್ನು 2ನೇಯದಾಗಿ ಮೀನಿನ ಆಕಾರವಿರುವಂತಹ ರೇಖೆಗಳು, ಮೀನು ಆಕಾರವಿದ್ದರೆ ಹುಟ್ಟಿನಿಂದಲೇ ಈ ಗುರುತು ಇರುತ್ತದೆ. ಅವರು ಹುಟ್ಟಿನಿಂದಲೇ ಅದೃಷ್ಟವಂತರಾಗಿರುತ್ತಾರೆ. ಇನ್ನು ಕೆಲವರಿಗೆ ಅರ್ಧವಯಸ್ಸಾದ ಅಂದರೆ 20 ವರ್ಷದ ನಂತರ ಬರಲು ಪ್ರಾರಂಭವಾಗುತ್ತದೆ. ಅಂದರೆ ಕಾಣಿಸಲು ಪ್ರಾರಂಭವಾಗುತ್ತೆ ಆಗ ಅವರಿಗೆ ಅದೃಷ್ಟ ಎನ್ನುವುದು ಹೆಚ್ಚಾಗಿರುತ್ತದೆ.

ಇನ್ನು 3ನೇಯದು ನಿಮ್ಮ ಕೈಯಲ್ಲಿ ಮಧ್ಯರಂಗ ಈ ಆಕಾರವಿದ್ದರೆ ಎಲ್ಲಾ ಕಡೆ ಮರ್ಯಾದೆ ಚೆನ್ನಾಗಿ ಸಿಗುತ್ತದೆ. ಹಾಗೆ ಇವರು ಯಾವುದೇ ಒಂದು ಜಾಗದಲ್ಲಿ ಇದ್ದುಕೊಂಡು ಬೇರೆ ಜಾಗ ಅಥವಾ ಬೇರೆ ವಿಚಾರದ ಬಗ್ಗೆ ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಇದರಿಂದಾಗಿ ಇವರಿಗೆ ಸಮಾಜದಲ್ಲಿ ಒಳ್ಳೆಯ ಮರ್ಯಾದೆ ಮತ್ತು ಸ್ಥಾನ ಸಿಗುತ್ತದೆ. ಇದೇ ರೀತಿ samudrik shastra 

ನಿಮ್ಮ ಕೈಯಲ್ಲಿ ಸ್ವಸ್ತಿಕ್‌ ಚಿಹ್ನೆ ಇದ್ದರೆ ಇವರ ಧಾರ್ಮಿಕ ನಂಬಿಕೆ ಮತ್ತು ದೇವರ ಬಗ್ಗೆ ಸಾಕಷ್ಟು ನಂಬಿಕೆ ಇರುತ್ತದೆ. ಹಾಗೆ ಇವರಿಗೆ ದೇವರೆ ಮೇಲೆ ಪ್ರೀತಿಯು ಇರುತ್ತದೆ. ಇವರಿಗೆ ಯಾವುದೇ ಕಷ್ಟ ಬಂದರೂ ಕೂಡ ದೇವರು ಕೈಯನ್ನು ಬಿಡುವುದಿಲ್ಲವೆಂದು ಹೇಳಬಹುದು. ಇನ್ನು ಐದನೆಯದಾಗಿ ನಿಮ್ಮ ಕೈಯಲ್ಲಿ ತ್ರಿಶೂಲದ ಗುರುತು ಇದ್ದರೆ ಧೈರ್ಯ ಎನ್ನಬಹುದು. samudrik shastra 

ಯಾವುದೇ ವಿಷಯಕ್ಕೆ ಕೈ ಹಾಕಿದರೂ ಭಯ ಆಗುವುದಿಲ್ಲ ಯಾವ ಸನ್ನಿವೇಶ ಬಂದರೂ ನೀವು ಹೆದರದೇ ಅದನ್ನು ಫೇಸ್‌ ಮಾಡುತ್ತೀರಾ ಹಾಗಾಗಿ ನಿಮಗೆ ಒಳ್ಳೆಯ ಭವಿಷ್ಯವಿರುತ್ತೆ ಎಂದು ಹೇಳಲಾಗುತ್ತೆ. ಇನ್ನು ಇನ್ನೊಂದು ವಿಷಯಕ್ಕೆ ಬಂದರೆ ನಿಮ್ಮ ಕೈಯಲ್ಲಿರುವ ಪರ್ವತಗಳು ಎಂದು ಹೇಳಬಹುದು. ಇದರಲ್ಲಿ ನಿಮಗೆ ನಿಮ್ಮ ಜಾತಕದಲ್ಲಿ ಯಾವೊಂದು ಗ್ರಹ ಹೆಚ್ಚಾಗಿ ಪ್ರಭಾವಿತನಾಗಿರುತ್ತಾನೋ

ನಿಮ್ಮ ಕೈಯಲ್ಲಿ ಆ ಒಂದು ಪರ್ವತದ ಉದ್ದ ಜಾಸ್ತಿಯಾಗಿರುತ್ತದೆ. ಬೇರೆಯವರಿಗೆ ಹೋಲಿಕೆ ಮಾಡಿದಾಗ ಹೇಳಬಹುದು ಮೊದಲನೆಯದಾಗಿ ಯಾರಲ್ಲಿ ಈ ಒಂದು ಅನಾಮಿಕ ಬೆರಳು ಎಲ್ಲಾ ಬೆರಳಿಗಿಂತ ಉದ್ದವಿದ್ದರೆ ಇವರು ತುಂಬಾ ಪ್ರಸಿದ್ಧಿ ಮತ್ತು ಗುಣವಂತರಾಗಿರುತ್ತಾರೆ ಎಂದು ಹೇಳಬಹುದು. 2ನೇಯದಾಗಿ ಶನಿಪರ್ವತ ಇದರ ಉದ್ದ ಎಲ್ಲದಕ್ಕಿಂತ ಜಾಸ್ತಿ ಇದ್ದರೆ samudrik shastra 

ಇವರು ತುಂಬಾ ಶ್ರಮ ಜೀವಿಗಳಾಗಿರುತ್ತಾರೆ. ಹಾಗೇ ಇವರು ತಮ್ಮ ಶ್ರಮದಿಂದಲೇ ಸಾಕಷ್ಟು ಹಣ ಗಳಿಕೆ ಮಾಡುತ್ತಾರೆ. ಇದೆಲ್ಲವೂ ಶ್ರಮದಿಂದಲೇ ಪಡೆಯುತ್ತಾರೆ ಎಂದು ಹೇಳಬಹುದು. ಇನ್ನು ಕುರುಪರ್ವತ ಉದ್ದವೆಂದಾಗ ಎಲ್ಲಾ ಕ್ಷೇತ್ರದಲ್ಲೂ ಒಳ್ಳೆಯ ಫಲ ಸಿಗುತ್ತದೆ ಮತ್ತು ಕೆಲಸದಲ್ಲಿ ಒಳ್ಳೆಯ ಹೆಸರು ಸಿಗುತ್ತದೆ. ಹಾಗೆ ಒಳ್ಳೆಯ ಭವಿಷ್ಯವೆಂದು ಹೇಳಬಹುದು.

ಇನ್ನು ಶುಕ್ರ ಪರ್ವತ ಉದ್ದವಿದ್ದರೆ ಕಲೆಯ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಮಾಡಬಹುದು. ಹಾಗೇ ಈ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರೆ ತುಂಬಾ ಒಳ್ಳೆಯದು ಎಂದು ಹೇಳಬಹುದು. ಇನ್ನು ಬೆರಳಿನಲ್ಲಿ ಉಗುರಿನಲ್ಲಿರುವ ಅರ್ಧಚಂದ್ರ ಇದ್ದರೆ, ಒಂದೊಂದು ಬೆರಳಿನಲ್ಲಿ ಮಾತ್ರ ಇರುತ್ತದೆ. ಹಾಗಾಗಿ ಒಂದೊಂದು ಬೆರಳ ಬಗ್ಗೆನೂ ವಿವರಿಸುತ್ತೇನೆ. samudrik shastra 

ಮೊದಲನೆಯದಾಗಿ ಅನಾಮಿಕ ಬೆರಳು. ಈ ಬೆರಳಿನಲ್ಲಿ ಬಿಳಿಯ ಮಾರ್ಕ್‌ ಇದ್ದರೆ ಸಮಾಜದಲ್ಲಿ ಮರ್ಯಾದೆ ಸಮಾನತೆಗಳು ತುಂಬಾ ಜಾಸ್ತಿ ಸಿಗುತ್ತದೆಂದು ಹೇಳಬಹುದು. ಹಾಗೆಯೇ ಇವರು ಯಾವುದೇ ಕ್ಷೇತ್ರದಲ್ಲಿ ಸಫಲತೆ ಹೊಂದುತ್ತಾರೆ. ಬೇರೆಯವರಿಗೆ ಹೋಲಿಸಿದಾಗ ಇವರಿಗೆ ಬೇಗ ಯಶಸ್ಸು ಸಿಗುತ್ತದೆ ಎಂದು ಹೇಳಬಹುದು. ಇನ್ನು 2ನೇಯದಾಗಿ ಮಧ್ಯದ ಬೆರಳಿನಲ್ಲಿ ಅರ್ಧಚಂದ್ರವಿದ್ದರೆ

ಇವರು ವ್ಯಾಪಾರ ಮತ್ತು ವ್ಯವಸಾಯಗಳಲ್ಲಿ ತುಂಬಾ ಪ್ರಗತಿಯನ್ನು ಕಾಣುತ್ತಾರೆ ಎಂದು ಹೇಳಬಹುದು. ವಿಶೇಷವಾಗಿ ಏನು ಅಂದರೆ ಮಿಷನ್‌ಗಳಿಗೆ ಸಂಬಂಧಿಸಿದ ಕೆಲಸಗಳಿಗೆ ತುಂಬಾ ಪ್ರಗತಿ ಸಿಗುತ್ತದೆ ಹಾಗೂ ತುಂಬಾ ಲಾಭಗಳು ಸಿಗುತ್ತದೆಂದು ಹೇಳಬಹುದು. ಇನ್ನು ಹೆಬ್ಬೆಟ್ಟಿನಲ್ಲಿ ವೈಟ್‌ ಮಾರ್ಕ್‌ ಅಥವಾ ಅರ್ಧಚಂದ್ರ ಮಾರ್ಕ್‌ ಇದ್ದರೆ ಲೀಡರ್‌ ಶಿಪ್‌ ಅಂತ ಏನು ಹೇಳುತ್ತೀವಿ ನಾಯಕತ್ವದ ಗುಣಗಳು ಇರುತ್ತವೆ. ಅದು ಸ್ವಲ್ಪ ಜಾಸ್ತಿ ಇರುತ್ತದೆಂದು ಹೇಳಬಹುದು.

ಹಾಗೆ ಇವರಿಗೆ ಜೀವನದಲ್ಲಿ ಒಳ್ಳೆ ಹಾಗೂ ಸಮಾಜದಲ್ಲಿ ಸಮಾನತೆ ಸಿಗುತ್ತದೆಂದು ಹೇಳಬಹುದು. ಇನ್ನು ಮುಂದಿನದಾಗಿ ಆ ಚಿಕ್ಕ ಬೆರಳು ವೈಟ್‌ ಕಲರ್‌ ಅಥವಾ ಅರ್ಧಚಂದ್ರ ಮಾರ್ಕ್‌ ಇದ್ದರೆ ನಿಮಗೂ ಕೂಡ ಅದೃಷ್ಟವೆನ್ನುವುದು ತುಂಬಾ ಚೆನ್ನಾಗಿರುತ್ತದೆಂದು ಹೇಳಬಹುದು. ಕಷ್ಟವೆನ್ನುವುದು ಬಂದಾಗ ಆದಷ್ಟು ಬೇಗ ಅದರಿಂದ ಹೊರಬರುವುದೆಂದು ಇವರಿಗೆ ಚೆನ್ನಾಗಿ ಗೊತ್ತಿರುತ್ತದೆ. samudrik shastra 

ಈ ಒಂದು ಕಾರಣದಿಂದಾಗಿ ಕಷ್ಟಗಳು ಹೆಚ್ಚಾಗಿ ಬರುವುದಿಲ್ಲ. ಎಲ್ಲಾ ಬೆರಳಿನಲ್ಲಿ ಅರ್ಧಚಂದ್ರಾಕೃತಿ ಇದ್ದರೆ ಜೀವನದಲ್ಲಿ ತುಂಬಾ ಕಷ್ಟಪಟ್ಟು ಮುಂದೆ ಬರುತ್ತಾರೆ. ಇವರ ಸ್ವಂತ ಪರಿಶ್ರಮದಿಂದ ಸಾಕಷ್ಟು ಹಣವನ್ನು ಗಳಿಸುತ್ತಾರೆ. ಒಳ್ಳೆಯ ಭವಿಷ್ಯವಿರುತ್ತದೆಂದು ಹೇಳಬಹುದು. ಯಾವ ಬೆರಳಿನಲ್ಲಿ ಅರ್ಧಚಂದ್ರ ಇಲ್ಲವೆಂದಾಗ ಇವರು ಕ್ರೂರಿಕ ಸ್ವಭಾವದವರಾಗಿರುತ್ತಾರೆ. ಕೋಪ ಜಾಸ್ತಿಯಾಗಿರುತ್ತದೆ. ಆದರೆ ಬುದ್ಧಿವಂತಿಕೆ ಎನ್ನುವುದು ಚೆನ್ನಾಗಿರುತ್ತದೆ. ಆದ್ದರಿಂದ ಬುದ್ಧಿಯನ್ನು ಚೆನ್ನಾಗಿ ಉಪಯೋಗಿಸುತ್ತಾರೆ. ಆ ಒಂದು ಕಾರಣದಿಂದ ಯಾರು ಇವರನ್ನು ತಡೆಯಲು ಆಗುವುದಿಲ್ಲವೆಂದು ಹೇಳಬಹುದು.

Leave A Reply

Your email address will not be published.