Ultimate magazine theme for WordPress.

astrology ಅರಳಿಮರಕ್ಕೆ ಇದನ್ನು ಅರ್ಪಿಸಿ ಕಷ್ಟ ಕರಗುತ್ತೆ

0 14,842

astrology tips in Kannada  ಸ್ನೇಹಿತರೇ ಯಾರಿಗೂ ಗೊತ್ತಾಗದಂತೆ ಶನಿವಾರ ಅರಳಿಮರದ ಹತ್ತಿರ ಈ ಕೆಲಸ ಮಾಡಿ ಕೋಟಿ ಸಾಲವಿದ್ದರೂ ತೀರುತ್ತದೆ. ಅರಳಿ ಮರವು ಒಂದು ಪವಿತ್ರ ಮರವಾಗಿದೆ. ಹಿಂದೂ ಧರ್ಮದಲ್ಲಿ ದೇವತೆಗಳ ಸ್ಥಾನವನ್ನು ಕೊಡಲಾಗಿದೆ. ಅರಳಿಮರದಲ್ಲೇ ವಾಸ ಮಾಡುತ್ತೇನೆ ಸ್ವತಃ ಶ್ರೀಕೃಷ್ಣನೇ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ಆದರೇ ಜೀವನದ ಎಲ್ಲಾ ಕಷ್ಟನಷ್ಟಗಳನ್ನು ದೂರ ಮಾಡುವ

ಮತ್ತು ಗ್ರಹದೋಷಗಳನ್ನು ಕಳೆಯುವ ಶಕ್ತಿ ಅರಳಿಮರಕ್ಕಿದೆ. ನೆಮ್ಮದಿಯ ಜೀವನವನ್ನು ಅರಳಿಮರ ಕೊಡುತ್ತದೆ. ಕಲಿಯುಗದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿಯು ಕೂಡ ಅರಳಿಮರದಲ್ಲಿಯೇ ವಾಸಮಾಡುತ್ತಾಳೆ. ನಿಯಮಿತವಾಗಿ ಅರಳಿಮರಕ್ಕೆ ನೀರನ್ನು ಹಾಕುತ್ತಾ ಬಂದರೇ ನಿಮಗೆ ಹಣದ ಕೊರತೆ ಎನ್ನುವುದೇ ಇರುವುದಿಲ್ಲ. ಸದಾ ನಿಮ್ಮ ಕೈಯಲ್ಲಿ ಹಣವಿರುತ್ತದೆ. astrology

ಸಂಮೃದ್ಧಿ ನಿಮ್ಮ ಜೀವನದಲ್ಲಿ ಇರುತ್ತದೆ. ರವಿವಾರವನ್ನು ಬಿಟ್ಟು ಯಾರು ಪ್ರತಿದಿನ ಅರಳಿ ವೃಕ್ಷಕ್ಕೆ ಪ್ರದಕ್ಷಿಣೆಯನ್ನು ಹಾಕುತ್ತಾರೋ ಅವರು ಎಲ್ಲಾ ಪಾಪಗಳಿಂದ ಮುಕ್ತಿಯನ್ನು ಹೊಂದುತ್ತಾರೆಂದು ಪದ್ಮಪುರಾಣದಲ್ಲಿ ಹೇಳಲಾಗಿದೆ. ಅರಳಿಮರದ ವೈಜ್ಞಾನಿಕ ಹಿನ್ನೆಲೆಯನ್ನು ನೋಡುವುದಾದರೇ ಆಮ್ಲಜನಕವು ಇದರಲ್ಲಿ ಹೇರಳವಾಗಿದೆ.

ಅರಳಿಮರ ಉಳಿದ ಜಾತಿಯ ಮರಗಳಿಗಿಂತ ಹೆಚ್ಚು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಮರಗಳು ಸೂರ್ಯನ ಬೆಳಕಿನಲ್ಲಿ ಮಾತ್ರ ದ್ಯುತಿಸಂಶ್ಲೇಷಣಾ ಕ್ರಿಯೆ ನಡೆಸಿದರೇ ಅರಳಿಮರ ಚಂದ್ರನ ಬೆಳಕಿನಲ್ಲೂ ಈ ಕ್ರಿಯೆಯನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ. ಈ ಮರವು ಸಸ್ಯಗಳಲ್ಲೇ ಪ್ರಮುಖವಾಗಿದೆ. ಸನಾತನ ಧರ್ಮದಲ್ಲಿ ಅರಳಿಮರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. astrology

ಎಲ್ಲಾ ದೇವಾನುದೇವತೆಗಳು ಅರಳಿಮರದಲ್ಲಿ ವಾಸವಾಗಿದ್ದಾರೆಂಬ ನಂಬಿದೆ ಇದೆ. ಇದನ್ನು ಪೂಜಿಸುವುದರಿಂದ ಅನೇಕ ಪ್ರಯೋಜನಗಳು ದೊರೆಯುತ್ತವೆ. ಇದರೊಂದಿಗೆ ಶನಿದೋಷದಿಂದ ಮುಕ್ತಿಯನ್ನು ಪಡೆಯಬಹುದು. ಆದ್ದರಿಂದ ಈ ಅರಳಿಮರಕ್ಕೆ ದೇವಮರವೆಂದು ಬಿರುದು ನೀಡಲಾಗಿದೆ. ಅಮಾವಾಸ್ಯೆ ಮತ್ತು ಪೌರ್ಣಿಮೆ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ಪೂಜಿಸಲಾಗುತ್ತದೆ.

ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ಕೂಡ ಅರಳಿಮರದಲ್ಲಿ ವಾಸಿಸುತ್ತಾರೆಂಬ ನಂಬಿಕೆ ಇದೆ. ಆದುದ್ದರಿಂದ ಅರಳಿಮರವನ್ನು ಪೂಜಿಸುವುದರಿಂದ ಪುಣ್ಯ ಬರುತ್ತದೆ ಮತ್ತು ಪಿತೃಗಳ ಆಶೀರ್ವಾದವು ದೊರೆಯುತ್ತದೆ. ವಿಜ್ಞಾನಿಗಳು ಈ ಮರಗಳನ್ನು ವಿಶಿಷ್ಟವೆಂದು ಪರಿಗಣಿಸಿದ್ದಾರೆ. ಈ ಮರಗಳು 24 ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. astrology

ಇದು ಮನುಷ್ಯರಿಗೆ ಬಹಳ ಮುಖ್ಯವಾಗಿದೆ. ಅನೇಕ ಋಷಿ ಮುನಿಗಳು ಅರಳಿಮರದ ಕೆಳಗೆ ಜ್ಞಾನೋದಯವನ್ನು ಪಡೆದಿದ್ದಾರೆ. ನಿಮ್ಮ ಮನೆಯ ಗೋಡೆಗೆ ಅಂಟಿಕೊಂಡು ಅರಳಿಮರ ಬೆಳೆಯುತ್ತಿದೆ ಎಂದು ಗೊತ್ತಾದ ತಕ್ಷಣ ಅದನ್ನು ಅಲ್ಲಿಂದ ತೆಗೆದು ಸಾರ್ವಜನಿಕ ಸ್ಥಳದಲ್ಲಿ ನೆಟ್ಟುಬಿಡಿ. ಮರವನ್ನು ಕಿತ್ತು ಬೀಸಾಡಬೇಡಿ. ಸುರಕ್ಷಿತ ಸ್ಥಳದಲ್ಲಿ ನೆಟ್ಟು ಅದು ಮತ್ತೆ ಚಿಗುರುವವರೆವಿಗೂ ಅದರ ಹಾರೈಕೆ ಮಾಡಿ.

ಹೀಗೆ ಮಾಡುವುದರಿಂದ ನಿಮ್ಮ ಜೀವನದ ಕಷ್ಟಗಳು ದೂರವಾಗುತ್ತದೆ. ಅರಳಿಮರ ನಿಮ್ಮ ಮನೆಯ ಗೋಡೆಯ ಮೇಲೆ ಬೆಳೆಯುತ್ತಿದ್ದರೆ ಅದು ಶುಭವಲ್ಲ ಮತ್ತು ಅದು ಅಲ್ಲಿಯೇ ಬೆಳೆಯುವುದರಿಂದ ನಿಮ್ಮ ಮನೆಯ ಅಡಿಪಾಯವೇ ಅಲುಗಾಡುತ್ತದೆ, ಗೋಡೆಗಳು ಬಾಯಿಬಿಡುತ್ತವೆ ಆದ್ದರಿಂದ ಇವುಗಳನ್ನು ತೆಗೆದು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಿ. astrology

ಅರಳಿಮರಕ್ಕೆ ನೀವು ನೀರನ್ನು ಅರ್ಪಿಸುವುದರಿಂದ ಎಂತಹ ಕಷ್ಟಗಳು ಇದ್ದರೂ ಸಹ ಅದೆಲ್ಲವೂ ಸರಿ ಹೋಗುತ್ತದೆ. ಶನಿವಾರದ ದಿನದಂದು ಅರಳಿವೃಕ್ಷದ ಕೆಳಗೆ ದೀಪವನ್ನು ಬೆಳಗಬೇಕು ಇದರಿಂದ ಅತೃಪ್ತ ಆತ್ಮಗಳು ಸಂತೃಪ್ತಗೊಳ್ಳುತ್ತದೆ. ಶನಿವಾರದ ಒಡೆಯ ಶನಿಮಹಾದೇವನು ಸಂತೋಷಗೊಳ್ಳುತ್ತಾನೆ ಏಕೆಂದರೆ ಅರಳಿ ವೃಕ್ಷದಲ್ಲಿ ಶನಿದೇವನು ವಾಸ ಮಾಡುತ್ತಾನೆ.

ಶನಿವಾರದ ದಿನ ಅರಳಿಮರದ ಕೆಳಗೆ ದೀಪ ಹಚ್ಚುವುದರಿಂದ ರಾಹುಕೇತುಗಳು ಕೂಡ ಒಳ್ಳೆಯನ್ನ ಮಾಡುತ್ತವೆ. ಅರಳಿಮರದ ಕೆಳಗೆ ಕುಳಿತು ಹನುಮಾನ್ ಚಾಲೀಸಾ ಪಠಣೆಯನ್ನು ಮಾಡಿ ಆದರೇ ಎಲ್ಲರಿಗೂ ಕೇಳುವಂತೆ ಪಠಣೆ ಮಾಡಬೇಡಿ. ಈ ಈ ಮಂತ್ರದಿಂದ ಜೀವನದ ಸಂಕಷ್ಟಗಳು ದೂರವಾಗುತ್ತವೆ. ಯಾರಿಗೂ ಗೊತ್ತಾಗದಂತೆ ಈ ಉಪಾಯಗಳನ್ನು ಮಾಡಿ ಕೋಟಿಸಾಲವಿದ್ದರೂ ತೀರುತ್ತದೆ. astrology

Leave A Reply

Your email address will not be published.