Ultimate magazine theme for WordPress.

this lucky work ಬೆಳಗ್ಗೆ ಎದ್ದು ಇದನ್ನು ಮಾಡಿದರೆ ಹಣವಂತರಾಗ್ತೀರಿ

0 10,094

this lucky work in the morning can make rich ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದರೇ ಕೋಟ್ಯಾಧೀಶರಾಗುತ್ತೀರ ಎಂಬ ಕುತೂಹಲ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಗೃಹಿಣಿಯರು ಮನೆಯ ಬಾಗಿಲು ತೆಗೆದ ತಕ್ಷಣ ಈ ಕೆಲಸ ಮಾಡುವುದರಿಂದ ಮನೆಯ ಯಜಮಾನ ಕೋಟ್ಯಾಧೀಪತಿಯಾಗುವುದು ಖಚಿತ. ನಿಮ್ಮ ಮನೆಯ ಆರ್ಥಿಕ ಸಂಕಷ್ಟ ದೂರವಾಗುತ್ತದೆ. ಜೀವನದಲ್ಲಿ ಯಾವುದೇ ತೊಂದರೆಗಳು ಬರುವುದಿಲ್ಲ.

ಹಾಗಾದರೇ ಏನಿಲ್ಲಾ ಮಾಡಿದರೇ ಇದೆಲ್ಲಾ ಸಾಧ್ಯವಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಮನೆಯ ಮುಖ್ಯಬಾಗಿಲಿಗೆ ಅತ್ಯಂತ ಮಹತ್ತ್ವವಿದೆ. ಮನೆಯ ಇತರೆ ಬಾಗಿಲಿಗಿಂತಲೂ ದೊಡ್ಡದಾಗಿರಬೇಕು. ಯಾವಾಗಲೂ ಮುಖ್ಯದ್ವಾರವನ್ನು ಸ್ವಚ್ಛವಾಗಿ ಶುಭ್ರವಾಗಿ ಇಟ್ಟುಕೊಳ್ಳಬೇಕು. ಇದರಿಂದ ವಾಸ್ತುದೋಷಗಳು ಉಂಟಾಗುವುದಿಲ್ಲ ಮತ್ತು this lucky work

ಈ ಮುಖ್ಯದ್ವಾರದಿಂದಲೇ ಶ್ರೀಮಹಾಲಕ್ಷ್ಮಿ ಒಳಗೆ ಬರುವುದು. ಮನೆಯ ಮುಖ್ಯದ್ವಾರ ಸರಿಯಾದ ದಿಕ್ಕಿನಲ್ಲಿ, ಸರಿಯಾದ ರೀತಿ ಇರುವುದು ಬಹಳ ಮುಖ್ಯ. ಆದ್ದರಿಂದ ಎಲ್ಲಾ ವಾಸ್ತು ವಿಷಯಗಳನ್ನು ಪಾಲಿಸಿದರೇ ಮುಖ್ಯಬಾಗಿಲನ್ನು ಇರಿಸಬೇಕು. ಗೃಹಿಣಿಯರು ಬೆಳಿಗ್ಗೆ ಎದ್ದ ತಕ್ಷಣ ಮುಖ್ಯಬಾಗಿಲನ್ನು ಶುಚಿಗೊಳಿಸಿ ನೀರನ್ನು ಸಿಂಪಡಿಸಬೇಕು.

ಗಂಗಾಜಲದ ನೀರನ್ನು ಸಿಂಪಡಿಸಿದರೇ ಅತೀ ಉತ್ತಮ. ಇದು ಇಲ್ಲವಾದರೇ ಶುದ್ಧವಾದ ನೀರನ್ನು ಸಿಂಪಡಿಸಬೇಕು. ಇದು ಮನೆಯ ಸುಖ, ನೆಮ್ಮದಿಯನ್ನು ಕಾಪಾಡಿಕೊಂಡು ಬರುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರದ ದಿನ ಮನೆಯ ಮುಖ್ಯಬಾಗಿಲನ್ನು ನೀರಿನಿಂದ ತೊಳೆದು ಪೊರಕೆಯಿಂದ ಗುಡಿಸಬೇಕು. ಪ್ರತಿದಿನ ಹೀಗೆ ಮಾಡುವುದು ತುಂಬಾ ಒಳ್ಳೆಯದು. this lucky work

ಶಾಸ್ತ್ರಗಳ ಪ್ರಕಾರ ನಿಮ್ಮ ಮನೆಗೆ ಮಾಟಮಂತ್ರ ಮಾಡಿಸಿದರೇ ಅದು ನಿಮ್ಮ ಮನೆಯ ಒಳಗಡೆ ಬರುವುದಿಲ್ಲ ಮತ್ತು ಯಾರು ಇದನ್ನು ಮಾಡಿಸಿರುತ್ತಾರೋ ಅವರಿಗೆಯೇ ಇದು ತಟ್ಟುತ್ತದೆ. ಮನೆಯ ಬಾಗಿಲಿಗೆ ಹಳದಿ, ಕೆಂಪು, ಮೆರುನ್ ಕಲರ್ ಅನ್ನು ಪೈಂಟ್ ಮಾಡಿಸಿದರೇ ತುಂಬಾ ಒಳ್ಳೆಯದು. ನಿಮಗೆ ಗೊಂದಲವಿದ್ದರೇ ವಾಸ್ತುತಜ್ಞರ ಬಳಿ ಹೋಗಿ ಸಲಹೆಯನ್ನು ಪಡೆದುಕೊಳ್ಳಬಹುದು.

ಮನೆಯನ್ನು ಗುರುವಾರ ಬಿಟ್ಟು ಪ್ರತಿನಿತ್ಯ ನೆಲ ಹೊರೆಸುವುದು ಉತ್ತಮವಾಗಿದೆ. ಮನೆಯ ನೆಲವನ್ನು ಹೊರೆಸುವ ನೀರಿನಲ್ಲಿ ಉಪ್ಪನ್ನು ಹಾಕಿ. ಮನೆಯಿಂದ ನೆಗೆಟಿವ್ ಎನರ್ಜಿ ತೊಲಗಿ, ಶ್ರೀಮಹಾಲಕ್ಷ್ಮಿ ಬರುತ್ತಾಳೆ. ಸೋಮವಾರದ ದಿನ ನಿಮ್ಮ ಮನೆಯ ಮುಖ್ಯಬಾಗಿಲಿಗೆ ಹಸಿರು ಎಲೆಯ ಮಾವಿನ ತೋರಣವನ್ನು ಹಾಕಬೇಕು ಇದು ತುಂಬಾ ಶುಭವನ್ನು ತರುತ್ತದೆ.

ಪ್ರತಿ ಸೋಮವಾರ ಇದನ್ನು ಬದಲು ಮಾಡಿ ಹೊಸ ಮಾವಿನ ತೋರಣವನ್ನು ಕಟ್ಟಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರೋಗ್ಯದ ಸಮಸ್ಯೆ ಉಂಟಾಗುವುದಿಲ್ಲ. ಅಶ್ವಥ ವೃಕ್ಷದ ಎಲೆಯಿಂದ ಮಾಡಿದ ತೋರಣವನ್ನು ಮನೆಯ ಬಾಗಿಲಿಗೆ ಹಾಕಿದರೇ ನಿಮ್ಮ ಮನೆಯಲ್ಲಿರುವ ಹಣದ ಸಮಸ್ಯೆ ಕ್ರಮೇಣ ನಿವಾರಣೆಯಾಗುತ್ತದೆ. ಸೋಮವಾರದ ದಿನ ಮಾವಿನತೋರಣವನ್ನು

ಕಟ್ಟುವುದರಿಂದ ಆರೋಗ್ಯದ ಸಮಸ್ಯೆ ಇರುವುದಿಲ್ಲ. ಮನೆಯ ಬಾಗಿಲಿಗೆ ಗಣೇಶನ ಫೋಟೋವನ್ನು ಹಾಕಿ ಇದನ್ನು ಹೇಗೆ ಹಾಕಬೇಕು ಎಂದರೆ ಗಣೇಶನ ಬೆನ್ನು ಹೊರಗೆ ಇರುವಂತೆ ನೋಡಿಕೊಳ್ಳಿ. ಗಣೇಶನ ಬೆನ್ನಿನ ಹಿಂದೆ ದರಿದ್ರತೆ ಇರುವುದರಿಂದ ಗಣೇಶನ ಬೆನ್ನು ಹೊರಕ್ಕೆ ಇರುವಂತೆ ಹಾಕಿ. ಕೆಲವರು ಮನೆಯ ಬಾಗಿಲ ಮೇಲೆ ಹಾಕುತ್ತಾರೆ ಇದು ಸರಿಯಲ್ಲ. ಮನೆಯಲ್ಲಿ ಎಲ್ಲಿ ಬೇಕಾದಲ್ಲಿ ದೇವರ ಫೋಟೋಗಳನ್ನು ಹಾಕಬೇಡಿ. ಉತ್ತರ, ಪೂರ್ವ ಸ್ಥಳದಲ್ಲಿ ಪೂಜಾ ಕೋಣೆಯನ್ನು ಮಾಡಿ ಅಲ್ಲಿಯೇ ದೇವರ ಫೋಟೋಗಳನ್ನು ಇಡಿ.

ಮನೆಯ ಗೋಡೆಗಳ ಮೇಲೆ ಪ್ರಾಣಗಳ ಚಿತ್ರಗಳನ್ನು ಹಾಕಬೇಡಿ. ಗೋಲಗೊಮ್ಮಟ, ತಾಜ್ ಮಹಲ್ , ಜಲಪಾತದಂತಹ ಚಿತ್ರಗಳನ್ನು ಮನೆಯಲ್ಲಿ ಹಾಕಬಾರದು. ಏಕೆಂದರೆ ನಿಮ್ಮ ಮನೆಯ ಹಣ ಜಲಪಾತದಂತೆ ಹರಿದು ಹೋಗುತ್ತದೆ. ಮನೆಯ ಮುಖ್ಯಬಾಗಿಲಿನ ಎರಡು ಬದಿಗೂ ಸ್ವಸ್ತಿಕ ಚಿಹ್ನೆಯನ್ನು ಬರೆಯಿರಿ. ತುಪ್ಪ ಅಥವಾ ಸಾಸಿವೆ ಎಣ್ಣೆಯಿಂದ ಸಿಂಧೂರವನ್ನು ಬಳಸಿ ಚಿಕ್ಕ, ಚಿಕ್ಕ ಸುಂದರವಾದ ಸ್ವಸ್ತಿಕ್ ಚಿಹ್ನೆಯನ್ನು ಮಾಡಿ.

ಚಿಹ್ನೆಗಳಿಗೆ ಎರಡು ಗೆರೆಗಳನ್ನು ಎಳೆಯಬೇಕು. ಹೀಗೆ ಮಾಡುವುದರಿಂದ ಲಕ್ಷ್ಮಿದೇವಿಗೆ ಬಂಧನವನ್ನು ಹಾಕಿದಂತೆ ಮತ್ತು ಹೊಸ್ತಿಲ ಮಧ್ಯಭಾಗದಲ್ಲಿ ಅಕ್ಷತೆಯಿಂದ ಓಂ ಬರೆಯಿರಿ. ಅರಿಶಿಣ ಮತ್ತು ಅಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟು ಅದರಿಂದ ಓಂ ಬರೆಯಿರಿ. ಇದರಿಂದ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಮುಖ್ಯದ್ವಾರದ ಮುಂದೆ ತುಳಸಿ ಗಿಡವನ್ನು ನೆಡಿರಿ ಇದರಿಂದ ಆರೋಗ್ಯ ಸಮಸ್ಯೆ ಬರುವುದಿಲ್ಲ. this lucky work

ಮನೆಯ ಮುಂದೆ ಜಾಗವಿದ್ದರೇ ಬಿಳಿಎಕ್ಕದ ಗಿಡವನ್ನು ನೆಡಿರಿ, ಇದರಿಂದ ಶತೃಗಳ ಕಾಟವಿರುವುದಿಲ್ಲ. ಮನೆ ಕಾಂಪೌಂಡ್ ಗಳಲ್ಲಿ, ಮನೆಯ ಮೇಲೆ ಅಶ್ವಥ ಮರ ಬೆಳೆಯದಂತೆ ನೋಡಿಕೊಳ್ಳಿ. ಇದು ಮನೆಗೆ ಒಳ್ಳೆಯದಲ್ಲ. ನಿಮ್ಮ ಮನೆಗೆ ಮನಿಪ್ಲಾಂಟ್ ಅನ್ನು ದಕ್ಷಿಣ ದಿಕ್ಕಿನಲ್ಲಿ ಹಾಕಿ.

ಇದರಿಂದ ಹಣ ಹರಿದು ಬರುತ್ತದೆ. ಮನೆಗಳಲ್ಲಿ ಪಾಟ್ ಗಳಲ್ಲೇ ಗಿಡಗಳನ್ನು ನೆಡಬೇಕು.ಬೆಳಿಗ್ಗೆ ಎದ್ದ ತಕ್ಷಣ ಮುಖ ತೊಳೆದುಕೊಂಡು ತುಳಸಿ ಗಿಡದ ದರ್ಶನ ಮಾಡುವುದರಿಂದ ಆ ದಿನ ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ಜಯ ಇರುತ್ತದೆ ಹಾಗೂ ಎಂದಿಗೂ ಹಣಕಾಸಿನ ಕೊರತೆ ಆಗುವುದಿಲ್ಲ.

Leave A Reply

Your email address will not be published.