work ನೀವು ಅಂದುಕೊಂಡಂತಹ ಕೆಲಸಗಳು ಆಗುತ್ತಿಲ್ಲವೇ?
work Are things not working out as you thought? ನೀವು ಅಂದುಕೊಂಡಂತಹ ಕೆಲಸಗಳು ಆಗುತ್ತಿಲ್ಲವೇ? ಯಾವುದೇ ಕೆಲಸ ಮಾಡಿದರೂ ಕೈಗೆ ಬಂದ ತುತ್ತು ಬಾಯಿಗೆ ಬರದೇ ಹತಾಶೆ ಕಾಡುತ್ತಿದೆಯಾ ಎಷ್ಟೇ ಸಂಪಾದನೆ ಮಾಡಿದರೂ ಹಣ ಕೈಯಲ್ಲಿ ನಿಲ್ಲಲ್ಲ ಎನ್ನುವವರು, ಶತೃಗಳ ಕಾಟವಿದೆ ಅಕ್ಕಪಕ್ಕದವರ ದೃಷ್ಠಿ ಇದೆ, ನರದೃಷ್ಠಿಯಿಂದ ಜೀವನದಲ್ಲಿ ಅಭಿವೃದ್ಧಿ ಇಲ್ಲವೆಂದರೆ ನಾವು ಈ ಲೇಖನದಲ್ಲಿ ಕಪ್ಪು ದಾರದ ಮೂಲಕ ಪರಿಹಾರ ಮಾಡಿಕೊಳ್ಳಬಹುದಾದ ಉಪಾಯವನ್ನು ತಿಳಿಸುತ್ತೇನೆ.
ಸಕಲ ನಕಾರಾತ್ಮಾಕ ಶಕ್ತಿಗಳು ದೂರವಾಗಿ ಸಕಾರಾತ್ಮಕ ಶಕ್ತಿಯು ನಿಮ್ಮಲ್ಲಿ ತುಂಬುವುದು ಖಚಿತ. ಅನೇಕರು ಕಪ್ಪುದಾರವನ್ನು ಕಾಲಿಗೆ ಅಥವಾ ಕುತ್ತಿಗೆಗೆ ಕಟ್ಟಿಕೊಳ್ಳುತ್ತಾರೆ. ಕಪ್ಪುದಾರ ಕೆಟ್ಟ ಕಣ್ಣು ಅಥವಾ ನಕಾರಾತ್ಮಕ ಶಕ್ತಿಯಿಂದ ರಕ್ಷಣೆಯನ್ನು ನೀಡುತ್ತದೆ. ಹಾಗೆಯೇ ಕಪ್ಪು ಬಣ್ಣದ ಬಟ್ಟೆ ಧರಿಸುವುದು ಹಾಗೂ ಕಪ್ಪುಬಣ್ಣದ ಬಳಕೆಯು ಅಶುಭವೆಂಬುದು ನಮ್ಮಲ್ಲಿದೆ. work
ಆದರೆ ಕೆಟ್ಟ ದೃಷ್ಠಿ ವಿಚಾರ ಬಂದಾಗ ಜನರು ಕಪ್ಪು ದಾರದ ಮೊರೆ ಹೋಗುತ್ತಾರೆ. ಕಪ್ಪುದಾರದಲ್ಲಿ ನಿಗೂಢ ಶಕ್ತಿಗಳು ಅಡಗಿವೆ ಎಂದು ನಂಬಲಾಗುತ್ತದೆ. ಕೆಲವು ಧರ್ಮ ಪುರಾಣಗಳಲ್ಲಿ ಇದರ ಬಗ್ಗೆ ಹೇಳಲಾಗಿದೆ. ವ್ಯಕ್ತಿ ಮೇಲೆ ಕೆಟ್ಟ ದೃಷ್ಠಿ ಬಿದ್ದಿದ್ದರೆ ಆತನ ಕೊರಳಿಗೆ ಅಥವಾ ಕಾಲಿಗೆ ಕಪ್ಪುದಾರವನ್ನು ಕಟ್ಟಬೇಕು. ಅಂತಹ ವ್ಯಕ್ತಿಗಳಲ್ಲಿ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ.
ಕಪ್ಪುಬಣ್ಣ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಕಪ್ಪುದಾರ ವ್ಯಕ್ತಿಗೆ ಕವಚದ ರೂಪದಲ್ಲಿ ಭದ್ರತೆಯನ್ನು ನೀಡುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕಪ್ಪುದಾರಕ್ಕೆ ವಿಶಿಷ್ಟವಾದ ಮಹತ್ವವಿದೆ. ಯಾರ ಜಾತಕದಲ್ಲಿ ಶನಿಯ ಪ್ರಭಾವ ಹೆಚ್ಚಿದಿಯೋ ಅವರು ಕಪ್ಪುದಾರವನ್ನು ಧರಿಸಬೇಕಂತೆ ಇದು ಶನಿದೋಷದಿಂದ ರಕ್ಷಣೆಯನ್ನು ನೀಡುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕಪ್ಪುದಾರವನ್ನು ಧರಿಸಲಾಗುತ್ತದೆ. work
ಕಪ್ಪುದಾರವನ್ನು ಧಾರಣೆ ಮಾಡಿದ ವ್ಯಕ್ತಿಯ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೆ. ಮಂಗಳವಾರ ಅಥವಾ ಶನಿವಾರ ಕಪ್ಪುದಾರವನ್ನು ತೆಗೆದುಕೊಂಡು ಆಂಜನೇಯ ದೇವಾಸ್ಥಾನಕ್ಕೆ ಹೋಗಿ ಯಾರಿಗೂ ಕಾಣದಂತೆ ಕಣ್ಣುತಪ್ಪಿಸಿ ದಾರಕ್ಕೆ ಒಂಭತ್ತು ಗಂಟನ್ನು ಹಾಕಬೇಕು. ಆಂಜನೇಯನ ಕಾಲಿನ ಬಳಿ ಇರುವ ಕೇಸರಿಯನ್ನು ಈ ದಾರಕ್ಕೆ ಹಚ್ಚಿ ಅದನ್ನು ಮನೆಗೆ ತಂದು ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು.
ಈ ರೀತಿ ಮಾಡುತ್ತಾ ಬಂದರೆ ಮನೆಯ ಆಗಿರುವ ದೃಷ್ಠಿದೋಷಗಳು ಮತ್ತು ಮನೆಯ ಯಜಮಾನ, ಸದಸ್ಯರಿಗೆ ಆಗಿರುವ ದೃಷ್ಠಿದೋಷಗಳು ತೊಲಗಿ ಅದೃಷ್ಠ ಕೈಗೂಡುವುದು ಖಚಿತ. ಈ ವಿಶೇಷ ಕಪ್ಪುದಾರದಿಂದ ಈ ಕೆಲಸವನ್ನು ಮಾಡಿ ಬನ್ನಿ ಆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದರೆ, work
ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳು ಕಂಡುಬರುತ್ತಿದ್ದರೆ ಅವರ ಎಡಗಾಲಿಗೆ ಕಪ್ಪುದಾರವನ್ನು ಅಥವಾ ಕುತ್ತಿಗೆಗೆ ಕಪ್ಪುದಾರವನ್ನು ಒಮ್ಮೆ ಕಟ್ಟಿನೋಡಿ ಅಮಾವಾಸ್ಯೆ ಹುಣ್ಣಿಮೆಯ ದಿನ ಅತೀ ಹೆಚ್ಚು ನಕಾರಾತ್ಮಕ ಶಕ್ತಿಗಳು ಮನುಷ್ಯನನ್ನು ಆವರಿಸುತ್ತಿರುತ್ತವೆ. ಅಂತಹವರು ಕೂಡ ಕಪ್ಪುದಾರ ಬಳಕೆ ಮಾಡಿದರೆ ಒಳಿತಾಗುತ್ತದೆ.