Ultimate magazine theme for WordPress.

miracle ಬಿಳಿ ಬಣ್ಣದ ಈ ವಸ್ತು ಮನೆಲಿದ್ರೆ ನೀವು ಅಂದುಕೊಂಡಿದ್ದು ನಡೆಯುತ್ತೆ

0 508

miracle rock sugar miracle in astrology ನಾವು ಈ ಲೇಖನದಲ್ಲಿ ಬಿಳಿ ಬಣ್ಣದ ಈ ವಸ್ತು ಮನೆಯಲ್ಲಿ ಇದ್ದರೆ ಕೋಟ್ಯಾಧಿಪತಿ ಆಗುತ್ತಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಗುರುಗಳ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲೆ ಇದ್ದರೆ, ಜೀವನದಲ್ಲಿ ಸಕಲ ಭೋಗ ಭಾಗ್ಯ ಗಳು ನಮ್ಮದಾಗುತ್ತದೆ. ಕಲ್ಲು ಸಕ್ಕರೆ ಅಂದರೆ ಯಾರಿಗೆ ಇಷ್ಟ ಇಲ್ಲ , ಕಲ್ಲು ಸಕ್ಕರೆ ಎಲ್ಲರಿಗೂ ಅಚ್ಚುಮೆಚ್ಚು. ಭಗವಂತನಾದ ಶ್ರೀ ಕೃಷ್ಣ ನಿಗೂ ಕೂಡ ಕಲ್ಲು ಸಕ್ಕರೆ ಅಂದರೆ ಅಚ್ಚುಮೆಚ್ಚು. ಜ್ಯೋತಿಷ್ಯ ಶಾಸ್ತ್ರದಲ್ಲೂ ಕೂಡ ಕಲ್ಲು ಸಕ್ಕರೆ ಅಥವಾ ಸಕ್ಕರೆಯನ್ನು ಬಳಸುವುದು ,

ಹಲವಾರು ಸಮಸ್ಯೆಗಳ ನಿವಾರಣೆಗೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ . ಜ್ಯೋತಿಷ್ಯದಲ್ಲಿ ಕಲ್ಲು ಸಕ್ಕರೆಯೂ ಶುಕ್ರ ಗ್ರಹಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ .ಸಕ್ಕರೆ ಅಥವಾ ಕಲ್ಲು ಸಕ್ಕರೆಯನ್ನು ಮಿತವಾಗಿ ಬಳಸುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯು ಬಲವಾಗುತ್ತದೆ. ಮತ್ತು ಕಲ್ಲು ಸಕ್ಕರೆ ನಿಮ್ಮ ದೇಹಕ್ಕೆ ಶಕ್ತಿ ಮತ್ತು ಉತ್ಸಾಹವನ್ನು ನೀಡುತ್ತದೆ .ಎಂದು ಹೇಳಲಾಗಿದೆ. miracle

ಇನ್ನು ಸಕ್ಕರೆಯಿಂದ ನಮ್ಮ ಕೆಲವು ಸಮಸ್ಯೆಗಳನ್ನು ಕೂಡ ಬಗೆಹರಿಸಿಕೊಳ್ಳಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಸಕ್ಕರೆಯ ಪ್ರಯೋಜನಗಳ ಬಗ್ಗೆ ನಾವು ಈಗ ತಿಳಿದುಕೊಳ್ಳೋಣ. ಮೊದಲನೆಯದಾಗಿ ಊಟದ ನಂತರ ಸಕ್ಕರೆ ಅಥವಾ ಕಲ್ಲು ಸಕ್ಕರೆಯನ್ನು ನಿಯಮಿತವಾಗಿ ಸೇವಿಸುವುದು ತುಂಬಾ ಪ್ರಯೋಜನಕಾರಿ. ಇದು ಮಾತಿನಲ್ಲಿ ಮಾಧುರ್ಯ ಮತ್ತು ನಿಮ್ಮ ಪ್ರಭಾವವನ್ನು ಹೆಚ್ಚಿಸುತ್ತದೆ. ಕಲ್ಲು ಸಕ್ಕರೆಯನ್ನು ಬಳಸುವುದರಿಂದ ಜಾತಕದಲ್ಲಿ ಶುಕ್ರ ಗ್ರಹದ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳಲಾಗಿದೆ . miracle

ಶುಕ್ರನ ಮಂಗಳಕರ ಪರಿಣಾಮವು ನಿಮ್ಮ ವೈವಾಹಿಕ ಜೀವನದಲ್ಲಿ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಹಣಕಾಸಿನ ಪರಿಸ್ಥಿತಿ ಉತ್ತಮ ಮತ್ತು ಲಾಭ ದಾಯಕವಾಗಲು ಅನುಕೂಲವಾಗುತ್ತದೆ, ಲಾಭ ಸ್ಥಾನದಲ್ಲಿರುವ ಶುಕ್ರನು ಹಣದ ಕೊರತೆಯನ್ನು ಕೊನೆಗೊಳಿಸುವ ಮೂಲಕ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಗೊಳ್ಳುವ ಹಾಗೆ ಮಾಡುತ್ತಾನೆ. ಧಾರ್ಮಿಕ ಸಂಪ್ರದಾಯದಲ್ಲಿ ಕಲ್ಲು ಸಕ್ಕರೆಯನ್ನು ಲಕ್ಷ್ಮೀ ದೇವಿಗೆ ಅತ್ಯಂತ ಪ್ರಿಯವಾದ ವಸ್ತು ಎಂದು ಹೇಳಲಾಗಿದೆ.

ಲಕ್ಷ್ಮಿ ದೇವಿಗೆ ನಿಯಮಿತವಾಗಿ ಕಲ್ಲು ಸಕ್ಕರೆಯನ್ನು ಅರ್ಪಿಸಿ ನಂತರ ಅದನ್ನು ಕುಟುಂಬದ ಸದಸ್ಯರಿಗೆ ಹಂಚಿ ನೀವು ಕೂಡ ಸೇವಿಸಿದರೆ , ಸಂಬಂಧಗಳ ಜೊತೆಗೆ ಕುಟುಂಬದಲ್ಲಿ ಸಂತೋಷವೂ ಕೂಡ ಹೆಚ್ಚಾಗುತ್ತದೆ. ಲಕ್ಷ್ಮೀದೇವಿಯ ಕೃಪೆ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ. ಹಾಗಾಗಿ ದೈನಂದಿನ ಪೂಜೆಯಲ್ಲಿ ಒಮ್ಮೆಯಾದರೂ ದೇವರಿಗೆ ಕಲ್ಲು ಸಕ್ಕರೆಯನ್ನು ಅರ್ಪಿಸುವುದು ಸೂಕ್ತ.ಇದು ಪತಿಯು ಪ್ರತಿ ಶುಕ್ರವಾರ ತನ್ನ ಪತ್ನಿಗೆ ಸುಂದರವಾದ ಪರಿಮಳ ಯುಕ್ತವಾದ ಹೂಗಳನ್ನು , miracle

ಮತ್ತು ಸುಗಂಧ ದ್ರವ್ಯಗಳನ್ನು ತಂದು ಕೊಡಬೇಕು. ಜೊತೆಗೆ ಬೆಳ್ಳಿ ಬಟ್ಟಲಲ್ಲಿ ಮತ್ತು ಬೆಳ್ಳಿ ಚಮಚದಲ್ಲಿ ಮೊಸರನ್ನು ಮತ್ತು ಸಕ್ಕರೆಯನ್ನು ಬೆರೆಸಿ ಹೆಂಡತಿಗೆ ಕೊಡಬೇಕು. ಈ ಉಪಾಯವನ್ನು ಮಾಡುವುದರಿಂದ ಪತಿ-ಪತ್ನಿಯರಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಇದರಿಂದ ವಿವಾಹ ವಿಚ್ಛೇದನ ಬಯಸುವ ಸಂಗಾತಿಗಳ ಮನಸ್ಸು ಕೂಡ ಬದಲಾಗುವ ಸಾಧ್ಯತೆ ಇದೆ.

ಪ್ರತಿ ಶುಕ್ರವಾರ ಹೀಗೆ ಮಾಡುವುದರಿಂದ ದಾಂಪತ್ಯ ಜೀವನ ಬಹಳ ಸಂತೋಷ ವಾಗಿರುತ್ತದೆ. ಅದೇ ರೀತಿ ಸೋಂಪು ಕಾಳಿನ ಜೊತೆ ಕಲ್ಲು ಸಕ್ಕರೆ ಬೆರೆಸಿ ತಿನ್ನುವುದರಿಂದ ಜಾತಕದಲ್ಲಿನ ರಾಹುವಿನ ಪ್ರತಿಕೂಲ ಪರಿಣಾಮಗಳು ನಿವಾರಣೆಯಾಗುತ್ತದೆ .ಮತ್ತು ಜೀರ್ಣಶಕ್ತಿ ಬಲಗೊಳ್ಳುತ್ತದೆ. ಇದು ಜಾತಕದಲ್ಲಿ ಬುಧ ಗ್ರಹದ ಸ್ಥಾನವನ್ನು ಬಲಗೊಳಿಸುತ್ತದೆ .ಮತ್ತು ಧನಾತ್ಮಕ ಚಿಂತನೆ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮಕ್ಕಳಿಗೆ ಪ್ರತಿದಿನ ಸೋಂಪು ಕಾಳು ಮತ್ತು ಕಲ್ಲು ಸಕ್ಕರೆಯನ್ನು ನೀಡಿದರೆ ನೆನಪಿನ ಶಕ್ತಿ ಕೂಡ ಬಲಗೊಳ್ಳುತ್ತದೆ.
ಮತ್ತು ಓದಿನಲ್ಲಿ ಏಕಾಗ್ರತೆ ಕೂಡ ಹೆಚ್ಚಾಗುತ್ತದೆ . miracle

ಹಿಂದೂ ಧರ್ಮದಲ್ಲಿ ಪೂಜೆಯ ಸಮಯದಲ್ಲಿ ಸುಗಂಧವನ್ನು ವಿಶೇಷ ಪ್ರಾಮುಖ್ಯತೆ ಎಂದು ಪರಿಗಣಿಸಲಾಗುತ್ತದೆ. ದೈನಂದಿನ ಪೂಜೆ ಅಥವಾ ಯಾವುದೇ ಆಚರಣೆಯನ್ನು ಮಾಡುವಾಗ ಅಲ್ಲಿ ಕರ್ಪೂರದ ಆರತಿ ಅಥವಾ ಅಗರ ಬತ್ತಿಯನ್ನು ಬೆಳಗಿಸಲಾಗುತ್ತದೆ . ಹೀಗೆ ಮಾಡುವುದರಿಂದ ದೇವರು ಸಂತುಷ್ಟ ರಾಗುತ್ತಾರೆ ಅನ್ನುವ ನಂಬಿಕೆ ಇದೆ. ಪೂಜೆಯ ವೇಳೆ ವಿವಿಧ ಸುಗಂಧಗಳನ್ನು ಹೊಂದಿರುವ ಧೂಪ ದ್ರವ್ಯಗಳನ್ನು ಬಳಸಲಾಗುತ್ತದೆ. ಈ ರೀತಿ ಕರ್ಪೂರದ ಆರತಿ ಮತ್ತು ಆಗರ ಬತ್ತಿಯನ್ನು ಬೆಳಗುವುದರಿಂದ ಇನ್ನಷ್ಟು ಭಕ್ತಿಮಯ ಆಗುತ್ತದೆ .

ದೇವರ ಪೂಜೆಯ ಮೇಲೆ ಹೆಚ್ಚಿನ ಏಕಾಗ್ರತೆ ಹೊಂದಲು ಸಾಧ್ಯವಾಗುತ್ತದೆ. ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಧೂಪವನ್ನು ಸುಡುವುದರಿಂದ ಆಧ್ಯಾತ್ಮಿಕ ಪ್ರಯೋಜನಗಳ ಜೊತೆಗೆ ಇನ್ನು ಕೆಲವು ಆರೋಗ್ಯ ಪ್ರಯೋಜನಗಳು ಕೂಡ ಇದೆ. ಧನಾತ್ಮಕ ಶಕ್ತಿಯಿಂದ ಜೀವನದಲ್ಲಿ ಸಂತೋಷ ಶಾಂತಿ ಮತ್ತು ಪ್ರಗತಿ ಆಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಅಂಶ ಹೆಚ್ಚಾಗುತ್ತದೆ.

ಪ್ರತಿ ದಿನ ಧೂಪ ಕರ್ಪೂರವನ್ನು ಹಚ್ಚಬೇಕು ಎಂದು ಹೇಳಲಾಗುತ್ತದೆ. ಅದೇ ರೀತಿ ಮಗು ಮತ್ತು ಬಾಣಂತಿ ಇರುವ ಕೋಣೆಯಲ್ಲಿ ಹುಳ ಹುಪ್ಪಟೆ ಬಾರದಂತೆ ನೋಡಿಕೊಳ್ಳುವುದಕ್ಕೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚುವುದಕ್ಕೆ ಉತ್ತಮ ಪರಿಸರ ಉಂಟು ಮಾಡುವುದಕ್ಕೆ ‘, ಮಗು ಮತ್ತು ಬಾಣಂತಿಯ ಕೋಣೆಗೆ ಶಾಮ್ರಾಣಿ ಮತ್ತು ಧೂಪವನ್ನು ಹಾಕುವ ಪದ್ಧತಿ ಇದೆ .ಮಗುವಿನ ಕೊನೆಯಲ್ಲಿ ಶಾಮ್ರಾಣಿ ಮತ್ತು ಆಯುರ್ವೇದದ ರಾಳಗಳು ಮತ್ತು ಎಲೆಗಳಿಂದ ಹೊಗೆ ಹಾಡಿಸಿ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡಿ miracle

ಕೋಣೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲಾಗುತ್ತದೆ. ಹೆಚ್ಚುಮಹತ್ವವಾದ ಧೂಪವನ್ನು ಸಾಂಭ ಶಿವನ ಮುಂದೆ ಈ ರೀತಿ ಬೆಳಗುವುದರಿಂದ ನಿಮ್ಮ ಮನದ ಹಿಚ್ಛೆಗಳು ಪೂರ್ಣಗೊಳ್ಳುತ್ತವೆ . ಮೊದಲಿಗೆ ಒಂದು ಬೆರಣಿ ಯನ್ನು ತೆಗೆದುಕೊಂಡು ಅದರಲ್ಲಿ ಧೂಪ ಹಾಕಬೇಕು. ಈ ಧೂಪದ ಮೇಲೆ ಸ್ವಲ್ಪ ಕಲ್ಲು ಸಕ್ಕರೆ ಪುಡಿಯನ್ನು ಹಾಕಬೇಕು.ಹೀಗೆ ಕಲ್ಲು ಸಕ್ಕರೆ ಪುಡಿಯಿಂದ ಬರುವ ಧೂಪದ ಮುಂದೆ ಕೈ ಮುಗಿಯುತ್ತ ಈ ಮಂತ್ರವನ್ನು 108 ಬಾರಿ ಹೇಳಬೇಕು.

” ಓಂ ಅದೃಶ್ಯ ದೇವಾಾಯ ಮಂ ಕಾರ್ಯಂ ಸಿದ್ಧಿಂ ದೇಹಿ ಫಡ್ ಸ್ವಾಹ ” ಈ ಮಂತ್ರವನ್ನು 108 ಬಾರಿ ಭಕ್ತಿಯಿಂದ ಜಪಿಸಿದ ನಂತರ ನಿಮ್ಮ ಮನಸ್ಸಿನಲ್ಲಿರುವ ಆಸೆಯನ್ನು ಕೂಡ 108 ಬಾರಿ ಹೇಳಬೇಕು. ಹೀಗೆ ಮಾಡುವಾಗ ಒಂದೇ ಆಸೆಯನ್ನು ಮನದಲ್ಲಿ ಇಟ್ಟುಕೊಳ್ಳಬೇಕು. ಇನ್ನೊಂದು ಆಸೆಯನ್ನು ಇಟ್ಟುಕೊಳ್ಳಬಾರದು. ಅದನ್ನು ಮತ್ತೊಂದು ಸಾರಿ ಈಡೇರಿಸಿಕೊಳ್ಳಬೇಕು. ಧೂಪ ಹಾಕುವಾಗ ಒಂದೇ ಆಸೆಯ ಬಗ್ಗೆ ಯೋಚನೆ ಇರಬೇಕು. ಈ ಪ್ರಯೋಗ ಮಾಡುವ ಸಂದರ್ಭದಲ್ಲಿ, ಒಂದು ವಿಷಯ ನೆನಪಿನಲ್ಲಿ ಇಟ್ಟುಕೊಳ್ಳಬೇಕು. miracle

ಧೂಪ ಹಾಕಿ ಮಂತ್ರ ಹೇಳುವ ಸಮಯದಲ್ಲಿ ದೇವರ ಮನೆಯಲ್ಲಿ ಈಶ್ವರನ ಎದುರು ಒಂದು ತಾಮ್ರದ ಲೋಟದಲ್ಲಿ, ನೀರನ್ನು ಇಟ್ಟಿರಬೇಕು. ಧೂಪ ಹಾಕಿ ಮಂತ್ರ ಪಠನೆ ಹೇಳಿಕೊಂಡ ನಂತರ ಆ ಲೋಟದಲ್ಲಿರುವ ನೀರನ್ನ ಪ್ರಸಾದದ ರೂಪದಲ್ಲಿ ಸೇವಿಸಬೇಕು. ನಿಮ್ಮ ಮನದಲ್ಲಿ ಬಹಳಷ್ಟು ದೊಡ್ಡ ಮಟ್ಟದ ಆಸೆ ಇದ್ದರೆ, 21 ದಿನಗಳ ಈ ಪ್ರಯೋಗವನ್ನು ನಿರಂತರವಾಗಿ ಮಾಡಬೇಕು.

ಆದರೆ ಪ್ರತಿ ದಿನ ಒಂದೇ ಸಮಯದಲ್ಲಿ ಮಾಡಿದರೆ ಶೀಘ್ರ ಪ್ರತಿಫಲ ಸಿಗುತ್ತದೆ. ಪ್ರತಿದಿನ ಮುಂಜಾನೆ ಅಥವಾ ಸ್ನಾನದ ನಂತರ ದೇವರ ಮುಂದೆ ಯಾವಾಗಲೂ ಇಡುವಂತಹ ತಾಮ್ರದ ತಂಬಿಗೆಯನ್ನು ಸ್ವಚ್ಛಗೊಳಿಸಿ ಹೊಸ ನೀರನ್ನು ತುಂಬಿ ಇಡಬೇಕು. ದೇವರ ಪೂಜೆಗೆ ಅಕ್ಷತೆ ಇಡೋಕೆ,ದೀಪ ಬೆಳಗೋಕೆ ಹೀಗೆ ದೇವರ ವಿವಿಧ ಕಾರ್ಯಕ್ಕೆ ತಾಮ್ರದ ಪಾತ್ರೆ ಬಳಸುವುದು ಶ್ರೇಷ್ಠ . ಹಾಗೆಯೇ ದೇವರ ಮನೆಯಲ್ಲಿ ನಿತ್ಯವೂ ನಂದಾದೀಪ ಬೆಳಗುವ ಹಾಗೆ ನೋಡಿಕೊಂಡರೆ ಮನೆಯಲ್ಲಿ ಸಮೃದ್ಧಿ ಹಾಗೂ ಸಂತೋಷ ನೆಲೆ ಸುವುದರ ಜೊತೆಗೆ ಮನದ ಆಸೆಗಳು ಬೇಗ ನೆರವೇರುತ್ತವೆ ಎಂದು ಹೇಳಲಾಗುತ್ತದೆ.

Leave A Reply

Your email address will not be published.