Ultimate magazine theme for WordPress.

Astrology remedy ಬೆಳ್ಳುಳ್ಳಿ ಶ್ರೀಮಂತರನ್ನಾಗಿ ಮಾಡಬಲ್ಲದು

0 345

Astrology remedy ಎರಡು ಬೆಳ್ಳುಳ್ಳಿ ಎಸಳುಗಳು ಹಣವನ್ನು ಹೇಗೆ ಆಕರ್ಷಣೆ ಮಾಡುತ್ತವೆ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಪ್ರತಿಯೊಬ್ಬರಿಗೂ ಹಣವನ್ನು ಗಳಿಸುವ ಆಸೆ ಇರುತ್ತದೆ. ಆದರೇ ಬಹಳ ಜನ ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಕೂಡ ಹಣ ಗಳಿಸಲು ಸಾಧ್ಯವಾಗುತ್ತಿರುವುದಿಲ್ಲ. ದುಡಿದ ಹಣ ಕೈಯಲ್ಲಿ ನಿಲ್ಲುತ್ತಿರುವುದಿಲ್ಲ. ಇಂತಹ ಕಷ್ಟ ನಿಮಗೂ ಇದ್ದರೇ ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

ಶನಿವಾರದಂದು ಎರಡು ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ ಅದರ ಸಿಪ್ಪೆಯನ್ನು ಸುಲಿದು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಹಣದ ಕೊರತೆ ಉಂಟಾಗುವುದಿಲ್ಲ. ಇದರಿಂದ ದುಂದುವೆಚ್ಚಕ್ಕೂ ಕೂಡ ಕಡಿವಾಣ ಬೀಳುತ್ತದೆ. ಅದೇ ರೀತಿ ಮನೆಯಲ್ಲಿ ನಗು, ಸಂತೋಷ, ಶಾಂತಿ ನೆಲೆಸಿರಬೇಕೆಂದರೇ ಬೆಳ್ಳುಳ್ಳಿಯ ಉಪಾಯವನ್ನು ಮಾಡಿಕೊಳ್ಳಲೇಬೇಕು. Astrology remedy

ಇದಕ್ಕಾಗಿ ಶನಿವಾರದಂದು ಏಳು ಎಸೆಳು ಬೆಳ್ಳುಳ್ಳಿಯನ್ನು ಕಡ್ಡಿಯಲ್ಲಿ ಸಿಕ್ಕಿಸಿ ಮನೆಯ ಅಂಗಳ ಅಥವಾ ಟೆರೆಸ್ ಮೇಲೆ ಇಡಬೇಕು. ಹೀಗೆ ಮಾಡುವುದರಿಂದ ದೃಷ್ಠಿ ದೋಷ ನಿವಾರಣೆಯಾಗುತ್ತದೆ. ಜೊತೆಗೆ ಹಣದ ಸಮಸ್ಯೆಗೂ ಪರಿಹಾರ ಸಿಗುತ್ತದೆ. ಹದಿನೈದು ದಿನಗಳ ನಂತರ ಕಡ್ಡಿಗೆ ಚುಚ್ಚಿದ ಬೆಳ್ಳುಳ್ಳಿಗಳನ್ನು ಮರದ ಕೆಳಗಡೆ ಹಾಕಿ ಮತ್ತೆ ಹೊಸದಾದ ಬೆಳ್ಳುಳ್ಳಿ ಎಸಳುಗಳನ್ನು ಚುಚ್ಚಿ ಇರಿಸಬೇಕು. Astrology remedy

ಹೀಗೆ ಕ್ರಮವಾಗಿ ಮೂರು ತಿಂಗಳು ಅನುಸರಿಸಿದರೆ ಮನೆಯ ವಾತಾವರಣ ಪಾಸಿಟಿವ್ ಆಗಿ ಬದಲಾಗುತ್ತದೆ. ವ್ಯಾಪಾರದಲ್ಲಿ ಹಣಕಾಸಿನ ತೊಂದರೆಗಳು, ದೃಷ್ಟಿದೋಷ ಏನಾದರೂ ಅಡೆತಡೆಗಳು ಉಂಟಾದರೇ ಬೆಳ್ಳುಳ್ಳಿಯ ಉಪಾಯ ಬಹಳ ಸಹಾಯ ಮಾಡುತ್ತದೆ. ಶನಿವಾರದ ದಿನ ನಿಮ್ಮ ಅಂಗಡಿ ಮತ್ತು ನಿಮ್ಮ ಕಾರ್ಖಾನೆಯ ಮುಖ್ಯ ಗೇಟ್ ನಲ್ಲಿ ಐದು ಬೆಳ್ಳುಳ್ಳಿಯ ಎಸಳುಗಳನ್ನು ಕಟ್ಟಿ ಇಡಬೇಕು.

ಈ ಉಪಾಯ ಮಾಡುವುದರಿಂದ ವ್ಯಾಪಾರದಲ್ಲಿ ಏಳಿಗೆ ಆಗುತ್ತದೆ ಮತ್ತು ದೃಷ್ಟಿದೋಷ ತೊಲಗುತ್ತದೆ. ಮಕ್ಕಳು ನಿರಂತರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರೇ ಏಳು ಬೆಳ್ಳುಳ್ಳಿಯಿಂದ ದೃಷ್ಟಿ ತೆಗೆದು ಆ ಬೆಳ್ಳುಳ್ಳಿಯನ್ನು ಐದು ಕೆಂಪು ಮೆಣಸಿನಕಾಯಿಯ ಜೊತೆ ಸುಟ್ಟು ಹಾಕಬೇಕು ಇದರಿಂದ ಮಕ್ಕಳ ಮೇಲಿನ ದೃಷ್ಟಿ ದೋಷ ನಿವಾರಣೆಯಾಗಿ ಮಕ್ಕಳ ಅನಾರೋಗ್ಯ ಸಮಸ್ಯೆ ದೂರವಾಗುತ್ತದೆ ಆದರೇ ವೈದ್ಯಕೀಯ ಉಪಚಾರವನ್ನು ನಿಲ್ಲಿಸಬಾರದು.
ಹಣಕಾಸಿನ ಸಮಸ್ಯೆಯನ್ನ ಕಡಿಮೆ ಮಾಡುವ ಇನ್ನೊಂದು ಉಪಾಯವೇನೆಂದರೆ

ಈ ಪರಿಹಾರವನ್ನು ಶುಕ್ರವಾರ ಮಾಡಿಕೊಂಡರೆ ಒಳ್ಳೆಯದು. ಮೊದಲಿಗೆ ಮನೆಯನ್ನು ಸ್ವಚ್ಛಮಾಡಿಕೊಳ್ಳಬೇಕು ನಂತರ ಸ್ನಾನ ಮಾಡಬೇಕು. ಸ್ನಾನ ಮಾಡಿದ ನಂತರ ಒಂದು ಗಂಟೆಯ ಅಂತರದಲ್ಲಿ ಈ ಪರಿಹಾರವನ್ನು ಮಾಡಿಕೊಳ್ಳಬೇಕು. ಒಂದು ಎಸೆಳು ಬೆಳ್ಳುಳ್ಳಿಯನ್ನು ತೆಗೆದುಕೊಂಡು ತಲೆಯ ಸ್ನಾನ ಮಾಡಿಕೊಂಡು ಬಂದ ನಂತರ ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ಕೆಂಪುದಾರದಿಂದ ಕಟ್ಟಬೇಕು. Astrology remedy

ನಂತರ ಕೆಂಪುದಾರದಿಂದ ಸುತ್ತಿದ ಬೆಳ್ಳುಳ್ಳಿಯನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು ಮತ್ತು ಸಂಕಲ್ಪ ಮಾಡಿಕೊಳ್ಳಬೇಕು. ಆರ್ಥಿಕ ಸಮಸ್ಯೆ ದೂರವಾಗಿ, ಧನ ಸಂಪತ್ತು ವೃದ್ಧಿಯಾಗಲಿ ಎಂದು ಸಂಕಲ್ಪ ಮಾಡಿಕೊಳ್ಳಬೇಕು. ನಂತರ ಆ ಬೆಳ್ಳುಳ್ಳಿಯನ್ನು ಮನೆಯಲ್ಲಿ ಹಣವನ್ನು ಇಡುವ ಜಾಗದಲ್ಲಿ ಇಡಬೇಕು.

ತಿಂಗಳಿಗೊಮ್ಮೆ ಕೆಂಪುದಾರದಿಂದ ಕಟ್ಟಿದ ಬೆಳ್ಳುಳ್ಳಿಯನ್ನು ಬದಲಾಯಿಸಬೇಕು. ಹಳೆಯ ಬೆಳ್ಳುಳ್ಳಿಯನ್ನು ಯಾರು ಓಡಾಡದ ದಾರಿಯಲ್ಲಿ ಎಸೆಯಬೇಕು. ಈ ರೀತಿ ಮಾಡುವುದರಿಂದ ಆರ್ಥಿಕ ಸಮಸ್ಯೆಯು ದೂರವಾಗುತ್ತದೆ. ಬೆಳ್ಳುಳ್ಳಿಯ ಮಾಲೆಯನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟುವುದರಿಂದ ಕೆಟ್ಟ ಮನಸ್ಸಿನಿಂದ ಬರುವ ನಕಾರಾತ್ಮಕ ಯೋಚನೆಗಳನ್ನು ಈ ಮಾಲೆಯು ಹೀರಿಕೊಳ್ಳುತ್ತದೆ ಮತ್ತು ಮನೆಯ ಒಳಗಡೆ ಕೆಟ್ಟ ದೃಷ್ಟಿ ಪ್ರವೇಶ ಆಗದಂತೆ ನೋಡಿಕೊಳ್ಳುತ್ತದೆ. Astrology remedy

ಜೊತೆಗೆ ಹಣವಿರುವ ಪೆಟ್ಟಿಗೆಯ ನಾಲ್ಕು ಮೂಲೆಗೆ ನಾಲ್ಕು ಎಸೆಳು ಬೆಳ್ಳುಳ್ಳಿಯನ್ನು ನಾಲ್ಕು ದಿನಕ್ಕೆ ಒಮ್ಮೆ ಅಥವಾ ಹದಿನೈದು ದಿನಕ್ಕೆ ಒಂದು ಬಾರಿ ಇಡಬೇಕು. ಇದರಿಂದ ಆರ್ಥಿಕ ಸಮಸ್ಯೆಯು ಹೋಗುತ್ತದೆ. ಮನೆಯ ಸದಸ್ಯರು ಹೊರಗಡೆಯಿಂದ ಬರಬೇಕಾದರೇ ಏನಾದರೂ ನಕಾರಾತ್ಮಕ ಯೋಚನೆಯಿಂದ ಬಂದರೆ ಮನೆಯ ಮುಖ್ಯದ್ವಾರದ ಬಳಿ ಕಾಲನ್ನು ಹೊರೆಸುವ ಬಟ್ಟೆಯ ಕೆಳಗಡೆ ಒಂದು ಬೆಳ್ಳುಳ್ಳಿಯನ್ನು ಇಡುವುದರಿಂದ ಬೆಳ್ಳುಳ್ಳಿಯು ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಯನ್ನು ತನ್ನತ್ತ ಆಕರ್ಷಿಸುತ್ತದೆ.

ಅಷ್ಟೇ ಅಲ್ಲದೇ ಆ ವ್ಯಕ್ತಿಯಿಂದ ನಕಾರಾತ್ಮಕ ಶಕ್ತಿಯಿಂದ ದೂರಮಾಡುತ್ತದೆ. ಆಗೆಯೇ ಬೆಳ್ಳುಳ್ಳಿಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ರೋಗದಿಂದ ಮುಕ್ತಿಯನ್ನು ಕೊಡುವುದಲ್ಲದೇ ನವಗ್ರಹದೋಷದಿಂದಲೂ ನಿಮ್ಮನ್ನು ಕಾಪಾಡುತ್ತದೆ. ಪರ್ಸ್ ನಲ್ಲಿ ಬೆಳ್ಳುಳ್ಳಿಯನ್ನು ಇಟ್ಟುಕೊಳ್ಳುವುದರಿಂದ ವ್ಯಕ್ತಿಯ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ. ಜ್ಯೋತಿಷ್ಯದಲ್ಲಿ ಬೆಳ್ಳುಳ್ಳಿ ಮತ್ತು ಈರುಳ್ಳಿ ಕೇತುಗ್ರಹಕ್ಕೆ ಸಂಬಂಧಿಸಿದೆಂದು ನಂಬಲಾಗಿದೆ. ಕೇತುಗ್ರಹವು ವಾಮಚಾರಕ್ಕೆ ಸಂಬಂಧಿಸಿದೆ ಆದ್ದರಿಂದ ಸೂರ್ಯಾಸ್ತದ ನಂತರ ಬೆಳ್ಳುಳ್ಳಿ ಅಥವಾ ಈರುಳ್ಳಿಯನ್ನು ಬೇರೆಯವರಿಗೆ ಕೊಡಬಾರದು. ಸೂರ್ಯಾಸ್ತದ ನಂತರ ನೀವು ಕೊಟ್ಟಿದ್ದೇ ಆದರೇ ನಿಮ್ಮ ಮೇಲೆ ವಾಮಚಾರದಂತಹ ಪ್ರಭಾವ ಬೀರುತ್ತದೆ. Astrology remedy

Leave A Reply

Your email address will not be published.