Ultimate magazine theme for WordPress.

Meena Rashi ಫೆಬ್ರವರಿ ತಿಂಗಳಿನ ಮೀನ ರಾಶಿಯ ಮಾಸಭವಿಷ್ಯ

0 6,882

Meena Rashi Bhavishya February ಫೆಬ್ರವರಿ ತಿಂಗಳಿನ ಮೀನ ರಾಶಿಯ ಮಾಸಭವಿಷ್ಯವನ್ನು ತಿಳಿದುಕೊಳ್ಳೋಣ. ಈ ತಿಂಗಳಿನಲ್ಲಿ ಏನೆಲ್ಲಾ ಶುಭವಾಗಲಿದೆ? ಏನು ಲಾಭವಾಗುತ್ತಿದೆ? ಧನಪ್ರಾಪ್ತಿಯೋಗವಿದೆಯಾ? ಯಾವ ರೀತಿಯಲ್ಲಿ ಪ್ರಯತ್ನಪಟ್ಟಾಗ ಸಕ್ಸಸ್ ಎನ್ನುವುದು ಸಿಗುತ್ತದೆ? ನಿಮ್ಮ ಸಮಸ್ಯೆಗೆ ಪರಿಹಾರದ ಬಗ್ಗೆ ಸಂಪೂರ್ಣವಾದ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

ಗುರು ಗ್ರಹವು ಮೀನಾರಾಶಿಯ ರಾಶ್ಯಾಧಿಪತಿಯಾಗಿದೆ. ಹಳದಿ ಮತ್ತು ಹಸಿರು ಅದೃಷ್ಟದ ಬಣ್ಣವಾಗಿದೆ. ಗುರುವಾರ ಮತ್ತು ಬುಧವಾರ ಅದೃಷ್ಟದ ದಿನವಾಗಿರುತ್ತದೆ. ಅದೃಷ್ಟದ ದೇವರು ಶ್ರೀ ಮಹಾವಿಷ್ಣು ಆಗಿದೆ. ಅದೃಷ್ಟದ ಸಂಖ್ಯೆ 3,5,2,7, ಮತ್ತು 9 ಆಗಿದೆ. ಮಿತ್ರ ರಾಶಿ ಕಟಕ ಮತ್ತು ವೃಶ್ಚಿಕ ಆದರೇ ಶತೃ ರಾಶಿಗಳು ಮೇಷ, ಸಿಂಹ, ಧನಸ್ಸು ರಾಶಿಗಳಾಗಿವೆ. ಅದೃಷ್ಟದ ದಿನಾಂಕ 3,12,21 ಮತ್ತು 30 ಆಗಿದೆ. ಮೀನಾ ರಾಶಿಯವರು ಭಾವಜೀವಿಗಳಾಗಿರುತ್ತಾರೆ. ಮುಗ್ಧತೆ ಇರುವ ವ್ಯಕ್ತಿಗಳು, Meena Rashi

ಬೇರೆಯವರಿಗೆ ಸುಳ್ಳು ಹೇಳಬೇಕು, ಮೋಸ ಮಾಡಬೇಕು ಎನ್ನುವ ಭಾವನೆ ಇವರ ಹತ್ತಿರ ಇರುವುದಿಲ್ಲ. ಇವರನ್ನು ಯಾರು ಬೇಕಾದರೂ ಸುಲಭವಾಗಿ ನಂಬಬಹುದು, ನಂಬಿಕೆಗೆ ಅರ್ಹರಾಗಿರುತ್ತಾರೆ. ಮೀನರಾಶಿಯವರು ಧಾರ್ಮಿಕ ಆಸಕ್ತರು, ವಿನಯವಂತಿಕೆ ಇರುತ್ತದೆ. ಶಿಸ್ತಿಗೆ ಹೆಸರುವಾಸಿಯಾದವರಾಗಿರುತ್ತಾರೆ. ಅವಶ್ಯಕತೆ ಮತ್ತು ಅನುಕೂಲಕರವಾಗಿದ್ದರೇ ಮಾತ್ರ ಪ್ರಯಾಣ ಮಾಡಿ. ಬೇರೆಯವರಿಗೆ ನಿಮ್ಮ ಪ್ರಯಾಣದಿಂದ ಅನುಕೂಲಕರವಾಗುತ್ತದೆಯಾ? ಯೋಚಿಸಿ ಪ್ರಯಾಣ ಮಾಡಿ,

ಆದರೇ ಅನಾವಶ್ಯಕ ಪ್ರಯಾಣವನ್ನು ಮಾಡಬೇಡಿ.ಇಲ್ಲವೇ ಹಣ ಮತ್ತು ಸಮಯ ಎರಡು ವ್ಯರ್ಥವಾಗುತ್ತದೆ. ಮನೆಯ ಸದಸ್ಯರ ಮತ್ತು ಸ್ನೇಹಿತರ ಬಳಗದಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಇರುತ್ತವೆ. ಅದನ್ನು ಅಷ್ಟೇ ಸೂಕ್ಷ್ಮವಾಗಿ ಜಾಣತನದಿಂದ ಪರಿಹಾರ ಮಾಡಿಕೊಳ್ಳಬೇಕು. ಏನೇ ಸಮಸ್ಯೆ ಬಂದರೂ ಅದನ್ನು ಬಹಳ ಬೇಗ ಸೂಕ್ಷ್ಮವಾಗಿ ಬಗೆಹರಿಸಿಕೊಳ್ಳಬೇಕು. ಹಿರಿಯರ ಸಲಹೆಗಳಿಗೆ ಗೌರವಿಸಿ ಅದನ್ನು ಪಾಲಿಸಬೇಕಾಗುತ್ತದೆ. ಇದರಿಂದ ಬಹಳಷ್ಟು ಲಾಭಗಳಾಗುವ ಸಾಧ್ಯತೆಗಳು ಇವೆ.

ಈ ತಿಂಗಳಿನಲ್ಲಿ ವಾಹನ ಕೊಳ್ಳಬೇಕಾ? ಭೂಮಿ ಕೊಂಡುಕೊಳ್ಳಬೇಕಾ? ಬೆಲೆ ಬಾಳುವ ವಸ್ತುವನ್ನು ಕೊಂಡುಕೊಳ್ಳಬೇಕಾದರೇ ಯೋಚನೆ ಮಾಡಿ ಕೊಂಡುಕೊಳ್ಳಿ. ಸಾಲ ಮಾಡಿ ಏನನ್ನು ಕೊಂಡುಕೊಳ್ಳಬೇಡಿ. ಕೆಲಸದ ವಿಷಯದಲ್ಲಿ ಬೇರೆಯವರನ್ನು ನಂಬಿಕೊಳ್ಳಬೇಡಿ, ಇತರರನ್ನು ನಂಬಿದರೇ ನಷ್ಟ ಸಂಭವಿಸುವ ಸಾಧ್ಯತೆ ಇರುತ್ತದೆ. ಕಾಗದ ಪತ್ರಗಳು, ಮಧ್ಯಸ್ಥಿಕೆ ವ್ಯವಹಾರ ಮಾಡುವಂತದ್ದು, ಅಗ್ರಿಮೆಂಟ್ ಗೆ ಸಹಿ ಮಾಡುವಂತದ್ದು ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. Meena Rashi

ಕೋರ್ಟ್ ವಿಚಾರಗಳಲ್ಲಿ ಕೆಲಸ ಆಗಬೇಕಾದರೇ ವಿಳಂಬವಾಗಬಹುದು, ಪ್ರಯತ್ನ ನಿಲ್ಲಿಸಬೇಡಿ.
ನೀವು ಮಾಡುವ ಕೆಲಸದ ಕಡೆ ಸ್ಪರ್ಧೆ ಹೆಚ್ಚಾಗಿ ಇರುತ್ತದೆ. ನೀವು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಇರುತ್ತದೆ ಹಾಗಾಗಿ ನೀವು ಹೆಚ್ಚಾಗಿ ಗಮನವನ್ನು ಕೊಡಬೇಕಾಗುತ್ತದೆ. ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ. ಕೆಲವೊಂದು ಚಿಂತೆ ಇರುತ್ತದೆ ಅದನ್ನೆಲ್ಲಾ ಕೈ ಬಿಟ್ಟು ನೀವು ಮಾಡುವ ಕೆಲಸದ ಕಡೆ ಹೆಚ್ಚು ಗಮನವನ್ನು ಕೊಡಬೇಕಾಗುತ್ತದೆ.

ಆಗ ಮಾತ್ರ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು. ಉದ್ಯೋಗದಲ್ಲಿ ದೂರ ಪ್ರದೇಶಕ್ಕೆ ವರ್ಗಾವಣೆಯಾಗುವ ಅವಕಾಶವಿರುತ್ತದೆ. ವ್ಯಾಪಾರದಲ್ಲಿ ಎಚ್ಚರಿಕೆ ಇರಬೇಕು. ಏನೇ ಕೆಲಸ ಮಾಡಬೇಕಾದರೂ ಇಷ್ಟಪಟ್ಟು ಮಾಡಿ ಆಗ ಏನೇ ಸವಾಲುಗಳು ಇದ್ದರೂ ಅದನ್ನು ಎದುರಿಸುತ್ತೀರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರವೇನೆಂದರೆ ನಾಗದೇವತೆಗೆ ಕ್ಷೀರಾಭಿಷೇಕ ಮಾಡಿಸಿ ಮತ್ತು ಶ್ರೀ ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿಸುವುದರಿಂದ ನಿಮ್ಮ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಅದ್ಭುತವಾದ ಫಲಗಳು ಸಿಗುತ್ತವೆ.

Leave A Reply

Your email address will not be published.