Ultimate magazine theme for WordPress.

miracle ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ

0 3,270

miracle deepa astrology ದೀಪದಲ್ಲಿ ಇದನ್ನು ಯಾರಿಗೂ ತಿಳಿಯದಂತೆ ಹಾಕಿದರೇ ಕೇವಲ 24 ಗಂಟೆಗಳಲ್ಲಿ ಕಷ್ಟಗಳು ಪರಿಹಾರವಾಗುತ್ತದೆ ಎಂಬ ವಿಚಾರವನ್ನು ತಿಳಿಸಿಕೊಡುತ್ತೇವೆ. ನಮಗೆ ಗೊತ್ತಿಲ್ಲದಂತೆ ಅನೇಕ ವಿಚಾರಗಳು ನಮ್ಮ ಜೀವನದಲ್ಲಿ ನಡೆಯುತ್ತಿರುತ್ತವೆ. ನಾವು ಎಲ್ಲ ರೀತಿಯಿಂದಲೂ ಚೆನ್ನಾಗಿಯೇ ಇದ್ದೀವಿ ಎಂದುಕೊಳ್ಳುತ್ತಿರುತ್ತೀವಿ ಆದರೇ ಯಾವ ಸಮಯದಲ್ಲಿ ಏನು ಆಗುತ್ತವೆಯೋ ಏನೋ ಗೆಸ್ ಮಾಡದೇ ರೀತಿಯಲ್ಲಿ ಕಷ್ಟಗಳು ನಮ್ಮ ಎದುರುಗೆ ಬರುತ್ತವೆ. ಅವುಗಳನ್ನ ಎದುರಿಸುವುದೋ, ಬಗೆಹರಿಸುವುದೋ ಎಂಬ ಗೊಂದಲಕ್ಕೆ ಬೀಳುತ್ತೇವೆ.

ಮನೆಯಿಂದ ಹೊರಗಡೆ ಇದ್ದಾಗ ತುಂಬಾ ಲವಲವಿಕೆಯಿಂದ ಇರುತ್ತೀವಿ, ಮನೆ ಒಳಗೆ ಹೋದಾಗ ಅದೆಲ್ಲವೂ ಮಾಯವಾಗುತ್ತದೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಚಿಕ್ಕಪುಟ್ಟ ವಿಷಯಗಳಿಗೂ ಕೋಪ ಬರುತ್ತದೆ. ಒಂದು ವೇಳೆ ಅನಾರೋಗ್ಯ ಬಂದರೇ ಆ ರೋಗ ಎಂದಿಗೂ ಹೋಗುವುದಿಲ್ಲವೋ ಎನಿಸಿಬಿಡುತ್ತದೆ. ನಿಮ್ಮ ಕೆಲಸಗಳು ಮುಗಿದು ಇನ್ನೇನು ಯಶಸ್ಸು ಸಿಗಬೇಕು ಎನಿಸುವಷ್ಟರಲ್ಲಿ ಕೆಲಸಗಳು ಕೆಟ್ಟು ಹೋಗುತ್ತವೆ. ಅಮಾವಾಸ್ಯೆಯ ದಿನದಂದು ಈ ರೆಮಿಡಿಯನ್ನು ಮಾಡಿಕೊಳ್ಳಬಹುದು. miracle

ಅಮಾವಾಸ್ಯೆ ಇನ್ನು ದೂರವಿದೆ ಕಾಯುವುದಕ್ಕೆ ಆಗುವುದಿಲ್ಲ ಎನ್ನುವವರು ಶನಿವಾರದಂದು ಈ ಕೆಲಸವನ್ನು ಮಾಡಿಕೊಂಡರೇ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಬೇಗ ದೊರೆಯುತ್ತದೆ. ಜೀವನದಲ್ಲಿ ತುಂಬಾ ಸಮಸ್ಯೆಗಳಿವೆ ಎನ್ನುವವರು ಕನಿಷ್ಠ ನಾಲ್ಕು ಶನಿವಾರ ಮತ್ತು ಒಂದು ಅಮಾವಾಸ್ಯೆಯ ದಿನದಂದು ಈ ಕೆಲಸವನ್ನು ಮಾಡಬೇಕು. ಮಕ್ಕಳು ಚೆನ್ನಾಗಿವೆ, ಚುರುಕಾಗಿವೆ ಎಂದರೆ ಮಕ್ಕಳಿಗೆ ದೃಷ್ಟಿ ಬೀಳುವುದು ಸಾಮಾನ್ಯವಾಗಿರುತ್ತದೆ. ಆ ಸಮಯದಲ್ಲೂ ಈ ಕೆಲಸವನ್ನು ಮಾಡಬಹುದು. miracle

ಒಂದು ಮಣ್ಣಿನ ದೀಪವನ್ನು ತೆಗೆದುಕೊಳ್ಳಿ ಇಲ್ಲವೇ ಗೋಧಿ ಹಿಟ್ಟಿನಿಂದ ದೀಪವನ್ನು ತಯಾರು ಮಾಡಿಕೊಳ್ಳಿ. ಆದರೇ ಯಾವುದೇ ಕಾರಣಕ್ಕೂ ಬೇರೆ ದೀಪವನ್ನು ತೆಗೆದುಕೊಳ್ಳಬಾರದು. ದೀಪಕ್ಕೆ ದೀಪದ ಬತ್ತಿಯನ್ನು ಇಡಿ ಮತ್ತು ಸಾಸಿವೆ ಎಣ್ಣೆಯನ್ನು ಹಾಕಿ, ನಿಮ್ಮ ಮನೆಯಲ್ಲಿ ಸಾಸಿವೆ ಎಣ್ಣೆ ಇಲ್ಲವಾದರೇ ನೀವು ಯಾವ ಎಣ್ಣೆಯನ್ನು ಬಳಸುತ್ತೀರೋ ಆ ಎಣ್ಣೆಗೆ ನಾಲ್ಕು ಕಾಳು ಸಾಸಿವೆಯನ್ನು ಹಾಕಿ ಸಾಧ್ಯವಾದರೇ ಸಂಜೆಯ ಸಮಯದಲ್ಲಿ ದೀಪವನ್ನು ಬೆಳಗಿದರೇ ಉತ್ತಮ.

ಸಂಜೆಯ ಸಮಯದಲ್ಲಿ ದೀಪವನ್ನು ಬೆಳಗಲು ಸಾಧ್ಯವಾಗದೇ ಇದ್ದರೇ ಬೆಳಗಿನ ಸಮಯದಲ್ಲೂ ಈ ದೀಪವನ್ನು ಬೆಳಗಬಹುದು ಮತ್ತು ರಾತ್ರಿ ಕೂಡ ಬೆಳಗಿಸಬಹುದು. ಈ ದೀಪವನ್ನು ಇದೇ ದಿಕ್ಕಿನಲ್ಲಿ ಬೆಳಗಬೇಕೆಂಬ ಯಾವುದೇ ನಿಯಮವಿಲ್ಲ. ಎಲ್ಲಿಯಾದರೂ ಯಾವ ದಿಕ್ಕಿನಲ್ಲಿ ಕೂತುಕೊಂಡು ಈ ದೀಪವನ್ನು ಬೆಳಗಬಹುದು. ದೀಪವನ್ನು ಬೆಳಗಿಸುವ ಸಂದರ್ಭದಲ್ಲಿ ಭಕ್ತಿಯಿಂದ ಪ್ರಾರ್ಥನೆ ಮಾಡಿಕೊಳ್ಳಬೇಕು. ನಿಮ್ಮ ಮನೆಯಲ್ಲಿರುವ ಎಲ್ಲಾ ರೀತಿಯ ನೆಗೆಟಿವಿಟಿಯನ್ನು ಹೋಗಲಾಡಿಸಬೇಕು miracle

ಮತ್ತು ಮನೆಯಲ್ಲಿರುವ ಅನೇಕ ಸಮಸ್ಯೆಗಳು ಇವರ ಮೇಲೆ ದೃಷ್ಟಿ ಬಿದ್ದಿದ್ದರೇ, ಹಿಂದಿನ ಜನ್ಮದಲ್ಲಿ ತಪ್ಪು ಏನಾದರೂ ನಡೆದಿದ್ದರೇ ಈ ಅಗ್ನಿಯಲ್ಲಿ ನಾಶವಾಗಲೆಂದು ಹೇಳಿಕೊಳ್ಳಬೇಕು. ಪ್ರಾರ್ಥನೆಯನ್ನು ಒಂದು ನಿಮಿಷದ ವರೆಗೂ ಭಕ್ತಿಯಿಂದ ಮಾಡಬೇಕಾಗುತ್ತದೆ. ದೀಪವನ್ನು ಬೆಳಗಿದ ನಂತರ ಮನೆಯಲ್ಲಿರುವ ತಟ್ಟೆಯನ್ನು ತೆಗೆದುಕೊಂಡು ಆ ತಟ್ಟೆಯನ್ನು ದೀಪದ ಮೇಲೆ ಎರಡಿಂಚು ಮೇಲೆ ಇಡಬೇಕು. ದೀಪದ ಉರಿ ಆ ತಟ್ಟೆಗೆ ತಾಕಬೇಕು. ತಟ್ಟೆಯಲ್ಲಿ ಒಂದು ರೀತಿಯ ಕಪ್ಪು ಬರುತ್ತದೆ

ಆ ಕಪ್ಪನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಎರಡು ಬದಿಗಳಲ್ಲಿ ಹಚ್ಚಬೇಕು. ಮನೆಯಲ್ಲಿ ಗಂಡ ಹೆಂಡತಿಯರ ನಡುವೆ ಪದೇ ಪದೇ ಜಗಳ, ಮನಸ್ಥಾಪಗಳು ಆಗುತ್ತಿದ್ದರೇ ಮಲಗುವ ಮಂಚದ ಸುತ್ತ ಈ ಕಪ್ಪು ತಿಲಕವನ್ನು ಹಚ್ಚಬೇಕು. ಇದರಿಂದ ಮನೆಯಿಂದ ಅಶಾಂತಿ ತೊಲಗಿ ಶಾಂತಿ ನೆಲೆಸುತ್ತದೆ. ನೀವು ಮಲಗುವ ಕೋಣೆಯ ಬಾಗಿಲುಗೂ ಕೂಡ ಕಪ್ಪು ತಿಲಕವನ್ನು ಹಚ್ಚುವುದರಿಂದ ದಾಂಪತ್ಯಜೀವನದ ಕಷ್ಟಗಳು ದೂರವಾಗುತ್ತದೆ. ಮನೆಯಲ್ಲಿ ಹಣದ ಸಮಸ್ಯೆ ಇದ್ದರೇ ನೀವು ಹಣವನ್ನು ಇಡುವ ತಿಜೋರಿಗೆ

ಈ ಕಪ್ಪು ತಿಲಕವನ್ನು ಹಚ್ಚಬೇಕು. ಇದರಿಂದ ನಿಮ್ಮ ಹಣದ ಸಮಸ್ಯೆ ಕಡಿಮೆಯಾಗಿ ಹಣದ ಹೊಳೆಯೇ ಹರಿಯುತ್ತದೆ. ನಿಮ್ಮ ಮೇಲೆ ದೃಷ್ಟಿ ಬೀಳಾಬಾರದೆಂದರೆ ನಿಮ್ಮ ಹಣೆಯ ಮೇಲೆ ಅಥವಾ ಕಿವಿಯ ಕೆಳಗಡೆ ಹಚ್ಚುವುದರಿಂದ ದೃಷ್ಟಿಯಾಗುವುದಿಲ್ಲ. ನಿಮ್ಮ ಮನೆಯಲ್ಲಿ ಮಕ್ಕಳಿದ್ದರೇ ಆ ಮಕ್ಕಳಿಗೂ ದೃಷ್ಟಿಯಾಗಬಾರದೆಂದರೆ ಮಕ್ಕಳ ಹಣೆ, ಕೆನ್ನೆ ಮತ್ತು ಕಿವಿಯ ಕೆಳಗಡೆ ಕಪ್ಪು ತಿಲಕವನ್ನು ಇಟ್ಟರೇ ದೃಷ್ಟಿ ಬೀಳುವುದರಿಂದ ತಪ್ಪಿಸಿಕೊಳ್ಳಬಹುದು. miracle

ಇದನ್ನು ಪ್ರತಿ ಶನಿವಾರ ಅಥವಾ ಪ್ರತಿ ಅಮಾವಾಸ್ಯೆಯಂದು ಬಿಟ್ಟುಬಿಡದೇ ಮಾಡಿದರೇ ನಿಮ್ಮ ಮನೆಯಲ್ಲಿರುವ ಸಮಸ್ಯೆಗಳು ತೊಲಗುತ್ತದೆ. ನೀವು ಗೋಧಿ ಹಿಟ್ಟಿನಿಂದ ದೀಪವನ್ನು ತಯಾರಿಸಿದ್ದರೇ ಆ ದೀಪವನ್ನು ಮರುದಿನ ಆ ಗೋಧಿ ಹಿಟ್ಟಿನ ದೀಪಕ್ಕೆ ಸ್ವಲ್ಪ ಸಕ್ಕರೆಯನ್ನು ಹಾಕಿ ಮರದ ಕೆಳಗಡೆ ಹಾಕಬೇಕು. ಮಣ್ಣಿನ ದೀಪವನ್ನು ಬಳಸಿದರೇ ಅದನ್ನು ಮತ್ತೆ ಬಳಸಬಹುದು. ಈ ಕೆಲಸವನ್ನು ಮಹಿಳೆಯರು ತಮ್ಮ ಋತುಚಕ್ರದ ಸಮಯದಲ್ಲೂ ಮಾಡಬಹುದು.

Leave A Reply

Your email address will not be published.