Ultimate magazine theme for WordPress.

Mithuna Rashi ಮಿಥುನ ರಾಶಿಯ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯ

0 20,041

Mithuna Rashi Bhavishya ಸ್ನೇಹಿತರೇ ಮಿಥುನ ರಾಶಿಯ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ಫೆಬ್ರವರಿ ತಿಂಗಳಿನಲ್ಲಿ ಏನೆಲ್ಲಾ ಶುಭ ಫಲಗಳು ಸಿಗುತ್ತಿವೆ? ಯಾವ ವಿಚಾರಗಳಿಗೆ ಎಚ್ಚರಿಕೆಯನ್ನು ಅನುಸರಿಸಬೇಕು? ಲಾಭ ನಷ್ಟಗಳ ಬಗ್ಗೆ ಮತ್ತು ಪರಿಹಾರಗಳ ಬಗ್ಗೆ ತಿಳಿಸಿಕೊಡುತ್ತೇವೆ. ಮಿಥುನ ರಾಶಿಯ ರಾಶ್ಯಾಧಿಪತಿ ಬುಧಗ್ರಹವಾಗಿದೆ. ಗಂಡು ಮತ್ತು ಹೆಣ್ಣು ಜೋಡಿ ಚಿಹ್ನೆಗಳನ್ನು ಹೊಂದಿರುವ ರಾಶಿಯೇ ಮಿಥುನ ರಾಶಿ. ನಿಮ್ಮ ಅದೃಷ್ಟ ಬಣ್ಣ ಹಸಿರು ಮತ್ತು ಹಳದಿಯಾಗಿದೆ. ಸೋಮವಾರ ಮತ್ತು ಬುಧವಾರ ಅದೃಷ್ಟದ ದಿನಗಳು, ವಿಘ್ನೇಶ್ವರ ನಿಮಗೆ ಅದೃಷ್ಟ ದೇವರು, 5,2,6,3 ಅದೃಷ್ಟದ ಸಂಖ್ಯೆಗಳಾಗಿವೆ.

ಮೇಷ, ಸಿಂಹ, ತುಲಾ, ಕನ್ಯಾ ಮಿತ್ರ ರಾಶಿಗಳಾದರೇ ಕಟಕ ರಾಶಿ ಶತೃರಾಶಿಯಾಗಿದೆ. ಅದೃಷ್ಟದ ದಿನಾಂಕ 5,14, ಮತ್ತು 23 ಆಗಿದೆ. ಮಿಥುನ ರಾಶಿಯವರು ಕರುಣಾಮಯಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕಷ್ಟ, ತೊಂದರೆಯಲ್ಲಿದ್ದರೇ ತುಂಬಾ ಮರುಗುವ ಸ್ವಭಾವವಿರುತ್ತದೆ ಮತ್ತು ಅದಕ್ಕೆ ಸಹಾಯವನ್ನು ಮಾಡಲು ಸಿದ್ಧರಿರುತ್ತಾರೆ. ಈ ತಿಂಗಳಿನಲ್ಲಿ ಬಹಳಷ್ಟು ಒಳ್ಳೆಯ ಫಲಗಳು ಸಿಗುತ್ತವೆ. ನಿಮ್ಮಲ್ಲಿರುವ ಬುದ್ಧಿವಂತಿಕೆ, ಜ್ಞಾನ, ಅನುಭವ, ನಿಮ್ಮ ಚಾಕಚಕ್ಯತೆ, Mithuna Rashi

ನಿಮ್ಮ ಸಮಯ ಪ್ರಜ್ಞೆ ನಿಮ್ಮ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ನೀವು ಆ ಸಂದರ್ಭವನ್ನು ಯಾವ ರೀತಿ ಬಳಸಿಕೊಳ್ಳುತ್ತಿದ್ದೀರಿ ನಿಮ್ಮ ಫಲ ಅವಲಂಬಿತವಾಗಿರುತ್ತದೆ. ಯಾವ ಕೆಲಸ ಮಾಡಬೇಕಾದರೂ ನಿಮ್ಮ ಬುದ್ದಿವಂತಿಕೆಯನ್ನು ಅಳವಡಿಸಿಕೊಳ್ಳಿ. ಸಮಯ ಪ್ರಜ್ಞೆಯನ್ನು ಅಳವಡಿಸಿಕೊಳ್ಳಿ. ಎಷ್ಟು ಮಾತನಾಡಬೇಕೋ, ಎಷ್ಟು ಸಾಲ ಮಾಡಬೇಕು? ಎಷ್ಟು ದುಡ್ಡು ಇಟ್ಟುಕೊಳ್ಳಬೇಕು? ಎಷ್ಟು ಖರ್ಚನ್ನು ಮಾಡಿಕೊಳ್ಳಬೇಕು? ಇದರ ಅರಿವನ್ನು ಇಟ್ಟುಕೊಂಡರೇ ಖಂಡಿತವಾಗಿಯೂ ನೀವು ಅಂದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ

ಈ ತಿಂಗಳಿನಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಹೆಚ್ಚಿನ ಸಮಯವನ್ನು ಕೆಲಸದ ಕಡೆ ವಿನಿಯೋಗಿಸಿಕೊಳ್ಳಿ. ಹಣಕ್ಕೆ ಈ ತಿಂಗಳಿನಲ್ಲಿ ಅಷ್ಟೇನೂ ತೊಂದರೆ ಕಂಡುಬರುವುದಿಲ್ಲ. ಕಂಡುಬಂದರೂ ಎಷ್ಟು ಬೇಕೋ ಅಷ್ಟು ಹಣ ಸೃಷ್ಟಿಯಾಗುತ್ತದೆ ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯ ವಿಷಯವೇನೆಂದರೇ ಆದಷ್ಟು ಖರ್ಚಿನ ಮೇಲೆ ಕಡಿವಾಣವನ್ನು ಹಾಕಿರಿ. ಎಷ್ಟು ಬೇಕೋ ಅಷ್ಟನ್ನು ಮಾತ್ರ ಖರ್ಚನ್ನು ಮಾಡಿ ಹಣಕಾಸಿನಲ್ಲಿ ಬಹಳಷ್ಟು ವೃದ್ದಿಯಾಗುವ ಸಾಧ್ಯತೆ ಇದೆ. Mithuna Rashi

ಇನ್ನು ಕೆಲವರಿಗೆ ವಾಹನಗಳ ಲಾಭವಾಗುತ್ತದೆ. ನೀವೇನಾದರೂ ಆಸ್ತಿ ಕೊಳ್ಳಬೇಕು, ಮನೆ ಕೊಳ್ಳಬೇಕು, ವಾಹನ ಕೊಳ್ಳಬೇಕು, ಜಮೀನು ಕೊಳ್ಳಬೇಕು ಅಂದುಕೊಂಡಿದ್ದರೇ ಅವಕಾಶಗಳು ಚೆನ್ನಾಗಿವೆ. ವಿದ್ಯಾರ್ಥಿಗಳಿಗೆ ಅನುಕೂಲಕರವಾದ ವಾತಾವರಣವಿದೆ. ಕೆಲಸ ಹುಡುಕುವವರಿಗೆ ಅವಕಾಶಗಳು ಸೃಷ್ಟಿಯಾಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಕೆಲವು ಜನರಿಗೆ ಆಸ್ತಿಯನ್ನು ಮಾಡಿಕೊಳ್ಳಲು ಅವಕಾಶಗಳು ಇವೆ. ಸಂತಾನದ ಸಮಸ್ಯೆ ಯಾರಿಗೆ ಇರುತ್ತದೆಯೋ ಅಂತಹವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ. ನೀವು ಯಾವುದೇ ಕೆಲಸ ಮಾಡಬೇಕಾದರೂ ಬೇರೆಯವರ ಮೇಲೆ ಅವಲಂಬಿತರಾಗಬೇಡಿ.

ನಿಮಗೆ ಪಾರ್ಟ್ ಟೈಂ ಜಾಮ್ ಮತ್ತು ನಿಮ್ಮ ಕುಲ ಕಸುಬಿನಿಂದ ಲಾಭಗಳು ಚೆನ್ನಾಗಿದೆ. ನೀವು ಮಾಡುವ ಉದ್ಯೋಗದಲ್ಲಿ ಹೆಚ್ಚಿನ ಲಾಭವಿದೆ. ಚಿತ್ರೋದ್ಯಮ ಮತ್ತು ಟಿ.ವಿ ಮಾಧ್ಯಮದಲ್ಲಿ ಕೆಲಸ ಮಾಡುವ ಕಲಾವಿದರಿಗೆ ಮಹತ್ತ್ವವಾದ ಅವಕಾಶಗಳು ಕಂಡುಬರುತ್ತದೆ. ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳು ಕಂಡುಬರುತ್ತದೆ. ನೀವೇನಾದರೂ ಸಂಸ್ಥೆಗಳನ್ನು ನಡೆಸುವುವವರಾಗಿದ್ದರೇ ಉನ್ನತವಾದ ಸ್ಥಾನಮಾನಗಳು ಸಿಗುತ್ತವೆ. ನೀವು ಮಾಡುವ ಕೆಲಸದಲ್ಲಿ ಗೌರವ ಸಿಗುತ್ತದೆ ಮತ್ತು ನೀವು ಮಾಡುವಂತಹ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತೀರಿ. ಸಾರ್ವಜನಿಕರಲ್ಲಿ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಸಂಗ್ರಹವಾಗುತ್ತದೆ.

ರಾಜಕಾರಣಿಗಳು ಸಮಾಜಮುಖಿ ಕೆಲಸ ಮಾಡಿದರೇ ಒಳ್ಳೆಯ ಫಲಗಳು ಸಿಗುತ್ತವೆ. ಸಾಲವನ್ನು ಕೊಡುವಂತದ್ದು, ಪಡೆಯುವಂತದ್ದು ಮತ್ತು ಅಗ್ರಿಮೆಂಟ್ ವಿಚಾರಗಳಲ್ಲಿ ನಂಬಿಕೆಗೆ ಅರ್ಹರಾಗಿದ್ದಾರೆನ್ನುವುದರ ಬಗ್ಗೆ ಚೆಕ್ ಮಾಡಿಕೊಂಡು ಮುಂದುವರೆದರೇ ಒಳ್ಳೆಯದು. ನಿಮ್ಮ ಸಮಸ್ಯೆಗಳಿಗೆ ಪರಿಹಾರಗಳೇಂದರೆ ಶೇಷ ದೇವರಿಗೆ ಕ್ಷೀರಾಭಿಷೇಕ ಮಾಡಿಸಿ. ನಾಗಕ್ಷೇತ್ರದ ದರ್ಶನ ಮಾಡುವಂತದ್ದು ಮತ್ತು ಮನೆದೇವರ ಪ್ರಾರ್ಥನೆಯನ್ನು ಮಾಡಿರಿ. ಶಿವಸಹಸ್ರನಾಮವನ್ನು ಪಠಣೆಯನ್ನು ಮಾಡಿಕೊಳ್ಳಿ. ಮನೆಯ ಈಶಾನ್ಯ ಮೂಲೆಯಲ್ಲಿ ಭಾರವಾದ ವಸ್ತುಗಳನ್ನು ಇಡಬೇಡಿ. ನಿಮ್ಮ ಕೆಲಸವನ್ನು ಪ್ರೀತಿಸಿ ನಿಮ್ಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. Mithuna Rashi

Leave A Reply

Your email address will not be published.