Ultimate magazine theme for WordPress.

ಬಳ್ಳಾರಿ:ಲೋಕಸಭಾ ಚುನಾವಣೆಗೆ ದಿನಗಣನೆ ವೈರಲ್ ಅಗುತ್ತಿದೆ ಶ್ರಿ ರಾಮುಲು ಕುರಿತಾದ ಹಾಡು!

0 81

ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ, ರಾಜಕೀಯ ಪಕ್ಷಗಳು ತಮ್ಮ ಪ್ರಚಾರ ಕಾರ್ಯಗಳ ಕಡೆಗೆ ಗಮನ ನೀಡಲು ಸಜ್ಜಾಗುತ್ತಿದ್ದು ಇಡೀ ದೇಶದಲ್ಲಿ ಚುನಾವಣೆಯ ಬಿಸಿ ಏರುತ್ತಿದೆ. ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗಿದೆ. ರಾಜ್ಯ ರಾಜಕಾರಣದಲ್ಲಿಯೂ ಲೋಕಸಭಾ ಚುನಾವಣೆಯ ಬಿಸಿ ಕಾಣುತ್ತಿದ್ದು, ಇವೆಲ್ಲವುಗಳ ನಡುವೆಯೇ ಜನಪ್ರಿಯ ನಾಯಕ ಶ್ರೀರಾಮುಲು (Sri Ramulu) ಅವರ ಜನ ಪರ ಕಾರ್ಯಗಳ ಕುರಿತಂತೆ ಮಾಹಿತಿಯನ್ನು ನೀಡುವ ಹಾಡೊಂಡು ವೈರಲ್ ಆಗಿ ಗಮನ ಸೆಳೆದಿದೆ.

ಶ್ರೀರಾಮುಲು ಅವರು ಒಂದು ರಾಜ್ಯದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು, ತಮ್ಮದೇ ಆದ ವರ್ಚಸ್ಸನ್ನು ಪಡೆದುಕೊಂಡಿದ್ದಾರೆ. ಅವರ ಹಿನ್ನೆಲೆ ಗಮನಿಸಿದಾಗ ಸಾಧಾರಣ ಹಿನ್ನೆಲೆ ಯಿಂದ ಬಂದ ಅವರು ಇಂದು ಒಬ್ಬ ಸಮರ್ಥ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಅವರ ಸಾಧನೆಗಳು ಅನೇಕರಿಗೆ ಸ್ಪೂರ್ತಿಯಾಗಿದೆ. ಈಗ ಶ್ರೀರಾಮುಲು ಅವರು ಜನರಿಗಾಗಿ ಮಾಡಿರುವ ಕಾರ್ಯಗಳು ಮತ್ತು ಸಾಧನೆಯ ಕುರಿತಾಗಿ ಹಾಡೊಂದರ ಮೂಲಕ ತಿಳಿಸಿರುವುದು ಎಲ್ಲರ ಗಮನವನ್ನು ಸೆಳೆದಿದೆ.

ಶ್ರೀ ರಾಮುಲು ಅವರು ಶಾಸಕರಾಗಿ, ಸಚಿವರಾಗಿ ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿದ್ದು, ಅವರು ಏನೆಲ್ಲಾ ಸಾಧನೆ ಮಾಡಿದ್ದಾರೆ ಎನ್ನುವುದಕ್ಕೆ ಹಾಡಿನ ರೂಪವನ್ನು ನೀಡಲಾಗಿದ್ದು, ರಾಜೇಂದ್ರ ಅವರು ಈ ಅದ್ಭುತವಾದ ಹಾಡನ್ನು ಬರೆದಿದ್ದು, ರವಿ ಕಲ್ಯಾಣ ಅವರು ಇದಕ್ಕೆ ಸ್ವರ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ದನಿಯಾಗಿದ್ದಾರೆ ಗಾಯಕ ನಲಗೊಂಡ ಗದ್ದರ್.

ಈ ಬಾರಿ ಲೋಕಸಭಾ ಚುನಾವಣೆಗೆ ಶ್ರೀರಾಮುಲು ಅವರು ಬಳ್ಳಾರಿಯಿಂದ ಸ್ಪರ್ಧಿಸುತ್ತಿದ್ದು, ಚುನಾವಣೆ ಸನ್ನಿಹಿತವಾಗಿರುವ ಈ ಸಮಯದಲ್ಲಿ ಬಿಡುಗಡೆ ಆಗಿರುವ ಹಾಡನ್ನು ಕೇಳಿ ಶ್ರೀರಾಮುಲು ಅವರು ಅಭಿಮಾನಿಗಳು ಸಂತೋಷ ಪಡುತ್ತಿದ್ದು, ತಮ್ಮ ಮೆಚ್ಚಿನ ನಾಯಕ ತಮಗಾಗಿ ಮಾಡಿರುವ ಕಾರ್ಯಗಳ ಕುರಿತಾಗಿ ಮೆಚ್ಚುಗೆ ನೀಡಿರುವುದು ಮಾತ್ರವಲ್ಲದೇ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಮ್ಮ ನಾಯಕನು ವಿಜಯಶಾಲಿ ಆಗಲೆಂದು ಹಾರೈಸುತ್ತಿದ್ದಾರೆ.‌

Leave A Reply

Your email address will not be published.