Ultimate magazine theme for WordPress.

money remedy ಈ ಎಲೆ ಸಿಕ್ಕರೆ ಬಿಡಬೇಡಿ ಅಪಾರ ಶ್ರೀಮಂತರಾಗ್ತೀರ

0 261

money remedy in astrology vastu tips ನಾವು ಈ ಲೇಖನದಲ್ಲಿ ಈ ಎಲೆ ಸಿಕ್ಕರೆ ಬಿಡಬೇಡಿ ಅಪಾರ ಶ್ರೀಮಂತರು ಹೇಗೆ ಆಗುತ್ತಾರೆ. ಎಂದು ತಿಳಿದುಕೊಳ್ಳೋಣ. ಈ ಮರದ ಎಲೆ ಸಿಕ್ಕರೆ ಬಿಡಬೇಡಿ. ಇದನ್ನು ತಪ್ಪದೇ ನಿಮ್ಮ ಪರ್ಸಿನಲ್ಲಿ ಇಟ್ಟು ನೋಡಿ. ಹಣ ಆಯಸ್ಕಾಂತದಂತೆ ಆಕರ್ಷಣೆ ಆಗುತ್ತದೆ ಎಂಬ ರಹಸ್ಯ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ. ಈ ಮರದ ಎಲೆ ಸಿಕ್ಕರೆ ಬಚ್ಚಿಟ್ಟ ಬಂಗಾರದ ನಿಧಿ ಸಿಕ್ಕ ಹಾಗೆ ಆಗುತ್ತದೆ. ಈ ಎಲೆಗೆ ಅಂತಹ ಶಕ್ತಿ ಇದೆ. ಸಾಕ್ಷಾತ್ ಬ್ರಹ್ಮ, ವಿಷ್ಣು , ಮಹೇಶ್ವರರ ಆಶೀರ್ವಾದ ಪಡೆದ ಏಕೈಕ ಮರ ಇದು ಆಗಿದ್ದು, ಅಪ್ಪಿ ತಪ್ಪಿ ನಿಮಗೆ ಸಿಕ್ಕರೆ ನೀವು ಕೋಟ್ಯಾಧಿಪತಿ ಆಗುವುದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ .

ಕಲಿಯುಗದಲ್ಲಿ ಅಧರ್ಮ ಮೇಲುಗೈ ಆಗುತ್ತಿದೆ .ಈ ಕಾಲದಲ್ಲಿ ಹಣಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲ ಅನ್ನೋ ರೀತಿ ಹಣ ರಾಜ್ಯಭಾರ ಮಾಡುತ್ತಿದೆ . ಕಲಿ ಗಾಲದಲ್ಲಿ ಹೀಗೆ ಆಗುತ್ತದೆ ಎಂದು ಶ್ರೀ ಕೃಷ್ಣ ಪರಮಾತ್ಮ ಹೇಳಿರುವುದು ಎಲ್ಲರಿಗೂ ತಿಳಿದಿರುವ ವಿಷಯ . ಅಷ್ಟೇ ಅಲ್ಲದೆ ಮಹಾಭಾರತದಲ್ಲಿ ವಿದುರನ ನೀತಿ ಕೂಡ ಹಣಕಾಸಿನ ರಹಸ್ಯವನ್ನು ಹೇಳಲಾಗಿದೆ . ಕೆಲವರು ಹಣ ಗಳಿಸುವುದಕ್ಕೆ ಒಳ್ಳೆಯ ಮಾರ್ಗ ಆಯ್ಕೆ ಮಾಡಿಕೊಂಡರೆ, ಇನ್ನು ಕೆಲವರು ಬೇಗ ಶ್ರೀಮಂತರಾಗಬೇಕೆಂದು ಕೆಟ್ಟ ದಾರಿಯನ್ನು ಹಿಡಿಯುತ್ತಾರೆ .

ಕೆಲವರು ಎಷ್ಟೇ ಕಷ್ಟಪಟ್ಟು ದುಡಿದರು ಖರ್ಚು ಜಾಸ್ತಿಯಾಗಿ ಬಿಡಿಗಾಸು ಉಳಿಸಲು ಸಾಧ್ಯವಾಗುವುದಿಲ್ಲ . ಮಹಾಭಾರತ ಕಾಲದ ಮಹಾನ್ ತತ್ವಜ್ಞಾನಿ ವಿದುರ ಪಾಂಡವ ಕೌರವ ಯುದ್ಧವನ್ನು ನಿಲ್ಲಿಸುವುದಕ್ಕೂ ಪ್ರಯತ್ನ ಮಾಡಿದ್ದ. ಆದರೆ ಆ ಇದು ಸಾಧ್ಯವಾಗಿರಲಿಲ್ಲ . ಎಲ್ಲರೂ ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂದು ಹೇಳಿಕೊಟ್ಟವರಲ್ಲಿ ವಿದುರ ಕೂಡ ಪ್ರಮುಖ . money remedy in astrology

ಆಚಾರ್ಯ ಚಾಣಕ್ಯ ನೀತಿಯಂತೆ ವಿದುರ ನೀತಿಯಲ್ಲೂ ನಾವು ಮಾನವ ಜೀವನದ ಕಲ್ಯಾಣಕ್ಕಾಗಿ ಅನೇಕ ವಿಷಯಗಳನ್ನು ಕಾಣಬಹುದು . ಹಣದ ನಿರ್ವಹಣೆಯ ಬಗ್ಗೆಯೂ ಕೂಡ ವಿದುರ ತನ್ನ ಅದ್ಭುತ ಸಂದೇಶಗಳನ್ನು ಕೊಟ್ಟಿದ್ದಾನೆ . ಬದುಕಿನಲ್ಲಿ ಹಣ ಸಂಪಾದನೆ ಮುಖ್ಯ. ಆದರೆ ಹಣವನ್ನು ನಾವು ಹೇಗೆ ಸಂಪಾದಿಸುತ್ತೇವೆ , ಸಂಪಾದಿಸಿದ ಹಣವನ್ನು ಹೇಗೆ ಖರ್ಚು ಮಾಡುತ್ತೇವೆ ಅನ್ನುವುದರ ಮೇಲೆ ನಮ್ಮ ಹಣಕಾಸಿನ ಯಶಸ್ಸು ನಿಂತಿರುತ್ತದೆ ಎಂದು ಹೇಳುತ್ತದೆ ವಿದುರ ನೀತಿ .

ಅಷ್ಟೇ ಅಲ್ಲದೆ ಒಂದು ಮರದ ಎಲೆ ಮಾತ್ರ ಹಣಕಾಸಿನ ವಿಚಾರದಲ್ಲಿ ಚಮತ್ಕಾರವನ್ನು ಮಾಡುತ್ತದೆ.
ಮೊದಲನೇ ವಿಚಾರ ಲಕ್ಷ್ಮಿ ದೇವಿಯನ್ನು ಹಣದ ಇನ್ನೊಂದು ಸ್ವರೂಪ ಎಂದು ಹೇಳಲಾಗುತ್ತದೆ. ಲಕ್ಷ್ಮಿ ದೇವಿಯ ಒಂದು ಚಿಕ್ಕ ಫೋಟೋವನ್ನು ನಿಮ್ಮ ಪರ್ಸ್ನಲ್ಲಿ ಇಟ್ಟುಕೊಳ್ಳುವುದರಿಂದ ಹಣ ಆಕರ್ಷಣೆಯಾಗುತ್ತದೆ . ದುಂದು ವೆಚ್ಚ ಕಡಿಮೆಯಾಗುತ್ತದೆ . ಲಕ್ಷ್ಮೀದೇವಿ ಕುಳಿತಿರುವ ಭಂಗಿಯ ಫೋಟೋವನ್ನು ಇಟ್ಟುಕೊಳ್ಳುವುದರಿಂದ , ನಿಮಗೆ ಒಳ್ಳೆಯದಾಗುತ್ತದೆ . money remedy in astrology

ಅಪ್ಪಿ ತಪ್ಪಿ ಲಕ್ಷ್ಮಿ ದೇವಿ ನಿಂತಿರುವ ಫೋಟೋವನ್ನು ಯಾವತ್ತಿಗೂ ಇಟ್ಟುಕೊಳ್ಳಬೇಡಿ . ಇದರಿಂದ ಹಣ ಕೈಯಲ್ಲಿ ಉಳಿಯುವುದಿಲ್ಲ . ದೇವರ ಫೋಟೋವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳಲು ಆಗದೇ ಹೋದರೆ ಒಂದು ಪ್ಲಾಸ್ಟಿಕ್ ಕವರ್ ನಲ್ಲಿ ಸುತ್ತಿ ಇಟ್ಟುಕೊಳ್ಳಿ .

ಎರಡನೇಯದು ಕೆಂಪು ಬಣ್ಣದ ಕಾಗದದಿಂದ ಜೀವನದಲ್ಲಿ ತುಂಬಾ ಬದಲಾವಣೆಯನ್ನು ತಂದುಕೊಳ್ಳುವ ರಹಸ್ಯ .ಕೆಂಪು ಬಣ್ಣದ ಕಾಗದದಲ್ಲಿ ನಿಮ್ಮ ಮನಸ್ಸಿನ ಇಚ್ಛೆಯನ್ನು ಬೇಡಿಕೊಂಡು , ಮತ್ತು ಬರೆದುಕೊಂಡು ಕೆಂಪು ಕಾಗದವನ್ನು ಫರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ , ಮನಸ್ಸಿನಲ್ಲಿ ಅಂದುಕೊಂಡಿರುವ ಆಸೆಗಳು ಬೇಗ ನೆರವೇರುತ್ತದೆ .

ಮೂರನೇಯದು ಅಕ್ಕಿ . ಬಿಳಿ ಅಕ್ಕಿ ಕಾಳುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವುದರಿಂದ , ಅನಾವಶ್ಯಕ ಖರ್ಚುಗಳು ಕಡಿಮೆಯಾಗುತ್ತದೆ . ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳಿಂದ ಜೀವನದಲ್ಲಿ ಒಳ್ಳೆಯ ಕೆಲಸ ಆಗುತ್ತದೆ . ಚಿನ್ನ ಅಥವಾ ಬೆಳ್ಳಿಯ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬಹುದು . ಆದರೆ ಇವುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳುವ ಮುಂಚೆ ದೇವರ ಬಳಿ ಹಿಟ್ಟು ಭಕ್ತಿಯಿಂದ ಪೂಜೆ ಮಾಡಬೇಕು. ಹಿಂದೂ ಧರ್ಮದ ಪ್ರಕಾರ ರುದ್ರಾಕ್ಷಿಯನ್ನು ಶಿವನ ಕಣ್ಣಿಗೆ ಹೋಲಿಸಲಾಗುತ್ತದೆ . money remedy in astrology

ಹೀಗಾಗಿ ರುದ್ರಾಕ್ಷಿಗೆ ಪೂಜೆ ಪುನಸ್ಕಾರಗಳಲ್ಲಿ ವಿಶೇಷವಾದ ಸ್ಥಾನವಿದೆ . ರುದ್ರಾಕ್ಷಿಯನ್ನು ಕೂಡ ಪೂಜಿಸಿ ಪರ್ಸಿ ನಲ್ಲಿ ಇಟ್ಟುಕೊಳ್ಳುವುದರಿಂದ , ದಾರಿದ್ರ್ಯ ಬಡತನ ದೂರವಾಗುತ್ತದೆ . ಹಾಗೆಯೇ ಮಡಚಿದ ಮತ್ತು ಹರಿದು ಹೋದ ನೋಟುಗಳನ್ನು ಪರ್ಸಿನಲ್ಲಿ ಇಟ್ಟುಕೊಳ್ಳಬಾರದು . ಇದರಿಂದ ಆರ್ಥಿಕವಾಗಿ ತುಂಬಾ ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ .

ಶುಕ್ರವಾರದಂದು ಹಸಿರು ಏಲಕ್ಕಿ ಕಾಯಿಗಳನ್ನು ನೀರಿನಲ್ಲಿ ಕುದಿಸಿ , ಆರಿಸಿರುವ ನೀರನ್ನು ಏಲಕ್ಕಿಯ ಸಮೇತ ಸ್ನಾನದ ನೀರಿಗೆ ಸೇರಿಸಿ ಸ್ನಾನ ಮಾಡಿದರೆ , ಎಲ್ಲಾ ಕಷ್ಟಗಳು ದೂರವಾಗುತ್ತದೆ . ಅಂದುಕೊಂಡಿರುವ ಕೆಲಸಗಳು ಸರಾಗವಾಗಿ ನೆರವೇರುತ್ತದೆ . ನಂತರ ಏಲಕ್ಕಿ ಕಾಯಿಗಳನ್ನು ಮರದ ಕೆಳಗೆ ಹಾಕಬಹುದು . ಗಂಡ ಮತ್ತು ಹೆಂಡತಿಯ ಮಧ್ಯೆ ಪದೇ ಪದೇ ಜಗಳ ಆಗುತ್ತಿದ್ದರೆ , ಈ ಕೆಲಸವನ್ನು ಮಾಡಿದರೆ , ಗುರುವಾರ ಪೂರ್ತಿ ದಿನ ಒಂದು ಏಲಕ್ಕಿಯನ್ನು ನಿಮ್ಮ ಬಟ್ಟೆಗೆ ಕಟ್ಟಿಕೊಳ್ಳಬೇಕು .

ದೇಹ ಮತ್ತು ಬೆವರನ್ನು ಅದಕ್ಕೆ ಸ್ಪರ್ಶಿಸಿ , ಕರ್ಚೀಫ್ ನಲ್ಲಿ ಸುತ್ತಿ ಇಟ್ಟುಕೊಂಡರು ಕೂಡ ಆಗುತ್ತದೆ. ಶುಕ್ರವಾರ ಬೆಳಿಗ್ಗೆ ಚಹಾ ಅಥವಾ ಯಾವುದೇ ಅಡುಗೆಗೆ ಈ ಏಲಕ್ಕಿಯನ್ನು ಬೆರಸಿ ಗಂಡನಿಗೆ ತಿನ್ನುವುದಕ್ಕೆ ಕೊಟ್ಟರೆ ಜಗಳ ಕಡಿಮೆಯಾಗುತ್ತದೆ. ಕೆಲವು ಮಕ್ಕಳಿಗೆ ಎಷ್ಟೇ ಓದಿದರು ವಿದ್ಯೆ ತಲೆಗೆ ಹೋಗುವುದಿಲ್ಲ . ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳುವುದಕ್ಕೆ ಹಾಲಿಗೆ ಏಲಕ್ಕಿಯನ್ನು ಬೆರಸಿ ಕುದಿಸಿ ಅದನ್ನು ದಾನ ಮಾಡುವುದರಿಂದ ಒಳ್ಳೆಯ ಫಲಿತಾಂಶ ಕಾಣಬಹುದು . money remedy in astrology

ಇವೆಲ್ಲಾ ಸರಳ ಉಪಾಯಗಳು ಆದರೂ ಫಲಿತಾಂಶ ಹೆಚ್ಚಾಗಿರುತ್ತದೆ . ಆಲದ ಮರದ ಎಲೆ ಶಾಸ್ತ್ರಗಳ ಪ್ರಕಾರ ತುಂಬಾ ಶಕ್ತಿಯುತವಾಗಿದ್ದು, ಹಣವನ್ನು ಆಯಸ್ಕಾಂತದಂತೆ ಆಕರ್ಷಣೆ ಮಾಡುತ್ತದೆ . ಈ ಆಲದ ಮರದ ಎಲೆಯನ್ನು ಶುಕ್ರವಾರ ಮನೆಗೆ ತಂದು , ಅರಿಶಿಣದ ನೀರಿನಿಂದ ತೊಳೆದು ಲಕ್ಷ್ಮಿ ಫೋಟೋದ ಮುಂದೆ ಇಟ್ಟು ಪ್ರಾರ್ಥನೆ ಮಾಡಿ ಪರ್ಸಿನಲ್ಲಿ ಇಟ್ಟುಕೊಳ್ಳುವುದರಿಂದ , ಕೈಯಲ್ಲಿ ಪರ್ಸ್ , ಬ್ಯಾಗಿನಲ್ಲಿ ಯಾವತ್ತಿಗೂ ಹಣದ ಕೊರತೆ ಆಗುವುದಿಲ್ಲ . ನೀವು ಈ ಉಪಾಯಗಳನ್ನು ತಪ್ಪದೆ ಮಾಡಿ ನೋಡಿ .ನಿಮಗೆ ತಿಳಿಯುತ್ತದೆ ಅದರ ಪ್ರಯೋಜನಗಳು .

Leave A Reply

Your email address will not be published.