Ultimate magazine theme for WordPress.

VRUSHABHA ವೃಷಭರಾಶಿ ಮಾರ್ಚ್ ತಿಂಗಳ ಭವಿಷ್ಯ 2024

0 159

VRUSHABHA RASHI MARCH BHAVISHYA 2024 ಮಾರ್ಚ್ ತಿಂಗಳಿನ ವೃಷಭರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ವೃಷಭರಾಶಿಯವರಿಗೆ ಈ ತಿಂಗಳಲ್ಲಿ ರಾಶ್ಯಾಧಿಪತಿಯಾದ ಶುಕ್ರನು ಕುಂಭರಾಶಿಯಲ್ಲಿರುತ್ತಾನೆ. 14ನೇ ತಾರೀಖಿನ ವರೆಗೂ ಶುಕ್ರ, ಶನಿ ಮತ್ತು ರವಿಗಳು ಕರ್ಮದಲ್ಲಿ ಸ್ಥಾನದಲ್ಲಿರುತ್ತಾರೆ. ಶನಿ, ಶುಕ್ರರು ಜೊತೆಗಿರುವುದು ತುಂಬಾ ಒಳ್ಳೆಯದು. ರವಿ ಗ್ರಹವು ಇರುವುದರಿಂದ ಶನಿ ಮತ್ತು ಶುಕ್ರರು ಕೊಡುವ ಫಲವನ್ನು ತಡೆಯುತ್ತಾನೆ. ಸ್ವಂತ ಉದ್ಯೋಗ ಮಾಡುವವರಿಗೆ ತುಂಬಾನೇ ಅಭಿವೃದ್ಧಿಯಾಗುತ್ತದೆ ಆದರೇ ರವಿ,ಶನಿ ಒಟ್ಟಿಗೆ ಇರುವುದರಿಂದ ಕೆಲಸ ಮಾಡಲು ಅಡೆತಡೆಗಳು ಆಗುತ್ತದೆ. ಕೆಲಸ ಮಾಡಲು ವಿಘ್ನೆಗಳೇ ಹೆಚ್ಚಾಗುತ್ತದೆ.

ಆದರೇ 14ನೇ ತಾರೀಖಿನ ನಂತರ ನಿಮ್ಮ ಕೆಲಸಗಳು ಚೆನ್ನಾಗಿ ನಡೆಯುತ್ತದೆ. ಈ ತಿಂಗಳಿನಲ್ಲಿ ಸ್ವಂತ ಉದ್ಯೋಗಿಗಳಿಗೆ ಲಾಭ ಬರುತ್ತದೆ ಆದರೇ ಅಷ್ಟೇ ಖರ್ಚುಗಳು ಆಗುತ್ತದೆ. 12ನೇ ಮನೆಯಲ್ಲಿ ಗುರುವಿದ್ದಾಗ ಒಳ್ಳೆಯ ಕಾರ್ಯಕ್ಕೆ ಖರ್ಚು ಮಾಡಿಸುತ್ತಾನೆ. ವೃಷಭರಾಶಿಯವರಿಗೆ ಶನಿ ಕರ್ಮ ಸ್ಥಾನದಲ್ಲಿರುವುದರಿಂದ ನಿಮ್ಮ ಕೆಲಸ ಕಾರ್ಯಗಳು 14ನೇ ತಾರೀಖಿನ ವರೆವಿಗೂ ನಿಧಾನವಾಗುತ್ತದೆ. 14ನೇ ತಾರೀಖಿನ ನಂತರ ನಿಮ್ಮ ಕೆಲಸ ಕಾರ್ಯಗಳು ಚುರುಕಿನಿಂದ ಆಗುತ್ತದೆ.

ರವಿ 14ನೇ ತಾರೀಖಿನಿಂದ ಮೀನರಾಶಿಯಲ್ಲಿರುತ್ತಾನೆ. ನಿಮ್ಮ ಮನೆ, ಭೂಮಿ, ವಾಹನಗಳಿಗೆ ಸಂಬಂಧಪಟ್ಟ ಕೆಲಸಗಳು ನಿಮ್ಮ ವೇಗವಾಗಿ ಸಾಗುತ್ತದೆ. ಮನೆ ಕಟ್ಟುವುದು, ವಾಹನ ಖರೀದಿ ಮಾಡುವ ಯೋಗವು ಬರುತ್ತದೆ. ಸರ್ಕಾರಿ ಕೆಲಸಗಳು 14ನೇ ತಾರೀಖಿನ ನಂತರ ಚೆನ್ನಾಗಿ ಆಗುತ್ತದೆ. ಕುಜನು ಕುಂಭರಾಶಿಗೆ 16ನೇ ತಾರೀಖು ಬರುವುದರಿಂದ ಕೆಲವು ಸಮಸ್ಯೆಗಳು ಬರುತ್ತದೆ ಜೊತೆಗೆ ಕೆಲವು ಒಳ್ಳೆಯದು ಆಗುತ್ತದೆ. ನಿಮ್ಮ ಕೆಲಸಗಳು ಬಹಳ ವೇಗವಾಗಿ ನಡೆಯುತ್ತವೆ. VRUSHABHA

ಶನಿ ಮತ್ತು ಕುಜರು ಒಟ್ಟಿಗೆ ಇರುವುದು ನಿಮಗೆ ಸ್ವಲ್ಪ ಆರೋಗ್ಯದಲ್ಲಿ ತೊಂದರೆಯಾಗುತ್ತದೆ. ನಿಮ್ಮ ಆರೋಗ್ಯ ಸಮಸ್ಯೆ ಪರಿಹಾರ ಮಾಡಿಕೊಳ್ಳಲು ಪ್ರತಿದಿನ ಲಕ್ಷ್ಮಿಅಷ್ಟಕಂ ಯಂತ್ರವನ್ನು ಪಠಣ ಮಾಡಿಕೊಳ್ಳಿ ಮತ್ತು ಒಂದು ಮುಷ್ಠಿ ಒಣ ಅವರೇಕಾಳು, ಒಂದು ಮುಷ್ಠಿ ಹೆಸರುಕಾಳನ್ನು ಪ್ರತಿದಿನ ತೆಗೆದು ಇಟ್ಟು 21 ದಿನ ಆದ ಮೇಲೆ ಯಾವುದಾದರೂ ದೇವಸ್ಥಾನಕ್ಕೆ ಕೊಟ್ಟುಬಿಡಿ. ಬುಧನು ಈ ತಿಂಗಳು ಪೂರ್ತಿ ಮೀನರಾಶಿಯಲ್ಲಿರುತ್ತಾನೆ. ಬುಧನು ಈ ಮಾಸದಲ್ಲಿ ಯಾವುದೇ ರೀತಿಯ ಶುಭಫಲವನ್ನು ಕೊಡುತ್ತಿಲ್ಲ.

ಅಶುಭ ಫಲವೇನೆಂದರೆ ಹೆಚ್ಚು ವ್ಯಯ ಮಾಡಿಸುತ್ತಾನೆ. ನಿಮ್ಮ ಮಾತಿನಿಂದ ನಿಮಗೇ ತೊಂದರೆಯಾಗುತ್ತದೆ ಆದ್ದರಿಂದ ಕಡಿಮೆ ಮಾತನಾಡಿ. ಜೊತೆಗೆ ಯಾರಿಗೂ ಮಾತನ್ನು ಕೊಡಬೇಡಿ ಅದನ್ನು ನಡೆಸಲು ಸಾಧ್ಯವಾಗದೇ ತೊಂದರೆಗಳಾಗಬಹುದು. ರವಿಯ ಜೊತೆ ರಾಹು ಇರುವುದರಿಂದ ಆಸ್ತಿ, ಭೂಮಿ ತೆಗೆದುಕೊಳ್ಳುವ ಸಲುವಾಗಿ ಸ್ವಲ್ಪ ತಿರುಗಾಟ ಮತ್ತು ಕೆಲವು ಹೊಸ ವ್ಯಕ್ತಿಗಳನ್ನು ಪರಿಚಯ ಮಾಡಿಕೊಳ್ಳುತ್ತೀರಿ. 16ನೇ ತಾರೀಖಿನ ನಂತರ ಕುಜ, ಶುಕ್ರ, ಶನಿ ಒಟ್ಟಿಗೆ ಸೇರುವುದರ ಮೂಲಕ ಕುಜ ಹತ್ತನೇ ಮನೆಯಲ್ಲಿರುವುದರಿಂದ ಪಾರ್ಟ್ ನರ್ ಶಿಪ್ ವ್ಯವಹಾರ ಮಾಡುವವರು ಒಳ್ಳೆಯ ಲಾಭವನ್ನು ಪಡೆಯುತ್ತಾರೆ. VRUSHABHA

ಲಾಭದಲ್ಲಿ ರಾಹು ಇರುವುದರಿಂದ ನಿಮಗೆ ಶುಭ ಫಲವನ್ನೇ ಕೊಡುತ್ತಿದ್ದಾನೆ. ಬೇರೆಯವರ ಕೈ ಕೆಳಗೆ ಕೆಲಸ ಮಾಡುವವರಿಗೆ ಒಳ್ಳೆಯದಾಗಲಿದೆ. ಆರೋಗ್ಯದಲ್ಲಿ ಹೆಚ್ಚು ಗಮನ ಕೊಡಿ ಮತ್ತು ನಿಮ್ಮ ಆಹಾರ ಪದ್ದತಿಯಲ್ಲಿ ಶಿಸ್ತುಬದ್ಧವಾಗಿರಲಿ. ಕುಜ 16ನೇ ತಾರೀಖು ಸಿಂಹರಾಶಿಗೆ ಬರುವುದರಿಂದ ಮನೆ ತೆಗೆದುಕೊಳ್ಳುವುದು, ಸೈಟ್ ತೆಗೆದುಕೊಳ್ಳುವ ವಿಚಾರದಲ್ಲಿ ಒಳಿತಾಗಲಿದೆ. ವ್ಯವಹಾರಿಕವಾಗಿ ಮತ್ತು ಹಣಕಾಸಿನ ವಿಚಾರವಾಗಿ, ಉದ್ಯೋಗದ ವಿಚಾರವಾಗಿ ಸಾಕಷ್ಟು ಶುಭಫಲವಿದೆ.

ಬೇರೆಯವರ ಕೈಕೆಳಗೆ ಕೆಲಸ ಮಾಡುವವರಿಗೂ ಒಳ್ಳೆಯದಾಗಲಿದೆ. ಸರ್ಕಾರಿ ಕೆಲಸ ಮಾಡುವವರಿಗೆ 16ನೇ ತಾರೀಖಿನ ನಂತರ ಶುಭಫಲವಿದೆ. ಪಂಚಮದಲ್ಲಿ ಕೇತು ಇರುವುದರಿಂದ ಶುಭ ಆದರೇ ಪಂಚಮಾಧಿಪತಿ ಬುಧ ನೀಚನಾಗಿರುವುದರಿಂದ ವಿದ್ಯಾರ್ಥಿಗಳಿಗೆ ಓದಲು ಆಸಕ್ತಿ ಕಡಿಮೆಯಾಗುತ್ತದೆ. ವೃಷಭರಾಶಿಯವರಿಗೆ ಶುಭ ಫಲಗಳೇ ಹೆಚ್ಚಾಗಿ ಇರುವುದರಿಂದ ಭಯಪಡುವ ಅಗತ್ಯವಿಲ್ಲ.VRUSHABHA

Leave A Reply

Your email address will not be published.