Ultimate magazine theme for WordPress.

Tuesday astrology ಮಂಗಳವಾರದ ದಿನ ಸ್ನಾನ ಮಾಡುವಾಗ ಹೀಗೆ ಮಾಡಿ. ಈ ಎರಡು ವಸ್ತುಗಳು ನಿಮ್ಮ ಸ್ನಾನದ್ದಲ್ಲಿದ್ದರೆ ಕಷ್ಟಗಳು ದೂರ.

0 96

Do this while taking bath on Tuesday ನಮಸ್ಕಾರ ಸ್ನೇಹಿತರೆ, ಇವತ್ತಿನ ಸಂಚಿಕೆಯಲ್ಲಿ ಮಂಗಳವಾರದ ದಿನ ಈ ಎರಡು ವಸ್ತುಗಳನ್ನು ಬೆರೆಸಿ ಸ್ನಾನ ಮಾಡಿದರೆ ಸಾಲಗಳು ತೀರುತ್ತವೆ ರೂಢ ಬಾಧೆಗಳು ಕಳೆದು ಮನೆ ಕಟ್ಟಿಸುವಂತ ಕನಸು ನನಸಾಗುತ್ತದೆ

ಭೂಮಿಗೆ ಸಂಬಂಧಪಟ್ಟಂತ ಕೋರ್ಟ್ ಕೇಸ್ಗಳು ಭೂಮಿಯ ದೋಷಗಳು ದೂರವಾಗುತ್ತವೆ ಮಂಗಳವಾರ ದಿನ ಸ್ನಾನದ ನೀರಿಗೆ ಈ ವಸ್ತುಗಳನ್ನು ಬೆರೆಸಿ ಸ್ನಾನವನ್ನು ಮಾಡಬೇಕು ಮನೆಯಲ್ಲಿ ಯಾವ ದೀಪವನ್ನು ಬೆಳಗಿಸಬೇಕು ಎಂಬುದನ್ನು ಈ ಸಂಚಿಕೆಯಲ್ಲಿ ತಿಳಿಸಿ ಕೊಡುತ್ತೇವೆ. ಮನುಷ್ಯನ ತನ್ನ ಅವಶ್ಯಕತೆಗಳನ್ನು ಈಡೇರಿಸಿಕೊಳ್ಳಲು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಆದರೆ ವಿಪರೀತವಾದ ಖರ್ಚು ಹೆಚ್ಚಾದಾಗ ಸಾಲದ ದಾರಿಯನ್ನು ಮನುಷ್ಯ ಹುಡುಕುತ್ತಾನೆ ಸಾಲದ ದಾರಿ ಹೆಚ್ಚಾದಾಗ ಚಿಂತೆ ಮಾಡಲು ಪ್ರಾರಂಭಿಸುತ್ತಾನೆ.

ಅತಿಯಾದ ಸಾಲ ಭಾದೆ ಶೀಘ್ರವಾಗಿ ಕಡಿಮೆಯಾಗಲು ಚೆನ್ನಾಗಿ ಓಡಾಡಲು ಭೂಮಿಯ ಸಂಬಂಧ ಪಟ್ಟಂತಹ ದೋಷಗಳು ನಿವಾರಣೆ ಆಗಲು ಸ್ನಾನದ ನೀರಿಗೆ ಎರಡು ವಸ್ತುಗಳನ್ನು ಬೆರೆಸಿ ಪ್ರತಿ ಮಂಗಳವಾರ ಸ್ನಾನ ಮಾಡಬೇಕು. ಮಂಗಳವಾರ ಸ್ನಾನದ ನೀರಿಗೆ ಕಪ್ಪುಎಣ್ಣೆ ಮತ್ತು ನೆಲ್ಲಿಕಾಯಿ ಪುಡಿಯನ್ನು ಸ್ನಾನದ ನೀರಿಗೆ ಬೆರೆಸುತ್ತಾ ಭಕ್ತಿಯಿಂದ ಸಂಕಲ್ಪವನ್ನು ಮಾಡಿಕೊಳ್ಳಬೇಕು ಇದರಿಂದ ಸಾಲ ಬಾದೆ ಜಮೀನಿನ ಸಮಸ್ಯೆಗಳು ಹಾಗೂ ಮನೆಯ ಸಮಸ್ಯೆಗಳು ಇವೆಲ್ಲವೂ ಕ್ರಮೇಣ ದೈವ ಬಲದಿಂದ ದೂರವಾಗಲಿ ಎಂದು ಕೇಳಿಕೊಳ್ಳಬೇಕು

ನಿಮ್ಮ ಇಷ್ಟ ದೇವರ ಹೆಸರನ್ನು ಹೇಳಿ ಪ್ರಾರ್ಥನೆಯನ್ನು ಮಾಡಬೇಕು. ಇದರ ಜೊತೆಗೆ ನವಗ್ರಹಗಳ ಪ್ರಾಥನೆ ಕೂಡ ಮಾಡಿಕೊಳ್ಳಬೇಕು. ಹೀಗೆ ಸಂಕಲ್ಪ ಮಾಡಿದ ಮೇಲೆ ಅಥವಾ ಪ್ರಾರ್ಥನೆ ಮಾಡಿದ ಮೇಲೆ ನೀರಿನಿಂದ ಸ್ನಾನ ಮಾಡಿದಾಗ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಎಲ್ಲಾ ಕೆಲಸಕ್ಕೂ ಹಣವು ಪ್ರಾಪ್ತಿಯಾಗುತ್ತದೆ ಈ ಒಂದು ಕೆಲಸವನ್ನು ಎಷ್ಟು ದಿನ ಮಾಡಬೇಕು ಎಂದರೆ ನಿಮ್ಮ ಕಷ್ಟಗಳು ನಿವಾರಣೆಯಾಗುವವರೆಗೂ ಮಾಡಬೇಕು. ಸಮಸ್ಯೆಗಳು ತೀರಿದ ಮೇಲೂ ನೀವು ಈ ಸ್ನಾನವನ್ನು ಮಾಡಬಹುದು .

ಸ್ನಾನವಾದ ಮೇಲೆ ಆ ಮಂಗಳವಾರದ ದಿನ ವಿಶೇಷವಾದ ಒಂದು ದೀಪವನ್ನು ಬೆಳಗಿಸಬೇಕು ಈ ದೀಪವನ್ನು ಯಕ್ಷಣಿ ದೀಪ ಅಥವಾ ತ್ರಿಭುಜ ದೀಪ ಎಂದು ಕರೆಯುತ್ತಾರೆ. ಈ ಒಂದು ದೀಪವನ್ನು ನಿಮ್ಮ ಮನೆಯಲ್ಲಿ ಯಾವುದೇ ಕೋಣೆಯಲ್ಲಿ ಆಗಲಿ ಸ್ನಾನದ ಒಂದು ಮನೆಯನ್ನು ಹೊರತುಪಡಿಸಿ ಉಳಿದ ಯಾವುದೇ ಕೋಣೆಯಲ್ಲಿ ಕೂಡ ದಕ್ಷಿಣ ಮೂಲೆಯಲ್ಲಿ ಇಟ್ಟು ದೀಪವನ್ನು ಬೆಳಗಿಸಬೇಕು.

ದಕ್ಷಿಣ ಮೂಲೆಯಲ್ಲಿ ಒಂದು ಮಣೆ ಅಥವಾ ಪೀಠವನ್ನು ಮೊದಲು ಏರ್ಪಾಡು ಮಾಡಿಕೊಳ್ಳಬೇಕು. ಅದರ ಮೇಲೆ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಬೇಕು ಕುಂಕುಮದ ಬೊಟ್ಟನ್ನು ಇಟ್ಟು ನಂತರ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಮನೆಯ ಮೇಲೆ ಒಂದು ತ್ರಿಭುಜದ ಆಕಾರದಲ್ಲಿ ಒಂದು ರಂಗೋಲಿಯನ್ನು ಬರೆಯಬೇಕು ಗಂಧ ಅಥವಾ ಚಂದನವನ್ನು ಬಳೆಸಿ ಹೃಮ್ ಎಂಬ ಅಕ್ಷರವನ್ನು ತ್ರಿಭುಜದ ಮಧ್ಯಭಾಗದಲ್ಲಿ ಬರೆಯಬೇಕು. ದೊಡ್ಡದಾದಂತಹ ಬರೆದ ಅಕ್ಷರದ ಮೇಲೆ ಮಣ್ಣಿನ ದೀಪವನ್ನು ಇಟ್ಟು ಎಳ್ಳೆಣ್ಣೆಯನ್ನು ಹಾಕಿ 9 ಬತ್ತಿಗಳನ್ನು ಬಿಡಿಬಿಡಿಯಾಗಿ ಕೂರಿಸಿ ದೀಪಾರಾಧನೆಯನ್ನು ಮಾಡಬೇಕು ದೀಪದ ಬೆಳಕು ಕೂಡ ದಕ್ಷಿಣಾ ಧಿಕ್ಕಿಗೆ ಬೆಳಗುವಂತೆ ಇಡಬೇಕು.

ಬೆಳಿಗ್ಗೆ ಸ್ನಾನ ಆದ ನಂತರ ಈ ತ್ರಿಭುಜ ದೀಪ ಬೆಳಗುವದರಿಂದ ಖಂಡಿತವಾಗಿಯೂ ಸಾಲದ ಸಮಸ್ಯೆ ಬೇಗ ತೀರುತ್ತದೆ, ಹಾಗೆ ಮಂಗಳವಾರದ ದಿನ ಸೂರ್ಯ ಮುಳುಗಿದ ಮೇಲೆ ಸಂಜೆ ವೇಳೆ 9 ಮಕ್ಕಳಿಗೆ ನಿಮ್ಮ ಕೈಯಿಂದ ಸಿಹಿಯನ್ನು ಹಂಚಬೇಕು ಈ ಕೆಲಸವನ್ನು ಪ್ರತಿ ಮಂಗಳವಾರ ಮಾಡುವುದರಿಂದ ಸಾಲಗಳು ಕಡಿಮೆಯಾಗುತ್ತದೆ ಮಂಗಳವಾರ ನ್ಯಾಯ ಪಂಚಾಯತಿಯ ಕೂರಬಾರದು ಇದರಿಂದ ವಾದ ವಿವಾದಗಳು ಹೆಚ್ಚಾಗುತ್ತವೆ.

ಮನೆ ಅಥವಾ ಜಮೀನು ಖರೀದಿ ಮಾಡಲು ಮಂಗಳವಾರದಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾನೇ ಉತ್ತಮ ಅಂದರೆ ಭೂಮಿ ಖರೀದಿ ಅಥವಾ ಮನೆ ಖರೀದಿ ನಿರ್ಧಾರಗಳನ್ನು ತೆಗೆದುಕೊಂಡರೆ ಉತ್ತಮ ಫಲ ವ್ಯಾಪ್ತಿಯಾಗುತ್ತದೆ

ಆದರೆ ಯಾವುದೇ ಕಾರಣಕ್ಕೂ ಮಂಗಳವಾರದಂದು ಯಾವುದೇ ರೀತಿಯಾಗಿ ರಿಜಿಸ್ಟೇಷನ್ ಕೆಲಸ ಮಾಡಬಾರದು. ನೋಡಿದ್ರಲ್ಲ ಸ್ನೇಹಿತರೆ ಯಾವ ಕೆಲಸ ಮಾಡಬೇಕು ಯಾವ ಕೆಲಸ ಮಾಡಬಾರದು ಜಮೀನು ಖರೀದಿ ಮಾಡಲು ಅಥವಾ ಇನ್ನಿತರ ಯಾವುದೇ ಕೆಲಸಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳೋದು ಮಂಗಳವಾರವೇ ಒಳ್ಳೆಯ ದಿನ ಎಂದು ಹೇಳಬಹುದು. ಸ್ನೇಹಿತರೆ ಮಾಹಿತಿ ಇಷ್ಟ ಆಗದೆ ಲೈಕ್ ಮಾಡಿ ಶೇರ್ ಮಾಡಿ ಕಾಮೆಂಟ್ ಮಾಡಿ ಧನ್ಯವಾದಗಳು.

Read more

Leave A Reply

Your email address will not be published.