Ultimate magazine theme for WordPress.

wealth vastu tips ಜೀವನ ದಾರಿದ್ರ್ಯ,ಬಡತನ ಅನಿಸುತ್ತಿದೆಯೇ? ಹೀಗೆ ಮಾಡಿ. ಈ ಒಂದು ಕೆಲಸ ನಿಮ್ಮ ದಾರಿದ್ರ್ಯ ಹೋಗಲಾಡಿಸಿ ಮತ್ತು ಜೀವನವನ್ನು ಸುಂದರಗೊಳಿಸುತ್ತದೆ.

0 87

This one job will remove your boredom and make life beautiful ನಮಸ್ಕಾರ ಸ್ನೇಹಿತರೆ. ಈ ಒಂದು ಸಂಚಿಕೆಯಲ್ಲಿ ಜೀವನದಲ್ಲಿ ಮೊದಲು ಚೆನ್ನಾಗಿದ್ದೀವಿ ಈಗ ಮೊದಲಿನ ಹಾಗೆ ಇರಲು ಆಗುತ್ತಿಲ್ಲ ಕಷ್ಟದ ಮೇಲೆ ಕಷ್ಟಗಳು ಇದ್ದಕ್ಕಿದ್ದಂತೆ ಎಲ್ಲಾ ರಂಗದಲ್ಲೂ ಕೂಡ ನಷ್ಟ ಆಗುತ್ತಿದೆ, ಯಾವ ಕೆಲಸಕ್ಕೆ ಕೈ ಹಾಕಿದರೂ ಕೂಡ ಏಳಿಗೆ ಅನ್ನುವುದು ಆಗುತ್ತಿಲ್ಲ.

ಸಂಪಾದನೆ ಅನ್ನುವುದೇ ಇಲ್ಲ ಕೆಲಸಕ್ಕೆ ಯಾಕೆ ಹೋಗುತ್ತಿದ್ದೇವೆ ಏನು ಮಾಡುತ್ತಿದ್ದೀವಿ ಅನ್ನುವುದೇ ಗೊತ್ತಾಗುತ್ತಿಲ್ಲ ಸಂಬಳ ಹೇಗೆ ಖರ್ಚಾಗುತ್ತೆ ಅನ್ನುವುದೇ ಗೊತ್ತಾಗುತ್ತಿಲ್ಲ ಕುಟುಂಬದಲ್ಲಿ ಹಣದ ಬಲ ಅನ್ನುವುದೇ ಇಲ್ಲ ಅಭಿವೃದ್ಧಿ ಇದಕ್ಕಿಂತ ಕ್ಷೀಣಿಸಿ ಬದುಕುವ ಆಸೆಯೂ ಇಲ್ಲವಾಗಿದೆ ಎನ್ನುವವರಿಗೆ ಈ ಒಂದು ಮಾಹಿತಿ ತುಂಬಾ ಉಪಯುಕ್ತಕರವಾಗಿದೆ.

ಜೀವನದಲ್ಲಿ ಕಳೆದುಕೊಂಡಂತಹ ನೆಮ್ಮದಿ ಹಣ ಖುಷಿ ಎಲ್ಲವೂ ಕೂಡ ಮರಳಿ ಪಡೆಯುವುದಕ್ಕೆ ಮನೆಯಲ್ಲಿ ಯಾವ ಗಿಡವನ್ನು ತಪ್ಪದೇ ಬೆಳೆಸಬೇಕು, ಯಾವ ದೇವರ ದರ್ಶನವನ್ನು ಪಡೆಯಬೇಕು, ಯಾವ ಪರಿಹಾರಗಳನ್ನು ಪಾಲಿಸಬೇಕು ಎನ್ನುವುದನ್ನು ಇವತ್ತಿನ ಈ ಸಂಚಿಕೆಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಜೀವನದಲ್ಲಿ ನಿಂತು ಹೋದಂತಹ ಅಭಿವೃದ್ಧಿಯನ್ನು ಅಥವಾ ಏಳಿಗೆಯನ್ನು ಮತ್ತೆ ಪಡೆಯುವುದಕ್ಕೆ ವಿಶೇಷವಾದ ಧನ ಲಾಭವನ್ನು ಹೊಂದುವುದಕ್ಕೆ ಸಂಪಾದನೆಯನ್ನು ಹೆಚ್ಚು ಮಾಡಿಕೊಳ್ಳಲು ಆದಾಯದ ಮಾರ್ಗಗಳನ್ನು ಹೆಚ್ಚಿಸಿಕೊಳ್ಳಲು ಮುಖ್ಯವಾಗಿ ನದಿ ತೀರದಲ್ಲಿ ಇರುವಂತಹ ಯಾವುದೇ ದೇವರ ಕ್ಷೇತ್ರಗಳಿಗೆ ಭೇಟಿಯನ್ನು ನೀಡಿ ಅಲ್ಲಿರುವಂತಹ ಯಾವುದೇ ದೇವರ ದರ್ಶನವನ್ನು ಮಾಡಿ ಬರಬೇಕು

ಮನೆಯಲ್ಲಿ ದುಡಿಯುವಂತಹ ಕೈ ಯಾರದಿರುತ್ತೋ ಕುಟುಂಬ ಸಮೇತರಾಗಿ ತೆರಳಿ ನದಿ ತೀರದಲ್ಲಿ ಇರುವಂತಹ ಪುಣ್ಯಕ್ಷೇತ್ರಗಳಿಗೆ ಹೋಗಿ ಅಲ್ಲಿ ದರ್ಶನವನ್ನು ಪಡೆದುಕೊಂಡು ಬಂದರೆ ಜೀವನದಲ್ಲಿ ಅಭಿವೃದ್ಧಿ ಕುಂಠಿತಗೊಳ್ಳಲು ಆರಂಭಿಸಿದಾಗ ಮಾಡಬೇಕಾದಂತ ಕೆಲಸ ಏನೆಂದರೆ ನದಿ ತೀರದ ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ದೇವರ ದರ್ಶನವನ್ನು ಪಡೆಯಬೇಕು.

ವ್ಯಾಪಾರ ನಷ್ಟ ಉದ್ಯೋಗದಲ್ಲಿ ನಷ್ಟ ಮತ್ತು ಮನೆಯಲ್ಲಿ ಕಲಹಗಳು ಎಂತದ್ದೇ ಕಷ್ಟಗಳಿದ್ದರೂ ನೀವು ಜನಿಸಿದ ದಿನ ಆಗಿರಬಹುದು ಜನ್ಮ ನಕ್ಷತ್ರ ಬರುವಂತಹ ದಿನ ಆಗಿರಬಹುದು ಅಂತಹ ವಿಶೇಷ ದಿನಗಳಲ್ಲಿ ನದಿ ತೀರದ ದೇವರುಗಳ ದರ್ಶನವನ್ನು ಮಾಡುವುದನ್ನು ಮಾತ್ರ ಮರೆಯಬಾರದು. ಹಾಗೆಯೇ ನಿಮ್ಮ ಮನೆಯ ಆವರಣದಲ್ಲಿ ಮರೆಯದೆ ಕರಿಬೇವಿನ ಗಿಡವನ್ನು ನೆಟ್ಟು ಬೆಳೆಸುತ್ತಾ ಪೋಷಿಸುತ್ತಾ ಬರಬೇಕು.

ಆ ಕಹಿಬೇವಿನ ಗಿಡ ಹೇಗೆ ಬೆಳೆಯುತ್ತದೆ ಹಾಗೆಯೇ ನಿಮ್ಮ ಮನೆಯ ಅಭಿವೃದ್ಧಿಯಾಗಿ ಆಗುತ್ತಾ ಹೋಗುತ್ತದೆ ಅದೃಷ್ಟ ಎನ್ನುವುದು ಮರಳಿ ಪ್ರಾಪ್ತಿಯಾಗುತ್ತದೆ . ಕಳೆದುಕೊಂಡಂತಹ ಹಣ ನೆಮ್ಮದಿ ಐಶ್ವರ್ಯ ನಿಮ್ಮದಾಗುತ್ತದೆ, ಇನ್ನೂ ಕೂಡ ಹೆಚ್ಚಿನದಾಗಿ ವೃದ್ಧಿಯನ್ನು ಗಳಿಸುತ್ತಾ ಹೋಗುತ್ತೀರಾ ಕ್ರಮವಾಗಿ ಕಷ್ಟಗಳೆಲ್ಲವೂ ಕೂಡ ದೂರವಾಗುತ್ತವೆ. ಹಾಗೂ ನಿಮ್ಮ ಮನೆಯಲ್ಲಿ ತುಳಸಿ ಗಿಡವನ್ನು ಇಡುವಾಗ ಲಕ್ಷ್ಮಿ ತುಳಸಿ ಹಾಗೂ ಕೃಷ್ಣ ತುಳಸಿ ಎಂಬ ಇರುವಂತೆ ನೋಡಿಕೊಳ್ಳಿ

ಎರಡು ಗಿಡದ ಮುಂದೆ ತಂದೆ ಸಮಯದಲ್ಲಿ ತುಪ್ಪದ ದೀಪವನ್ನು ಬೆಳಗಿಸಿ ಸಾಮ್ರಾಣಿ ಧೂಪವನ್ನು ಹಾಕಬೇಕು. ಈ ಪರಿಹಾರವನ್ನು ಪಾಲಿಸಿದರೆ ಮನೆಗೆ ವಿಶೇಷವಾಗಿ ಐಶ್ವರ್ಯ ಪ್ರಾಪ್ತಿಯಾಗುತ್ತದೆ, ನಿಂತು ಹೋದ ಕೆಲಸಗಳು ಪೂರ್ಣಗೊಳ್ಳುತ್ತವೆ ಮನೆಗೆ ಲಕ್ಷ್ಮಿ ಕೃಪೆಯ ಪ್ರಾಪ್ತಿಯಾಗುತ್ತದೆ ಆದಾಯಗಳು ಹೆಚ್ಚಾಗುತ್ತದೆ ಮನೆಯಲ್ಲಿ ದುಡ್ಡು ಅನ್ನೋದು ಚೆನ್ನಾಗಿ ಓಡಾಡುತ್ತದೆ ಜನ್ಮ ನಕ್ಷತ್ರ ನಾಮ ನಕ್ಷತ್ರ ಅಥವಾ ಜನ್ಮದಿನದಂದು ಯಾರಿಗಾದರೂ ಪಂಡಿತರಿಗೆ ದಕ್ಷಿಣೆ ಸಮೇತವಾಗಿ ಲಕ್ಷ್ಮಿ ತುಳಸಿಯನ್ನು ದಾನವಾಗಿ ನೀಡುವುದರಿಂದ ನೀವು ಕಳೆದುಕೊಂಡ ಅದೃಷ್ಟ ಮರಳಿ ಪ್ರಾಪ್ತಿಯಾಗುತ್ತದೆ.

ಮನೆಯಲ್ಲಿ ಸ್ತ್ರೀಯರು ಸಂಜೆಯ ಸಮಯದಲ್ಲಿ ದೀಪ ಬೆಳಗಿಸುವಾಗ ಅಥವಾ ದೀಪ ಬೆಳಗಿಸಿದ ನಂತರ ಮಣಿ ದ್ವೀಪಗಳ ಎಂದು ಪುಸ್ತಕಗಳು ದೊರೆಯುತ್ತವೆ ಅಥವಾ ಯೂಟ್ಯೂಬಲ್ಲಿ ಕೂಡ ನಿಮಗೆ ಆಡಿಯೋ ಸಿಗುತ್ತದೆ ಇದನ್ನು ಓದುವುದರಿಂದ ನಿಮಗೆ ಇಷ್ಟಾರ್ಥಗಳು ಪ್ರಾಪ್ತಿಯಾಗುತ್ತವೆ ದೇವಾಲಯದಲ್ಲಿ ದೇವರಿಗಾಗಿ ದೇವಸ್ಥಾನವನ್ನು ಶುದ್ದಿ ಮಾಡಲು ನೇಮಕ ಮಾಡಿರುವಂತಹ ಸೇವಕರಿಗೆ ಮೆಣಸು ಹಾಕಿದಂತಹ ಕಾರ ಪೊಂಗಲ್ ಅನ್ನು ಪ್ರಸಾದ ರೂಪದಲ್ಲಿ ನೀಡಬೇಕು ದಾರಿದ್ರೆಗಳು ದೂರವ್ಯ ಅನೇಕ ಮಾರ್ಗಗಳಿಂದ ಅದೃಷ್ಟ ಎನ್ನುವುದು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.

ಗೋಶಾಲೆಯಲ್ಲಿರಬಹುದು ಅಥವಾ ಗೋವುಗಳ ಸೇವೆಯನ್ನು ಮಾಡುವ ಸೇವಕರಿಗೂ ಕೂಡ ಕಾರ ಪೊಂಗಲ್ ಅನ್ನು ತಿನ್ನಲು ಹಂಚಿದರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ. ನೋಡಿ ಸ್ನೇಹಿತರೆ ಈ ಎಲ್ಲಾ ಪರಿಹಾರಗಳನ್ನು ಮಾಡುವುದರಿಂದ ನಿಮ್ಮ ಮನೆಗೆ ಅಂಟಿಕೊಂಡಿರುವ ಬಡತನ ಹಾಗೂ ದರಿದ್ರವೂ ದೂರವಾಗುತ್ತದೆ ಹಾಗೂ ನೆಮ್ಮದಿಯ ಜೀವನವನ್ನು ನೀವು ಅನುಭವಿಸಬಹುದು. ಸ್ನೇಹಿತರೆ ಮಾಹಿತಿ ಇಷ್ಟದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಜೈ ಗೋ ಮಾತೆ ಎಂದು ಕಮೆಂಟ್ ಮಾಡಿ. ಎಲ್ಲರಿಗೂ ಒಳ್ಳಯದಾಗಲಿ ಧನ್ಯವಾದಗಳು.

READ MORE

Leave A Reply

Your email address will not be published.