remedy in astrology ಮಣ್ಣಿನ ಮಡಿಕೆ ತಂದು ಅದರಲ್ಲಿ ಇದನ್ನು ಬಚ್ಚಿಡಿ!
remedy in astrology vastu tips ಮಣ್ಣಿನ ಮಡಿಕೆಯ ಈ ಉಪಾಯ ನಿಮ್ಮನ್ನು ಕೋಟ್ಯಾಧೀಶರನ್ನಾಗಿಸುತ್ತದೆ ಎಂಬ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹಣವಿಲ್ಲದಿದ್ದರೇ ಯಾವ ಕೆಲಸಗಳು ಆಗುವುದಿಲ್ಲ. ಈಗಿನ ಕಾಲದಲ್ಲಿ ದುಡ್ಡಿಲ್ಲವೆಂದಾರೇ ಏನು ನಡೆಯುವುದಿಲ್ಲ. ಹಾಗಾಗಿ ನಾವು ಹಣ ಸಂಪಾದನೆ ಮಾಡಲು ಹಗಲು ರಾತ್ರಿ ಕಷ್ಟಪಟ್ಟು ಕೆಲಸ ಮಾಡುತ್ತೀವಿ. ಆದರೇ ಮಹಾಲಕ್ಷ್ಮಿ ಮಾತ್ರ ಚಂಚಲೆ ಎಂದು ಹೇಳುತ್ತಾರೆ. ಲಕ್ಷ್ಮಿ ಮಾತೆಯನ್ನು ಒಲಿಸಿಕೊಳ್ಳುವುದು ತುಂಬಾ ಕಷ್ಟ.
ಕೆಲವೊಂದು ಉಪಾಯಗಳನ್ನು ಮಾಡಿಕೊಳ್ಳುವುದರಿಂದ ಮಹಾಲಕ್ಷ್ಮಿಯನ್ನು ನಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುವಂತೆ ಮಾಡಿಕೊಳ್ಳಬಹುದು. ಮಣ್ಣಿನ ಪಾತ್ರೆಯನ್ನು ಮನೆಯ ಈ ಸ್ಥಳದಲ್ಲಿ ಇಡಿ. ಮನೆಯಿಂದ ದೂರವಾಗುತ್ತಾಳೆ ದರಿದ್ರ ಲಕ್ಷ್ಮಿ, ಸ್ಥಿರವಾಗಿ ವಾಸ ಮಾಡುತ್ತಾಳೆ ಸಂಪತ್ ಲಕ್ಷ್ಮಿ. ಅದೇ ಮಹಾಲಕ್ಷ್ಮಿ ಮನೆಯಲ್ಲಿ ಖುಷಿ ಖುಷಿಯಾಗಿ ನೆಲೆ ನಿಲ್ಲುತ್ತಾಳೆ. ಸಾಮಾನ್ಯವಾಗಿ ನಮ್ಮ ಅಡುಗೆ ಮನೆಯಲ್ಲಿ ಸ್ಟೀಲ್, ಪ್ಲಾಸ್ಟಿಕ್, ಗಾಜು ಪಾತ್ರೆಗಳೇ ಹೆಚ್ಚು ಕಾಣಿಸಿಕೊಳ್ಳುತ್ತವೆ. remedy in astrology
ಅಲ್ಲಿ ಹುಡುಕಿದರೇ ಒಂದು ಮಣ್ಣಿನ ಪಾತ್ರೆಯೂ ಸಿಗುವುದಿಲ್ಲ. ಹಿಂದಿನ ಕಾಲದಲ್ಲಿ ಮನೆಯ ಹೆಣ್ಣು ಮಕ್ಕಳು ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುತ್ತಿದ್ದರು. ಆ ಅಡುಗೆ ಪರಿಮಳ ಗಮ್ ಎಂದು ಪಸರಿಸುತ್ತಿತ್ತು. ಮಣ್ಣಿನ ಪಾತ್ರೆಯ ಅಡುಗೆ ಮತ್ತು ಮಣ್ಣಿನ ತಟ್ಟೆಯಲ್ಲಿ ಊಟ ಮಾಡುವ ಅನುಭವ ಊಟ ಮಾಡಿದವನಿಗೆ ಗೊತ್ತು. ಹೊಟ್ಟೆಯು ತುಂಬುತ್ತಿತ್ತು, ಜೀವಕ್ಕೂ ತೃಪ್ತಿ ಸಿಗುತ್ತಿತ್ತು. ಆದರೇ ಕಾಲಕ್ಕೆ ತಕ್ಕಂತೆ ಅಡುಗೆ ಶೈಲಿಯ ಜೊತೆ ಜೊತೆಗೆ ಮಣ್ಣಿನ ಪಾತ್ರೆಗಳೇ ಕಾಣಿಸುತ್ತಿಲ್ಲ.
ಮಹಾಭಾರತದಲ್ಲಿ ಶ್ರೀಕೃಷ್ಣನು ಯುಧಿಷ್ಠಿರನಿಗೆ ಐದು ಪ್ರಮುಖ ವಸ್ತುಗಳನ್ನು ಹೇಳಿದ್ದ ಅದರಲ್ಲಿ ಮಣ್ಣಿನ ಪಾತ್ರೆಯಲ್ಲಿ ತುಂಬಿಟ್ಟ ನೀರಿನ ಬಗ್ಗೆ ರಹಸ್ಯವನ್ನ ಹೇಳಿದ್ದ. ಮಣ್ಣಿನ ಪಾತ್ರೆಯಲ್ಲಿ ನೀರು ಮತ್ತು ಇನ್ನಿತರೇ ವಸ್ತುಗಳನ್ನು ತುಂಬಿ ಯಾವ ದಿಕ್ಕಿನಲ್ಲಿಡುವುದರಿಂದ ಮನೆಯಲ್ಲಿ ಹಣದ ಹೊಳೆ ಹರಿಯುತ್ತದೆ ಎಂಬ ರಹಸ್ಯವನ್ನು ತಿಳಿಸುತ್ತೇವೆ. remedy in astrology
ಮಣ್ಣಿನ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಮತ್ತು ಊಟ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಲಾಭಗಳಿವೆ. ಇದರಲ್ಲಿ ಆಹಾರ ಪದಾರ್ಥಗಳು ನಿಧಾನವಾಗಿ ಬೇಯುವುದರಿಂದ ಪೋಷಕಾಂಶಗಳು ನಷ್ಟವಾಗುವುದಿಲ್ಲ ಹಾಗೂ ಕಡಿಮೆ ಎಣ್ಣೆಯಲ್ಲಿ ಸುಲಭವಾಗಿ ಅಡುಗೆ ಮಾಡಬಹುದು ಇದರಿಂದ ಕೊಲೆಸ್ಟ್ರಾಲ್ ಸಮಸ್ಯೆಯು ಕಾಡುವುದಿಲ್ಲ. ಹೃದಯದ ಆರೋಗ್ಯ ಇನ್ನು ವೃದ್ಧಿಸುತ್ತದೆ. ಇದೇ ಕಾರಣದಿಂದ ಮಣ್ಣಿನ ಪಾತ್ರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆ.
ಋಷಿಮುನಿಗಳೆಲ್ಲಾ ಯಜ್ಞ ಯಾಗಾದಿಗಳನ್ನು ಮಾಡಿದರೇ ಅವರು ಮಣ್ಣಿನ ಪಾತ್ರೆಗಳನ್ನು ಮಾತ್ರ ಬಳಸುತ್ತಿದ್ದರು ಕಾರಣವೇನೆಂದರೆ ಇದು ಶುಭದ ಸಂಕೇತವಾಗಿದೆ. ಕತೆ, ಪುರಾಣಗಳಲ್ಲೂ ಮಹತ್ತ್ವವನ್ನು ನೀಡಲಾಗಿದೆ. ಕೆಲವು ಕತೆಗಳಲ್ಲಿ ಮಣ್ಣಿನ ಪಾತ್ರೆಗಳನ್ನು ಧನಲಕ್ಷ್ಮಿಗೆ ಹೋಲಿಸಲಾಗಿದೆ. ಆದ್ದರಿಂದ ಮನೆಯಲ್ಲಿ ಮಣ್ಣಿನ ಪಾತ್ರೆಯನ್ನು ಇಟ್ಟರೇ ಲಕ್ಷ್ಮಿ ನೆಲೆಸುತ್ತಾಳೆಂಬ ನಂಬಿಕೆ ಇದೆ. ವಾಸ್ತುಶಾಸ್ತ್ರದ ಪ್ರಕಾರ ಮನೆಯ ಉತ್ತರ ದಿಕ್ಕಿನಲ್ಲಿ ಮಣ್ಣಿನ ಪಾತ್ರೆಯನ್ನು ಇಟ್ಟರೇ ಒಳ್ಳೆಯ ಲಾಭವಾಗುತ್ತದೆ. ಮಹಾಲಕ್ಷ್ಮಿ ಪ್ರಸನ್ನಳಾಗಿ ಮನೆಯಲ್ಲಿ ನೆಲೆಸುತ್ತಾಳೆ.
ಮನೆಗೆ ಮೊದಲು ಮಣ್ಣಿನ ಪಾತ್ರೆಯನ್ನು ತಂದಾಗ ಅದನ್ನು ತೊಳೆದು ಪೂಜೆ ಮಾಡಿ, ಪಕ್ಕದಲ್ಲಿ ದೀಪ ಹಚ್ಚಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಸಂಪೂರ್ಣವಾಗಿ ದೂರವಾಗುತ್ತದೆ. ಸುಖ, ಶಾಂತಿ ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ. ಮಣ್ಣಿನ ಪಾತ್ರೆಯ ಜೊತೆಗೆ ಇದೇ ಪಾತ್ರೆಯಲ್ಲಿ ತುಂಬಿಡುವ ನೀರಿನ ಬಗ್ಗೆಯೂ ಕೆಲವು ವಿಚಾರಗಳನ್ನು ತಿಳಿದುಕೊಂಡರೆ ಉತ್ತಮ. ಶಾಸ್ತ್ರಗಳಲ್ಲಿ ನೀರನ್ನು ಜೀವನೇ ಎಂದು ಹೇಳಲಾಗಿದೆ. ವಾಸ್ತುಶಾಸ್ತ್ರದಲ್ಲಿ ನೀರನ್ನು ಇಡಲು ಪ್ರತ್ಯೇಕ ಸ್ಥಾನವನ್ನು ನೀಡಲಾಗಿದೆ. remedy in astrology
ನಿಮ್ಮ ಮನೆಯಲ್ಲಿ ಯಾವ ಮೂಲೆಯಲ್ಲಿ ನೀರು ಇಡುತ್ತಿರೋ ಮತ್ತು ಅಲ್ಲಿಂದ ನೀರು ಕುಡಿಯುತ್ತೀರೋ ನಿಮ್ಮ ಮನಸ್ಸು ಮತ್ತು ದೇಹದ ಮೇಲೆ ಪರಿಣಾಮಬೀರುತ್ತದೆ. ನೀವು ಮಲಗುವಾಗ ನೀವು ಕುಡಿಯಲು ನೀರನ್ನು ನಿಮ್ಮ ತಲೆಯ ಮೇಲ್ಬಾಗದಲ್ಲಿ ಇಟ್ಟುಕೊಳ್ಳಬೇಡಿ, ಹಾಸಿಗೆ ಪಕ್ಕದಲ್ಲಿ ಅಥವಾ ಕೆಳಗಡೆ ಇಡಿ. ಅದು ಪೂರ್ವ ಮತ್ತು ಪಶ್ಚಿಮ ಭಾಗವಾಗಿದ್ದರೇ ಉತ್ತಮ. ಜಲದಲ್ಲಿರುವ ಶಕ್ತಿಯು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ ನೀರು ಇಡುವ ಜಾಗ ನಿಮ್ಮ ಶಿರದಿಂದ ದೂರವಿದ್ದರೇ ಒಳ್ಳೆಯದು.
ಈಶಾನ್ಯ ಮೂಲೆಯಲ್ಲಿ ನೀರನ್ನು ಇಟ್ಟರೇ ಒಳ್ಳೆಯದು. ಮತ್ತು ಪಶ್ಚಿಮ ದಿಕ್ಕಿನಲ್ಲಿ ನೀರನ್ನು ಇಟ್ಟರೇ ಐಶ್ವರ್ಯ ಬರುತ್ತದೆ. ಇದೇ ನೀರಿನ ಪಾತ್ರೆಯನ್ನು ದಕ್ಷಿಣ ಪಾತ್ರೆಯಲ್ಲಿ ದಿಕ್ಷಿಣ ದಿಕ್ಕಿನಲ್ಲಿ ಇಟ್ಟರೇ ಕೇಡು ತಪ್ಪಿದ್ದಲ್ಲ. ಅದರಲ್ಲೂ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಮನೆಯ ಉತ್ತರ ದಿಕ್ಕಿನಲ್ಲಿ ನೀರಿನ ಟ್ಯಾಂಕ್ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಲ್ಲಿ ಶಾಂತಿ ಮತ್ತು ಸುಖ ವೃದ್ಧಿಯಾಗುತ್ತದೆ. ದಕ್ಷಿಣ ಮತ್ತು ಪೂರ್ವದಿಕ್ಕಿನಲ್ಲಿ ನೀರನ್ನು ಇಡಲೇಬಾರದು. ಕಾರಣ ಅದು ಅಗ್ನಿಮೂಲೆ.
ಅಗ್ನಿ ಮತ್ತು ನೀರಿನ ಮಿಲನವಾದರೇ ಗಂಭೀರವಾದ ವಾಸ್ತುದೋಷವಾಗುತ್ತದೆ. ಶ್ರೀ ಕೃಷ್ಣ ಹೇಳುವಂತೆ ಅಡುಗೆ ಮನೆಯಲ್ಲಿ ಮಣ್ಣಿನ ಪಾತ್ರೆ ಇದ್ದರೇ ತುಂಬಾ ಉತ್ತಮವಂತೆ . ಅವುಗಳನ್ನು ಬಳಸಿದರೇ ಸುಖ ಶಾಂತಿ ನೆಲೆಸುತ್ತದೆ ಇದನ್ನು ವಿಜ್ಞಾನ ಕೂಡ ಒಪ್ಪುತ್ತದೆ. ಮಣ್ಣಿನ ಪಾತ್ರೆ ತಂದು ಅದರಲ್ಲಿ ನೀರನ್ನು ತುಂಬಿ ಇಟ್ಟರೇ ಅದರಲ್ಲಿ ಪೃಥ್ವಿಯ ಮಿಲನವಾಗುತ್ತದೆ. ಆಗ ಸಕಾರಾತ್ಮಕ ಶಕ್ತಿ ಹೊರಹೋಗುತ್ತದೆ. ಇಂತಹ ನೀರನ್ನು ಕುಡಿಯುವುದರಿಂದ ನಿಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ. remedy in astrology
ಮಣ್ಣಿನ ಮಡಿಕೆಯಲ್ಲಿ ನೀರನ್ನು ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಚರ್ಮಕ್ಕೆ ಸಂಬಂಧಪಟ್ಟ ಸಮಸ್ಯೆಗಳು ದೂರವಾಗುತ್ತದೆ. ಜೊತೆಗೆ ತ್ವಚೆಯು ಕೂಡ ಕಾಂತಿಯುಕ್ತವಾಗಿರುತ್ತದೆ. ಮಣ್ಣಿನ ಪಾತ್ರೆಯಲ್ಲಿ ದವಸ ಧಾನ್ಯಗಳನ್ನು ಇಡಿ ಅಥವಾ ನೀರನ್ನು ತುಂಬಿ ಇಡಿ ಆದರೇ ಮನೆಯಲ್ಲಿ ಒಂದು ಮಣ್ಣಿನ ಪಾತ್ರೆ ಇರಲೇಬೇಕು. ಆ ಮಣ್ಣಿನ ಪಾತ್ರೆಯಲ್ಲಿ ಧಾನ್ಯಗಳನ್ನು ತುಂಬಿಸಿ ಉತ್ತರ ದಿಕ್ಕಿನಲ್ಲಿಡಬೇಕು. ಹೀಗೆ ಇಟ್ಟರೇ ಅನ್ನಪೂರ್ಣೇಶ್ವರಿಯ ಕೃಪೆ ಸದಾ ನಿಮ್ಮ ಮೇಲೆ ಇರುತ್ತದೆಯಂತೆ.
ನಿಮ್ಮ ಮನೆಯಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರೇ ಮಣ್ಣಿನ ಕುಂದದಲ್ಲಿ ಗಿಡ ನೆಟ್ಟು ನೀರನ್ನು ಹಾಕಿರಿ ಅದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಆರ್ಥಿಕ ಸಮಸ್ಯೆ ಅತಿಯಾಗಿದ್ದರೇ ಅಥವಾ ಆರ್ಥಿಕ ಸಮಸ್ಯೆ ಇದ್ದರೇ ಮಣ್ಣಿನ ಮಡಿಕೆಯನ್ನು ಉತ್ತರ ದಿಕ್ಕಿನಲ್ಲಿಟ್ಟು ನೀರನ್ನು ತುಂಬಿಸಿ ಆ ಮಣ್ಣಿನ ಪಾತ್ರೆಯ ಬಳಿ ತುಪ್ಪದಿಂದ ದೀಪ ಹಚ್ಚಿದರೇ ಅದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. remedy in astrology
ನಿಮಗೆ ಹಣದ ಸಮಸ್ಯೆ ಇದ್ದರೆ ಮಣ್ಣಿನ ಪಾತ್ರೆಗಳಿಂದ ಕಾಳುಗಳನ್ನು ಹಾಕಿಡಿ. ಕುಡಿಯಲು ನೀರನ್ನು ಮನೆಯ ಮೇಲೆ ಅಥವಾ ಬಾಲ್ಕಾನಿಯಲ್ಲಿ ಇಟ್ಟರೇ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮಣ್ಣಿನ ಪಾತ್ರೆ ಮನೆಯಲ್ಲಿ ಹೊಡೆಯದಂತೆ ನೋಡಿಕೊಳ್ಳಿ. ಒಟ್ಟಾರೆಯಾಗಿ ಮಣ್ಣಿನ ಪಾತ್ರೆಯನ್ನು ಮನೆಯಲ್ಲಿ ಇಡುವುದು ಉತ್ತಮ.