Ultimate magazine theme for WordPress.

MITHUNA RASHIಮಿಥುನರಾಶಿ ಭವಿಷ್ಯ2024

0 123

MITHUNA RASHI MARCH THINGALA BHAVISHYA 2024 ಮಾರ್ಚ್ ತಿಂಗಳಿನ ಮಿಥುನ ರಾಶಿಯ ಮಾಸಭವಿಷ್ಯವನ್ನು ತಿಳಿದುಕೊಳ್ಳೋಣ. ಮಿಥುನ ರಾಶಿಯ ರಾಶ್ಯಾಧಿಪತಿಯಾದ ಬುಧನು ದಶಮ ಸ್ಥಾನದಲ್ಲಿ ಅಂದರೆ ಕರ್ಮದಲ್ಲಿ ಇರುತ್ತಾನೆ. ಬುಧನು ತನ್ನ ನೀಚ ಸ್ಥಾನದಲ್ಲಿರುವುದರಿಂದ ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ತೊಂದರೆಗಳು ಬರಬಹುದು. ಬುಧನ ಜೊತೆಯಲ್ಲಿ ರಾಹು ಇರುವುದರಿಂದ ನಿಮಗೆ ಚರ್ಮದ ಸಮಸ್ಯೆ ಬಂದಿದ್ದರೇ ಇನ್ನು ಸ್ವಲ್ಪ ಹೆಚ್ಚಾಗಬಹುದು. ಬುಧ ಚರ್ಮಕ್ಕೆ ಕಾರಕನಾಗುತ್ತಾನೆ,

ರಾಹು ಇನ್ಫೆಕ್ಷನ್ಸ್ ಗೆ ಕಾರಣನಾಗುತ್ತಾನೆ. ಆಗಾಗಿ ಚರ್ಮದ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. 14ನೇ ತಾರೀಖಿನ ವರೆಗೂ ರವಿ ಕುಂಭರಾಶಿಯಲ್ಲಿದ್ದು 14ನೇ ತಾರೀಖಿಗೆ ಮೀನರಾಶಿಗೆ ಬರುತ್ತಾನೆ. ರವಿ, ಬುಧ ಮತ್ತು ರಾಹು ಗ್ರಹಗಳು ಒಟ್ಟಿಗೆ ಸೇರುವುದರಿಂದ ಪರಿಚಿತರು, ಅಕ್ಕಪಕ್ಕದವರು, ಸ್ನೇಹಿತರಿಂದ ಬೇಸರವಾಗುತ್ತದೆ. ನಿಮ್ಮ ಅಕ್ಕಪಕ್ಕದವರಿಂದ ನಿಮ್ಮ ಬಗ್ಗೆ ಇಲ್ಲಸಲ್ಲದ ಆರೋಪಗಳು ಬರುತ್ತದೆ. ಬುಧ ವಾಪಸ್ಸು ಮೇಷರಾಶಿಗೆ ಬಂದ ನಂತರ ನಿಮ್ಮ ಮೇಲೆ ಇರುವ ಆರೋಪವೂ ಹೋಗುತ್ತದೆ. ಬುಧನು ದಶಮದಲ್ಲಿ ನೀಚನಾಗಿರುವುದರಿಂದ ಸ್ವಂತ ಉದ್ಯೋಗವನ್ನು ಮಾಡುತ್ತಿರುವವರಿಗೆ ನೀವು ಅಂದುಕೊಂಡ ರೀತಿಯಲ್ಲಿ ಕೆಲಸಗಳು ಆಗುವುದಿಲ್ಲ. MITHUNA RASHI

ಮನೆ, ಭೂಮಿ, ವಾಹನಕ್ಕೆ ಸಂಬಂಧಪಟ್ಟ ಕೆಲಸಗಳು ಈ ಮಾಸದಲ್ಲಿ ಆಗುವುದಿಲ್ಲ. ಶುಕ್ರಗ್ರಹವು ಭಾಗ್ಯ ಸ್ಥಾನದಲ್ಲಿರುವುದರಿಂದ ಮಕ್ಕಳ ವಿಚಾರದಲ್ಲಿ ಚೆನ್ನಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಬರುವುದರಿಂದ ಒಳ್ಳೆಯದಾಗುತ್ತದೆ ಮತ್ತು ಪರೀಕ್ಷೆಗಳನ್ನು ಬರೆಯುವ ವಿದ್ಯಾರ್ಥಿಗಳಿಗೆ ಇದು ಒಳ್ಳೆಯ ಸಮಯವಾಗಿದೆ. ಮಂಗಳ ಗ್ರಹ 15ನೇ ತಾರೀಖಿನ ವರೆಗೂ ಮಕರರಾಶಿಯಲ್ಲಿರುವುದರಿಂದ ಮಿಥುನ ರಾಶಿಯವರು ಬೇರೆಯವರ ಕೈಕೆಳಗೆ ಕೆಲಸ ಮಾಡುತ್ತಿರುವವರಿಗೆ ಒತ್ತಡವಿರುತ್ತದೆ.

16ನೇ ತಾರೀಖಿನ ನಂತರ ಮಂಗಳ ಗ್ರಹವು ಕುಂಭರಾಶಿಗೆ ಬರುವುದರಿಂದ ಕೆಲಸದ ಒತ್ತಡಗಳು ಇರುವುದಿಲ್ಲ. ಆದರೂ ಮಂಗಳ ಮತ್ತು ಶನಿ ಗ್ರಹವು ಒಟ್ಟಿಗೆ ಇರುವುದರಿಂದ ಕೆಲಸವು ಮಂದಗತಿಯಲ್ಲಿ ಸಾಗುತ್ತದೆ. ಸ್ವಂತ ಉದ್ಯೋಗಿಗಳಿಗೆ ಕೆಲಸಗಳಲ್ಲಿ ಯಾವುದೇ ಒತ್ತಡಗಳು ಇರುವುದಿಲ್ಲ. ಹಣಕಾಸಿನ ಸಮಸ್ಯೆ ಈ ತಿಂಗಳಿನಲ್ಲಿ ಅಷ್ಟೇನೂ ಇರುವುದಿಲ್ಲ. 16ನೇ ತಾರೀಖಿನ ನಂತರ ಹಣಕಾಸಿನ ವ್ಯವಹಾರಗಳು ಯಶಸ್ವಿಯಾಗುತ್ತದೆ. ಗುರುವು ಲಾಭ ಸ್ಥಾನದಲ್ಲಿರುವುದರಿಂದ MITHUNA RASHI

ನಿಮ್ಮ ಸಂಗಾತಿಗೆ ಉದ್ಯೋಗದಲ್ಲಿ ಬಡ್ತಿ ಸಿಗುವಂತದ್ದು, ವರ್ಗಾವಣೆಯಾಗುವಂತದ್ದು, ಕರ್ಮ ಸ್ಥಾನದಲ್ಲಿ ರವಿ, ರಾಹು ಮತ್ತು ಬುಧ ಇರುವುದರಿಂದ ಕೆಲಸದ ವಿಷಯದ ಮೇಲೆ ಪ್ರಯಾಣ ಮಾಡುವಂತದ್ದು ಆಗುತ್ತದೆ. ಅತೀಯಾದ ಪ್ರಯಾಣದಿಂದ ಆಯಾಸ, ನರಗಳಲ್ಲಿ ವೀಕ್ನೆಸ್ ಆಗುತ್ತಿರುತ್ತದೆ ಆಗಾಗಿ ಆರೋಗ್ಯದಲ್ಲಿ ಹೆಚ್ಚಿನ ಗಮನವನ್ನು ಕೊಡಿ. ನಾಲ್ಕನೇ ಮನೆಯಲ್ಲಿ ಕೇತು ಇರುವುದರಿಂದ ನೆಮ್ಮದಿ ಇಲ್ಲದಿರುವಂತದ್ದು ಆಗುತ್ತದೆ. ಆಗಾಗಿ ಗಣಪತಿ ಅಷ್ಟೋತ್ತರವನ್ನು ಪ್ರತಿದಿನ ಹೇಳಿಕೊಳ್ಳಿ.

ಶುಕ್ರಗ್ರಹ ಮಾತ್ರ ನಿಮಗೆ ಶುಭಫಲವನ್ನು ಕೊಡುತ್ತಿದ್ದಾನೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಏನಾದರೂ ಪ್ರಯತ್ನ ಮಾಡುತ್ತಿದ್ದರೇ ಆ ಕೆಲಸ ಯಶಸ್ವಿಯಾಗುತ್ತದೆ. ಏಕೆಂದರೆ 16ನೇ ತಾರೀಖು ಕುಜ ಕುಂಭರಾಶಿಗೆ ಬರುತ್ತಾನೆ. ಪಿತ್ರಾರ್ಜಿತವಾಗಿ ಬರಬೇಕಾಗಿರುವ ಆಸ್ತಿಯು ಬರುತ್ತದೆ ಆದರೇ ಸ್ವಂತವಾಗಿ ಏನಾದರೂ ಖರೀದಿ ಮಾಡಲು ಪ್ರಯತ್ನಿಸಬೇಡಿ ಬುಧ ಲಾಭ ಸ್ಥಾನಕ್ಕೆ ಬಂದ ನಂತರ ಅಂದರೆ ಬುಧನು ಮೇಷರಾಶಿಗೆ ಬಂದಾಗ ಪ್ರಯತ್ನಿಸಿ. ಪ್ರತಿದಿನ ಧ್ಯಾನ, ಜಪವನ್ನು ಮಾಡಿ. MITHUNA RASHI

ಪ್ರತಿ ಬುಧವಾರ ಹೆಸರುಕಾಳನ್ನು ದಾನಮಾಡಿ. ಆದಷ್ಟು ಮಾತಿನ ವಿಚಾರದಲ್ಲಿ ಸ್ವಲ್ಪ ಜಾಗೃತವಾಗಿರಿ. ಸ್ವಲ್ಪ ಕೆಮ್ಮು, ಕಫದ ಸಮಸ್ಯೆ ಇರುತ್ತದೆ. ಅನಗತ್ಯ ಪ್ರಯಾಣ ಮಾಡಬೇಡಿ. ಬೇರೆಯವರಿಂದ ಕಿರಿಕಿರಿ ಉಂಟಾದರೂ ನಿಮ್ಮ ಕುಟುಂಬದವರಿಂದ ಸುಖ, ಶಾಂತಿ, ಸಂತೋಷ ಸಿಗುತ್ತದೆ. ಯಾರಿಗೂ ದುಡ್ಡನ್ನು ಕೊಡಬೇಡಿ, ಈ ತಿಂಗಳಿನಲ್ಲಿ ಹೊಸದಾಗಿ ಹಣದ ಹೂಡಿಕೆಯನ್ನು ಮಾಡಬೇಡಿ. ನೀವು ಮಾಡುವಂತಹ ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವು ತಕ್ಕಮಟ್ಟಿಗೆ ಇರುತ್ತದೆ. ಪಾರ್ಟ್ ನರ್ ಶಿಪ್ ವ್ಯವಹಾರ ಮಾಡುವವರಿಗೆ ಲಾಭವಿದೆ.

Leave A Reply

Your email address will not be published.