Ultimate magazine theme for WordPress.

april ಏಪ್ರಿಲ್ ತಿಂಗಳಿನ ಮೇಷರಾಶಿಯ ಮಾಸ ಭವಿಷ್ಯವನ್ನು

0 171

april Mesha Rashi Bhavishya April 2024 ಏಪ್ರಿಲ್ ತಿಂಗಳಿನ ಮೇಷರಾಶಿಯ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಯಾವೆಲ್ಲಾ ಲಾಭಗಳು ಇವೆ? ಏನು ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು? ಮೇಷ ರಾಶಿಯ ಸಮಸ್ಯೆಗಳಿಗೆ ಪರಿಹಾರವೇನು ಎಂಬುದನ್ನು ತಿಳಿದುಕೊಳ್ಳೋಣ. ಮೇಷರಾಶಿಯ ಜನ್ಮ ನಕ್ಷತ್ರಗಳು ಅಶ್ವಿನಿ ನಕ್ಷತ್ರದ ನಾಲ್ಕು ಚರಣಗಳು, ಭರಣಿ ನಕ್ಷತ್ರದ ನಾಲ್ಕು ಚರಣಗಳು ಬರುತ್ತವೆ.

ಕೃತಿಕ ನಕ್ಷತ್ರದ 1ನೇ ಚರಣ ಸೇರಿರುವುದೇ ಮೇಷರಾಶಿಯಾಗಿದೆ. ಯಾವುದಾದರೂ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುವ ಸಂದರ್ಭ ಬಂದರೂ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತೀರಿ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುತ್ತೀರಿ. ಆದಾಯದಲ್ಲಿ ಬಹಳಷ್ಟು ಅನುಕೂಲತೆಗಳು ಉಂಟಾಗುತ್ತದೆ. ಹಣಕಾಸಿಗೆ ಯಾವುದೇ ತೊಂದರೆಗಳಿಲ್ಲ. ದುಡ್ಡು ಹೇಗೆ ಬರುತ್ತದೆಯೋ ಅಷ್ಟೇ ಖರ್ಚು ಕೂಡ ಇರುತ್ತದೆ. ನೀವು ಒಳ್ಳೆಯದ್ದನ್ನು ಮಾತನಾಡಿದರೂ ಜನರು ಅದನ್ನು ಕೆಟ್ಟದ್ದಾಗಿ ತಿಳಿದುಕೊಳ್ಳುತ್ತಾರೆ.

ನೀವು ಒಳ್ಳೆಯದ್ದನ್ನು ಮಾಡಿದರೂ ಅದನ್ನು ತಪ್ಪಾಗಿ ಅರ್ಥೈಹಿಸಿಕೊಳ್ಳುತ್ತಾರೆ. ನಿಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ.ಅಂತಹ ಜನರಿಗೆ ಅರ್ಥ ಮಾಡಿಸಬೇಡಿ, ನಿಮ್ಮ ಕೆಲಸವನ್ನು ಮಾಡಿಕೊಂಡು ಹೋಗಿರಿ. ಯಾರೊಂದಿಗೂ ಜಗಳ, ಶತೃತ್ವ ಬೇಡ. ನೀವು ಮಾಡುವ ಕೆಲಸದಲ್ಲಿ ಅಭಿವೃದ್ಧಿಯಾಗುತ್ತದೆ. ಮನೆ, ಕೊಳ್ಳಬೇಕು, ಭೂಮಿ ಕೊಂಡುಕೊಳ್ಳಬೇಕು, ಆಸ್ತಿ ಕೊಳ್ಳಬೇಕು ಎನಿಸಿದರೇ ಕೊಂಡುಕೊಳ್ಳಲು ಒಳ್ಳೆಯ ಸಮಯ ಇದಾಗಿದೆ. ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಓದಿನ ವಿಚಾರದಲ್ಲಿ ಸಾಧನೆಯನ್ನು ಮಾಡುತ್ತೀರಿ. ಚಿಕ್ಕ ಸಮಸ್ಯೆಯು ದೊಡ್ಡ ಸಮಸ್ಯೆಯಾಗಬಹುದು ಆದ್ದರಿಂದ ಮಾತಿನ ಮೇಲೆ ಹಿಡಿತವಿರಲಿ. ವಿವಾಹದ ಯೋಗಗಳಲ್ಲಿ ಕೆಲವೊಂದು ಏರುಪೇರಾದರೂ ಕೂಡ ಅನುಕೂಲಕರವಾದ ಸಂದರ್ಭಗಳೇ ಇರುತ್ತದೆ. ಮೇಷರಾಶಿಯವರು ದುಡ್ಡು ಕೈಯಲ್ಲಿ ಬಂದರೇ ಅದನ್ನು ಉಳಿಸಿಕೊಳ್ಳುವುದಿಲ್ಲ. ಖರ್ಚಿಗೆ ಕಡಿವಾಣವನ್ನು ಹಾಕಿದರೇ ಒಳ್ಳೆಯದು. ಕೆಲವೊಂದು ಮೇಷರಾಶಿಯ ಜನರಿಗೆ ಉದ್ಯೋಗವನ್ನು ಬದಲಾವಣೆ ಮಾಡುವ ಯೋಗ ಬರುತ್ತದೆ

ಅಥವಾ ನೀವು ಮಾಡುವ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇರುತ್ತದೆ. ವಿದೇಶದ ಯೋಗವಿದ್ದರೂ, ಸ್ವಲ್ಪ ಜನ ಮತ್ತೆ ತಾಯಿ ನಾಡಿಗೆ ವಾಪಸ್ಸು ಬರುವ ಸಾಧ್ಯತೆ ಇರುತ್ತದೆ. ಕೆಲಸ ಕಾರ್ಯ ಮಾಡುವಾಗ ಹೆಚ್ಚು ಶ್ರಮವನ್ನು ವಹಿಸುತ್ತೀರಿ. ವೈದ್ಯರಿಗೆ ಒಳ್ಳೆಯ ಸ್ಥಾನಮಾನಗಳು ಸಿಗುತ್ತದೆ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಮತ್ತು ಶಿಕ್ಷಕರಿಗೆ, ಸರ್ಕಾರಿ ಮತ್ತು ಅರೆ ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ಕೆಲಸದ ಒತ್ತಡವಿದ್ದರೂ ಹೆಚ್ಚಿನ ಗೌರವ ಸಿಗುತ್ತದೆ. ಕೃಷಿ ಆಧಾರಿತ ಕೆಲಸಗಳಲ್ಲಿ ಬಹಳಷ್ಟು ಲಾಭವಿರುತ್ತದೆ.

ವಕೀಲರಿಗೆ ವಿಶೇಷ ಗೌರವಗಳು ಮತ್ತು ಸನ್ಮಾನಗಳುಂಟಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಕೆಲವರಿಗೆ ಬಡ್ತಿ ಸಿಗುವ ಸೂಚನೆಗಳಿವೆ. ಕಾರ್ಮಿಕರಿಗೆ ಒಳ್ಳೆಯದಾಗುತ್ತದೆ. ಸ್ತ್ರೀಯರ ಅಲಂಕಾರದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಅನುಕೂಲಕರವಾಗಿದೆ. ಆರೋಗ್ಯವು ಚೆನ್ನಾಗಿರುತ್ತದೆ. ಕೆಲಸ ಮತ್ತು ಹಣಕಾಸಿನಲ್ಲಿ ವೃದ್ಧಿಯಾಗುತ್ತದೆ. ಬಂಧುಮಿತ್ರರಲ್ಲಿ ವೃದ್ಧಿಯಾಗುತ್ತದೆ. ಪತಿಪತ್ನಿಯರಲ್ಲಿ ಹೊಂದಾಣಿಕೆ ಕಂಡುಬರುತ್ತದೆ. ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ.

ರಾಜಕಾರಣಿಗಳು ತುಂಬಾ ಬ್ಯುಜಿಯಾಗಿರುತ್ತಾರೆ. ಓಡಾಟ ಹೆಚ್ಚು ಇರುತ್ತದೆ ಮತ್ತು ಒಳ್ಳೆಯ ಸ್ಥಾನಮಾನಗಳು ಸಿಗುವ ಸೂಚನೆ ಇದೆ. ಚಿತ್ರೋದ್ಯಮದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಸಿಗುತ್ತದೆ. ಒಟ್ಟಾರೆಯಾಗಿ ಮೇಷರಾಶಿಯವರಿಗೆ ಒಳ್ಳೆಯ ಫಲಗಳನ್ನು ನಿರೀಕ್ಷೆ ಮಾಡಬಹುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಶ್ರೀ ಮಹಾವಿಷ್ಣುವಿನ ಆರಾಧನೆಯಿಂದ ಮತ್ತು ಶ್ರೀ ರಾಮಮಂತ್ರವನ್ನು ಜಪಿಸುವುದರಿಂದ ಬಹಳ ಒಳ್ಳೆಯ ಫಲಗಳು ಸಿಗುತ್ತದೆ. ಸಾಧು-ಸಂತರಿಗೆ ದಾನವನ್ನು ಮಾಡಿರಿ ಮತ್ತು ಕುಲದೇವತಾ ಆರಾಧನೆಯನ್ನು ಮಾಡುವುದರಿಂದ ಒಳಿತಾಗುತ್ತದೆ ಮತ್ತು ದೈವಕೃಪೆ ಸಿಗುತ್ತದೆ. ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.

Leave A Reply

Your email address will not be published.