Ultimate magazine theme for WordPress.

Kumbha Rashi ಕುಂಭರಾಶಿಯ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತೇವೆ

0 222

Kumbha Rashi Bhavishya April 2024 ಏಪ್ರಿಲ್ ತಿಂಗಳಿನ ಕುಂಭರಾಶಿಯ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತೇವೆ. ಕುಂಭರಾಶಿಯವರಿಗೆ ಜನ್ಮ ನಕ್ಷತ್ರಗಳು ಧನಿಷ್ಠ ನಕ್ಷತ್ರ 3 ಮತ್ತು ನಾಲ್ಕುನೇ ಪಾದಗಳು, ಶತಬಿಶ ನಕ್ಷತ್ರದ ನಾಲ್ಕು ಚರಣಗಳು, ಪೂರ್ವಭಾದ್ರ ನಕ್ಷತ್ರದ ಮೊದಲ ಮೂರು ಚರಣಗಳು ಸೇರಿರುವುದೇ ಕುಂಭರಾಶಿ. ಕುಂಭರಾಶಿಯವರು ಸತ್ಯಾನ್ವೇಷಕರು, ನಂಬಿಕಸ್ಥರು, ಇವರು ಯಾರಿಗಾದರೂ ಯಾವ ವಿಷಯಕ್ಕೆ ಸಂಬಂಧಪಟ್ಟಂತೆ ಮಾತನ್ನು ಕೊಟ್ಟರೇ ಅದನ್ನು ತಪ್ಪದೇ ನಡೆಸಿಕೊಡುತ್ತಾರೆ.

ಇವರಿಗೆ ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಇರುತ್ತದೆ. ಗೌರವ ಮತ್ತು ಗತ್ತಿಯಿಂದ ಬಾಳುವಂತಹ ವ್ಯಕ್ತಿತ್ವದವರಾಗಿರುತ್ತಾರೆ. ಬೇರೆಯವರ ಅಧೀನದಲ್ಲಿ ಬಾಳಲು ಇಷ್ಟಪಡುವುದಿಲ್ಲ. ಸ್ವತಂತ್ರವಾಗಿ ಇರಬೇಕು ಎನ್ನುವ ಮನಸ್ಥಿತಿ. ಕುಂಭರಾಶಿಯವರು ಮುಂದೆ ಆಗುವುದನ್ನು ಊಹೆ ಮಾಡಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಕುಂಭರಾಶಿಯವರು ಒಂದು ರೀತಿಯ ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಸವಾಲುಗಳನ್ನು ಎದುರಿಸುತ್ತಿರುತ್ತೀರಿ. Kumbha Rashi

ನಾಯಕತ್ವದ ಗುಣ ನಿಮ್ಮಲ್ಲಿರುವುದರಿಂದ ಸವಾಲುಗಳು ಮತ್ತು ಸಂಕಷ್ಟಗಳು ಹೆಚ್ಚಾಗಿಯೇ ಇರುತ್ತದೆ. ಸವಾಲುಗಳನ್ನು ಮತ್ತು ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕು ಎಂಬುದು ನಿಮಗೆ ಗೊತ್ತಿರುತ್ತದೆ. ದೊಡ್ಡದಾದ ಬದಲಾವಣೆಗಳ ನಿರೀಕ್ಷೆಯಲ್ಲಿರುತ್ತೀರಿ. ನೀವು ಪ್ರಯತ್ನ ಪಟ್ಟರೇ ಏನೂ ಬೇಕಾದರೂ ಮಾಡಬೇಕಾದರೂ ಮಾಡಬಲ್ಲ ಸಾಮರ್ಥ್ಯವಿರುತ್ತದೆ. ನಿಮಗೆ ಇರುವ ಸಮಸ್ಯೆ ಏನೆಂದರೆ ದುಡ್ಡು ಬರುತ್ತಿದ್ದರೂ ಅದನ್ನು ಉಳಿಸಿಕೊಳ್ಳಲು Kumbha Rashi

ಸಾಧ್ಯವಾಗುತ್ತಿರುವುದಿಲ್ಲ ಆದ್ದರಿಂದ ಖರ್ಚನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ದುಡಿಮೆಯ ಕಡೆ ಹೆಚ್ಚು ಆದ್ಯತೆಯನ್ನು ಕೊಡುವುದರ ಜೊತೆಗೆ ಖರ್ಚಿಗೆ ಕಡಿವಾಣವನ್ನು ಹಾಕಿದರೇ ಖಂಡಿತವಾಗಿ ಹಣಕಾಸಿನಲ್ಲಿ ವೃದ್ಧಿಯಾಗುತ್ತದೆ. ಹಣಕಾಸಿನ ವಿಷಯದಲ್ಲಿ ಒತ್ತಡವಿದ್ದೇ ಇರುತ್ತದೆ. ಧೈರ್ಯವಾಗಿ ಮತ್ತು ಎಚ್ಚರಿಕೆಯಿಂದ ಮುನ್ನುಗ್ಗಿದರೇ ಖಂಡಿತವಾಗಿ ಅನುಕೂಲವಾಗುತ್ತದೆ. ಆದರೇ ದುಡಿಕಿನಿಂದ ಮಾತನಾಡಬಾರದು ಮತ್ತು ಮಾತಿನಲ್ಲಿ ಹಿಡಿತವಿರಲಿ.

ನಿಮ್ಮ ಮಾತು ಬೇರೆ ರೀತಿ ತಿಳಿದುಕೊಂಡು ನಿಮಗೆ ತೊಂದರೆಯಾಗಬಹುದು ಎಚ್ಚರವಹಿಸಿ. ಕುಂಭರಾಶಿಯವರಿಗೆ ಉದ್ಯೋಗದಲ್ಲಿ ನಿಮ್ಮ ಪ್ರಯತ್ನಕ್ಕೆ ತಕ್ಕನಾದ ಪ್ರತಿಫಲ ಸಿಗುತ್ತದೆ. ಬೇರೆಯವರ ಬಗ್ಗೆ ಯಾವುದೇ ರೀತಿಯ ನಿರೀಕ್ಷೆಗಳು ಇಲ್ಲದ ಸ್ವಾಭಿಮಾನಿ ವ್ಯಕ್ತಿಗಳಾಗಿರುತ್ತಾರೆ. ಅನಿರೀಕ್ಷಿತವಾದ ಭೂಮಿಯ ಲಾಭಗಳು ಕಂಡುಬರುತ್ತದೆ. ಅವಕಾಶಗಳು ಚೆನ್ನಾಗಿರುವುದರಿಂದ ಉಪಯೋಗಿಸಿಕೊಂಡರೇ ಒಳ್ಳೆಯದಾಗುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಹುದ್ಧೆಯನ್ನು ಪಡೆಯುವ ಸಾಧ್ಯತೆ ಇದೆ. Kumbha Rashi

ನೀವೇನಾದರೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಚೆನ್ನಾಗಿ ಶ್ರಮವಹಿಸಿದರೇ ಜಯಸಿಗುತ್ತದೆ. ಮಕ್ಕಳ ಬಗ್ಗೆ ಚಿಂತೆ ಮಾಡುತ್ತಿದ್ದರೇ ಮಕ್ಕಳಾಗುವ ಸೂಚನೆಗಳು ಇವೆ. ಅಲ್ಪ ಪ್ರಮಾಣದ ಲಾಭವಿದ್ದರೂ ಪಾಲುದಾರಿಗೆ ವ್ಯವಹಾರ ಮಾಡಬೇಡಿ. ಏನೇ ಮಾಡಿದರೇ ಸ್ವತಂತ್ರವಾಗಿ ಮಾಡಿ ಏಳಿಗೆ ಆಗುತ್ತದೆ. ಕೆಲವು ಜನ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಹೋಗುವ ಯೋಗ ಕಂಡುಬರುತ್ತಿದೆ. ಹೊಸ ವಾಹನವನ್ನು ಕೊಳ್ಳುವ ಯೋಗವಿದೆ. ವೈದ್ಯರು ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡಬಹುದು.

ಚಿಕ್ಕ ವ್ಯಾಪಾರದಿಂದ ದೊಡ್ಡ ವ್ಯಾಪಾರದವರೆಗೆ ನೀವು ಏನೇ ವ್ಯಾಪಾರ ಮಾಡಿದರೂ ಅದರಲ್ಲಿ ಲಾಭವಿದೆ ಏಕೆಂದರೆ ನಿಮ್ಮಲ್ಲಿ ವ್ಯಾಪಾರ ಮಾಡುವ ಚತುರತೆ ಇದೆ. ರಾಜಕಾರಣಿಗಳಿಗೆ ಹೆಚ್ಚಿನ ಹುದ್ಧೆಗಳು ಮತ್ತು ಲಾಭಗಳು ಸಿಗುತ್ತದೆ. ಕಲಾವಿದರಿಗೆ ಒಳ್ಳೆಯ ಅವಕಾಶಗಳು ಸಿಗುತ್ತವೆ ಮತ್ತು ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಉತ್ತಮ. ನಿಮ್ಮ ಭವಿಷ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಸರ್ಕಾರಿ ಮತ್ತು ಅರೆಸರ್ಕಾರಿಯಲ್ಲಿ ಕೆಲಸ ಮಾಡುವವರಿಗೆ ಬಹಳ ಒಳ್ಳೆಯ ಲಾಭಗಳು ಮತ್ತು ಪ್ರಯೋಜನಗಳು ಕಂಡುಬರುತ್ತದೆ. ಜನರು ಯಾವ ರೀತಿ ಇದ್ದಾರೆಂದು ತಿಳಿದು ಕೆಲಸ ಕಾರ್ಯಗಳನ್ನು ಮಾಡಿಕೊಂಡರೆ ಉತ್ತಮ.

ತಿಂಗಳ ಪೂರ್ತಿ ನೋಡಿದರೇ ಒಳ್ಳೆಯ ಫಲಗಳು ಇವೆ ಮತ್ತು ಎಚ್ಚರಿಕೆಗಳು ಇವೆ. ಕೆಲವು ಎಚ್ಚರಿಕೆಯನ್ನು ಅನುಸರಿಸಿದರೇ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ಕೆಲವು ಪರಿಹಾರಿಗಳನ್ನು ಮಾಡಿಕೊಂಡರೇ ಅದ್ಭುತವಾದ ಫಲಗಳು ಸಿಗುತ್ತದೆ. ಮಹಾಗಣಪತಿ ಪೂಜೆಯನ್ನು ಮಾಡಿಕೊಳ್ಳಿ, ನರಸಿಂಹಸ್ವಾಮಿಯ ಆರಾಧನೆಯನ್ನು ಮಾಡಿಕೊಳ್ಳಿ ಬಹಳ ಅನುಕೂಲಕರವಾದ ಫಲಗಳು ಸಿಗುತ್ತದೆ. ಜೊತೆಗೆ ಮಹಾರುದ್ರ ಪಠಣವನ್ನು ಮಾಡಿಕೊಳ್ಳುವುದನ್ನು ರೂಢಿ ಮಾಡಿಕೊಳ್ಳಿ. ಬಡವರಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಿರಿ. ನಿಮಗೆ ಅದ್ಭುತವಾದ ಫಲಗಳು ಸಿಗುತ್ತದೆ. Kumbha Rashi

Leave A Reply

Your email address will not be published.