Ultimate magazine theme for WordPress.

deepa astrology ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ

0 1,388

deepa astrology in kannada top ಸ್ನೇಹಿತರೇ ದುಡ್ಡು, ನೆಮ್ಮದಿ ಸದಾ ಮನೆಯಲ್ಲಿರಬೇಕೆಂದರೆ ಪ್ರತಿದಿನ ಈ ಎಣ್ಣೆಯಿಂದ ದೀಪವನ್ನು ಹಚ್ಚಬೇಕು ಎಂಬ ಕುತೂಹಲಕಾರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಸಂಜೆಯ ಸಮಯದಲ್ಲಿ ದೇವರ ಕೋಣೆಯಲ್ಲಿ ಮತ್ತು ತುಳಸಿ ಗಿಡದ ಮುಂದೆ ದೀಪವನ್ನು ಬೆಳಗಿಸುವುದು ನಮ್ಮ ಸಂಪ್ರದಾಯ. ಹಿಂದೆ ನಮ್ಮ ಪೂರ್ವಜರು ಅರಳಿಕಟ್ಟೆಯ ಬಳಿ,

ಮನೆಯ ಕಿಟಕಿಯ ಮೇಲೆ, ಮನೆಯ ಬಳಿ ಚಾವಡಿಗೆ ಮೇಲೆ, ತುಳಸಿ ಕಟ್ಟೆಯ ಮೇಲೆ ಮುಸ್ಸಂಜೆಯ ವೇಳೆ ದೀಪವನ್ನು ಹಚ್ಚುತ್ತಿದ್ದರು. ದೀಪವನ್ನು ಬೆಳಗಿಸಲು ಬೇಕಾಗಿರುವ ಪ್ರಮುಖ ಅಂಶ ಬತ್ತಿ, ತೈಲ, ಬೆಂಕಿ ಕಡ್ಡಿ, ಆದರೇ ದೇವರಿಗೆ ಯಾವುದೋ ಎಣ್ಣೆಯನ್ನು ಬಳಸಿ ದೀಪಗಳನ್ನು ಬೆಳಗಬಾರದು. ಶಾಸ್ತ್ರಗಳಲ್ಲಿ ಹೇಳಲಾದ ಎಣ್ಣೆಗಳನ್ನು ಮಾತ್ರ ಬಳಸಿ ದೀಪಗಳನ್ನು ಬೆಳಗಬೇಕು. ಆಗಾದರೇ ಯಾವ ತೈಲಗಳನ್ನು ಪೂಜೆಯಲ್ಲಿ ಬಳಸಬೇಕು ಮತ್ತು ಅದರ ಪ್ರಯೋಜನಗಳೇನು? ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳೋಣ.

ಇಂದಿನ ಯಾಂತ್ರಿಕ ಯುಗದಲ್ಲಿ ಹಬ್ಬದ ದಿನ ಮೂಂಬತ್ತಿ ಮತ್ತು ಕೃತಕ ವಿದ್ಯುತ್ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಆದರೇ ಅದು ಆಧ್ಯಾತ್ಮಿಕವಾಗಿ ಅಷ್ಟು ಪ್ರಶಸ್ತವಾದುದ್ದಲ್ಲ ಆದ್ದರಿಂದ ಹಬ್ಬದ ದಿನ ಎಣ್ಣೆಯಿಂದ ತುಂಬಿದ ದೀಪವನ್ನು ಏಕೆ ಬೆಳಗಬೇಕು ಎಂಬ ಪ್ರಶ್ನೆ ಅನೇಕರಲ್ಲಿ ಇರುವುದು ಸಹಜವಾಗಿದೆ. ಇದಕ್ಕೆ ಸೂಕ್ತ ವಿವರಣೆ ಇಲ್ಲಿದೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ದೀಪಗಳು ಶುರುವಾಗುವ ಮೊದಲು ಎಣ್ಣೆ ದೀಪಗಳನ್ನು ಪ್ರಪಂಚದಾದ್ಯಂತ ಬೆಳಗಲಾಗುತ್ತಿತ್ತು.

ಅಲ್ಲದೇ ವಿವಿಧ ಸಂಪ್ರದಾಯ ಮತ್ತು ಸಂಸ್ಕೃತಿಯ ದ್ಯೋತಕವಾಗಿತ್ತು. ಕ್ರಿ.ಪೂ. 4500ರಿಂದ 3300ರ ವರೆವಿಗೂ ಎಣ್ಣೆಯ ದೀಪದ ಮಹತ್ತ್ವ ಆಗೆಯೇ ಉಳಿದುಕೊಂಡು ಬಂದಿತ್ತು. ನಂತರ ಎಣ್ಣೆಯ ದೀಪದ ಬದಲು ಬೇರೆ ಬೇರೆ ದೀಪಗಳು ಬೆಳಕಿಗೆ ಬಂದವು. ದೀಪಕ್ಕೆ ಯಾವ ತೈಲ ಬಳಸಬೇಕು ಎಂದು ನೋಡುವುದಾದರೇ ಮೊದಲನೆಯದಾಗಿ ಶುದ್ಧ ಹಸುವಿನ ತುಪ್ಪವನ್ನು ಹೋಮ ಹವನಾದಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅಗ್ನಿ ಪುರಾಣದ ಪ್ರಕಾರ ಸುತ್ತಮುತ್ತಲಿನ

ಸಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುವಂತಹ ಸಾಮರ್ಥ್ಯವನ್ನು ಹಸುವಿನ ತುಪ್ಪ ಹೊಂದಿದೆ. ಮನೆಯಲ್ಲಿ ಪಾಸಿಟಿವಿಟಿ ಶಕ್ತಿ ಹೆಚ್ಚಾಗಬೇಕಾದರೇ ದೇವರಿಗೆ ಹಸುವಿನ ತುಪ್ಪದಿಂದ ದೀಪವನ್ನು ಹಚ್ಚಬೇಕು. ಹಸುವಿನ ತುಪ್ಪದಿಂದ ದೀಪವನ್ನು ಬೆಳಗಿದರೆ ಬಡತನವು ದೂರವಾಗುತ್ತದೆ, ಲಕ್ಷ್ಮಿ ಕೃಪೆ ಹೆಚ್ಚಾಗುತ್ತದೆ. ಉತ್ತಮ ಆರೋಗ್ಯ ಪ್ರಾಪ್ತಿಯಾಗುತ್ತದೆ. ಸಂಪತ್ತು ಮತ್ತು ಸಂತೋಷ ಮನೆಯಲ್ಲಿ ನೆಲೆಸುತ್ತದೆ. ಅದರಲ್ಲೂ ಲಕ್ಷ್ಮಿ ಪೂಜೆಯಲ್ಲಿ ತಪ್ಪದೇ ದೀಪವನ್ನು ಹಚ್ಚುವುದರಿಂದ ಲಕ್ಷ್ಮಿ ದೇವಿಯು ಸಂತೋಷಗೊಳ್ಳುತ್ತಾಳೆ.

ತುಪ್ಪವನ್ನು ಸೇವನೆ ಮಾಡುವುದರಿಂದ ಚರ್ಮಕ್ಕೆ ತೇವಾಂಶ ಸಿಗುತ್ತದೆ ಹಾಗೂ ಮುಖದ ಮೇಲೆ ಹೊಳಪು ಮೂಡುತ್ತದೆ. ಬೇವಿನ ಎಣ್ಣೆಯೊಂದಿಗೆ ಮೊಹುವ ಎಣ್ಣೆಯನ್ನ ಮಿಶ್ರ ಣ ಮಾಡಿ ದೇವರಿಗೆ ದೀಪವನ್ನು ಬೆಳಗುವುದರಿಂದ ಪರಾಶಕ್ತಿಯ ದೇವಿಯ ಅನುಗ್ರಹ ಹಾಗೂ ಕುಲದೇವತಾ ಅನುಗ್ರಹ ನಿಮ್ಮ ಮೇಲೆ ಇರುತ್ತದೆ. ಬೇವಿನ ಎಣ್ಣೆಯ ದೀಪವನ್ನು ಮನೆಯಲ್ಲಿ ಹಚ್ಚುವುದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಶತೃಗಳಿಂದ ಆಗುವ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.

ಒಂದು ವೇಳೆ ಶತೃಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೃಷ್ಣಾಷ್ಟಮಿಯ ದಿನದಂದು ಎಂಟು ಬೇವಿನ ದೀಪವನ್ನು ಬೈರವನಿಗೆ ಬೆಳಗಿ ಆತನನ್ನು ಪೂಜಿಸಬೇಕು ಮತ್ತು ಸಹಸ್ರ ನಾಮವನ್ನು ಪಠಿಸಬೇಕು. ಇದರಿಂದ ಶತೃದೋಷ ದೂರವಾಗುತ್ತದೆ. ತೆಂಗಿನ ಎಣ್ಣೆಯು ಆಧ್ಯಾತ್ಮಿಕ ಪ್ರಾಮುಖ್ಯತೆಯ ಎಣ್ಣೆಗಳಲ್ಲಿ ಒಂದಾಗಿದೆ. ತೆಂಗಿನ ಎಣ್ಣೆಯು ವಿನಾಯಕನಿಗೆ ಪ್ರಿಯವಾದ ಎಣ್ಣೆಯಾಗಿದೆ. ಆದ್ದರಿಂದ ಗಣೇಶನನ್ನು ಆರಾಧಿಸುವಾಗ ತೆಂಗಿನ ಎಣ್ಣೆಯನ್ನು ಉಪಯೋಗಿಸಬೇಕು.

ತೆಂಗಿನ ಎಣ್ಣೆಯನ್ನು ಬಳಸುವುದರಿಂದ ಗಣೇಶನು ಸಂತೋಷದಿಂದ ಆಶೀರ್ವದಿಸುತ್ತಾನೆ. ಮನೆಯಲ್ಲಿ ಶಾಂತಿ ಮತ್ತು ನೆಮ್ಮದಿಗಾಗಿ ಗಣೇಶನಿಗೆ ತೆಂಗಿನ ಎಣ್ಣೆಯ ದೀಪವನ್ನು ಹಚ್ಚಬೇಕು. ಜೊತೆಗೆ ಗಣೇಶನ ಪೂಜೆಯಲ್ಲಿ ಗರಿಕೆ ಹಾಗೂ ಮೋದಕವನ್ನು ಇಟ್ಟು ಪೂಜಿಸಿದರೇ ಇನ್ನು ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ. ಹರಳೆಣ್ಣೆಯನ್ನು ಬಳಸಿಕೊಂಡು ದೀಪವನ್ನು ಹಚ್ಚಿದರೇ ಆ ಮನೆಯಲ್ಲಿ ಸಂತೋಷ, ಅಭಿವೃದ್ಧಿ ಆಧ್ಯಾತ್ಮಿಕ, ಬೆಳವಣಿಗೆ, ಸಮೃದ್ಧಿ ಹಾಗೂ ಖ್ಯಾತಿಯು ಹೆಚ್ಚಾಗುತ್ತದೆ.

ಸಂಬಂಧಗಳ ನಡುವಿನ ಬಾಂಧವ್ಯವನ್ನು ಹೆಚ್ಚಿಸುವ ಸಾಮರ್ಥ್ಯ ಹರಳೆಣ್ಣೆಯ ದೀಪಕ್ಕೆ ಇದೆ. ಆದ್ದರಿಂದ ಪೂಜೆಯಲ್ಲಿ ಹರಳೆಣ್ಣೆಯ ದೀಪವನ್ನು ಬೆಳಗುವುದು ಸೂಕ್ತ. ಮೊಹುವ ತೈಲವನ್ನು ಪರಶಿವನಿಗೆ ಬಳಸುವುದರಿಂದ ಆರ್ಥಿಕ ಸಮಸ್ಯೆಯು ದೂರವಾಗುತ್ತದೆ ಮತ್ತು ಆರೋಗ್ಯ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು. ಬೈರವನನ್ನು ಪೂಜಿಸುವಾಗ ಪಂಚದೀಪ ತೈಲವನ್ನು ಮನೆಯಲ್ಲಿ ಹಚ್ಚುವುದರಿಂದ ಕೆಟ್ಟ ಕಣ್ಣು, ನಕಾರಾತ್ಮಕ ಶಕ್ತಿಗಳು, ಬಡತನ, ಅನಾರೋಗ್ಯದಂತಹ ಸಮಸ್ಯೆಗಳು ಹೋಗಲಾಡಿಸುತ್ತದೆ.

ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೋಗಿ ಸಕಾರಾತ್ಮಕ ಶಕ್ತಿಗಳು ನೆಲೆಸುತ್ತದೆ. ಸಮಸ್ಯೆಗಳನ್ನ, ದುಃಖ, ಭಯವನ್ನು ತೊಡೆದು ಹಾಕಲು ಅಷ್ಟಮಿ ಮತ್ತು ಅಮಾವಾಸ್ಯೆಯ ದಿನಗಳಲ್ಲಿ ಪಂಚದೀಪದ ಎಣ್ಣೆಯಿಂದ ಭಗವಾನ್ ಭೈರವನನ್ನು ಆರಾಧಿಸಬೇಕು. ಯಾವುದೇ ಕೆಲಸವನ್ನು ಮಾಡುವ ಮೊದಲು ದೇವರಿಗೆ ಎಣ್ಣೆಯ ದೀಪ ಅಥವಾ ತುಪ್ಪದ ದೀಪವನ್ನು ಬೆಳಗಬೇಕು. ಆದಷ್ಟು ಸಸ್ಯಜನ್ಯ ಎಣ್ಣೆಯನ್ನೆ ಬಳಸಬೇಕು.. ಮಹಿಳೆಯರು ಮತ್ತು ಪುರುಷರು ದೀಪವನ್ನು ಬೆಳಗುವಾಗ ನಿಮ್ಮ ತಲೆಯನ್ನು ಬಾಗಿಸಿ ದೀಪವನ್ನು ಹಚ್ಚಬೇಕು.

ದೀಪವನ್ನು ಬೆಳಗುವಾಗ ಅಕ್ಕಿ ಕಾಳನ್ನು ಇಡಬೇಕು ಅಥವಾ ಏಳು ಪ್ರಕಾರದ ಧಾನ್ಯಗಳನ್ನು ಇಡಬೇಕು ಅಥವಾ ಹೂವಿನ ದಳಗಳನ್ನು ಇಡಬೇಕು. ಇಲ್ಲವಾದರೇ ಭಗವಂತನು ನಿಮ್ಮ ಪೂಜೆಯನ್ನು ಸ್ವೀಕರಿಸುವುದಿಲ್ಲ. ದೀಪವನ್ನು ಈ ರೀತಿ ಬೆಳಗಿಸುವುದರಿಂದ ಖಂಡಿತವಾಗಿ ಒಲಿಯುತ್ತಾನೆ. ಶತೃಗಳು ತುಂಬಾ ತೊಂದರೆಕೊಡುತ್ತಿದ್ದರೆ ಅವರಿಂದ ಮುಕ್ತಿ ಪಡೆಯಲು ಪೂಜೆ ಮಾಡುವಾಗ ಮಲ್ಲಿಗೆ ಎಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಹಾಕಿ ಪೂಜೆ ಮಾಡುವುದರಿಂದ ನಿಮ್ಮ ಎಲ್ಲಾ ಕಾರ್ಯಗಳು ಪೂರ್ತಿಯಾಗುತ್ತದೆ.

ಶತೃಗಳ ತೊಂದರೆಗಳು ಇರುವುದಿಲ್ಲ. ಜೊತೆಗೆ ಯಾವಾಗ ಪೂಜೆ ಮಾಡುತ್ತೀರೋ ಆಗ ಆಂಜನೇಯಸ್ವಾಮಿಗೆ ಆರತಿ ಮಾಡಬೇಕು. ಈ ದೀಪದಲ್ಲಿ ಎರಡು ಬತ್ತಿ ಮತ್ತು ಎರಡು ಲವಂಗವನ್ನು ಹಾಕಿ ಉರಿಸಬೇಕು. ಕಷ್ಟಗಳು ನಿವಾರಣೆಯಾಗಬೇಕೆಂದರೆ ಈ ಮಂತ್ರವನ್ನು ಹೇಳಿಕೊಂಡು ದೀಪವನ್ನು ಹಚ್ಚಿರಿ ಶುಭಂ ಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ ಶತೃಬುದ್ಧಿ ವಿನಾಶಾಯ ದೀಪ ಜ್ಯೋತಿರ್ ನಮೋಸ್ತುತೆ ಹೀಗೆ ದೀಪವನ್ನು ಹಚ್ಚುವುದರಿಂದ ಮನೆಯಲ್ಲಿ ಸುಖ, ಶಾಂತಿ ಮನೆಯಲ್ಲಿ ನೆಲೆಸುತ್ತದೆ. ಮಣ್ಣಿನ ದೀಪವನ್ನು ಹಚ್ಚುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ.

Leave A Reply

Your email address will not be published.