Turmeric Remedies ಈ ಒಂದೇ ಒಂದು ವಸ್ತು ಆರೋಗ್ಯ ಸಮಸ್ಯೆ, ಹಣಕಾಸು ಹಾಗೂ ಯಾವುದೇ ಕೆಟ್ಟ ಪ್ರಭಾವ ಎಲ್ಲವನ್ನೂ ನಿವಾರಿಸುತ್ತದೆ.
Turmeric Remedies for prosperity ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ, ಅರಿಶಿಣ ಕೊಂಬಿನ ಈ ಪರಿಹಾರ ಮೊದಲೆ ಗೊತ್ತಿದ್ರೆ ದುಡ್ಡಿನಸಮಸ್ಯೆ ಈ ಮಟ್ಟಿಗೆ ಇರುತ್ತಿರಲಿಲ್ಲಅಂತೀರಾ ಈ ಒಂದು ವಸ್ತು ಇದ್ದರೆ ಮಾ ಟ ಮಂ ತ್ರಗಳ ಕೆಲಸ ನಡೆಯುವುದಿಲ್ಲ ಶ ತ್ರುಗಳ ಕಾಟ ಇರುವುದಿಲ್ಲ ಸಾಕ್ಷಾತ್ ಲಕ್ಷ್ಮೀದೇವಿ ಅನುಗ್ರಹ ನಿಮ್ಮ ಮೇಲಿರುತ್ತದೆ.
ಮಕ್ಕಳು ಹೇಳಿದ ಮಾತನ್ನು ಕೇಳಲು ಆರೋಗ್ಯ ಚೆನ್ನಾಗಿರಲು ಈ ಒಂದು ವಸ್ತುವಿನಿಂದ ಯಾವ ಪರಿಹಾರಗಳನ್ನು ಮಾಡಬೇಕು ಎಂಬುದನ್ನು ಈ ಒಂದು ಸಂಚಿಕೆಯಲ್ಲಿ ನಿಮಗೆ ತಿಳಿಸಿ ಕೊಡುತ್ತೇವೆ. ಅರಿಶಿನ ಕೊಂಬು ಎನ್ನುವುದು ಲಕ್ಷ್ಮಿ ದೇವಿಯ ಅಂಶವಿರುವ ಒಂದು ಮಂಗಳಕರ ವಸ್ತು ಇದರಲ್ಲಿ ಎರಡು ರೀತಿಯಾದ ಅರಿಶಿನ ಕೊಂಬುಗಳು ಇರುತ್ತವೆ ಒಂದು ಗಣೇಶನ ಮುಖವನ್ನು ಹೋಲುವಂತಹ ಅರಿಶಿನ ಕೊಂಬು ಲಕ್ಷ್ಮಿ ದೇವಿಗೆ ಪ್ರಿಯವಾದ ಅರಿಶಿನ ಕೊಂಬು ಇನ್ನೊಂದು ಕಪ್ಪು ಬಣ್ಣದ ಅರಸಿನ ಕೊಂಬು ಇದನ್ನುಇಂಗ್ಲಿಷ್ ನಲ್ಲಿ ಬ್ಲಾಕ್ ಟರ್ಮರಿಕ್ ಎಂದು ಕರೆಯುತ್ತಾರೆ.
ಇದರ ವಿಶೇಷತೆ ಏನೆಂದರೆ ಸಾಮಾನ್ಯ ಅರಿಶಿನ ಕೊಂಬಿನಿಂದ ಲಕ್ಷ್ಮಿ ಕಟಾಕ್ಷ ಎಷ್ಟು ದೊರೆಯುತ್ತದೆ ಅದಕ್ಕಿಂತ 10 ಪಟ್ಟು ಹೆಚ್ಚು ಈ ಕಪ್ಪು ಅರಿಶಿನ ಕೊಂಬಿನಿಂದ ದೊರೆಯುತ್ತದೆ ಕೆಲವೊಂದು ಪೂಜೆಗಳಲ್ಲಿ ಈ ಕಪ್ಪು ಅರಶಿನ ಕೊಂಬನ್ನು ಬಳಸಲಾಗುತ್ತದೆ. ಮನೆಯಲ್ಲಿ ಮಾಟ ಮಂತ್ರ ಶತ್ರು ಭಾದೆ ಏನೇ ದೋಷ ಇದ್ದರೂ ಈ ವಸ್ತುವಿನಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ
ದುಡ್ಡು ಕೈಯಲ್ಲಿ ಚೆನ್ನಾಗಿ ಓಡಾಡಬೇಕು ಎಂದರೆ ಮನೆಯಲ್ಲಿ ತಪ್ಪದೇ ಕಪ್ಪು ಅರಿಶಿನದ ಕೊಂಬನ್ನು ಇಡಬೇಕಾಗುತ್ತದೆ ವ್ಯಾಪಾರದ ಸ್ಥಳದಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು ಸಾಕ್ಷಾತ್ ದುರ್ಗಾದೇವಿ ರಕ್ಷಣೆ ಸದಾ ನಿಮ್ಮೊಂದಿಗೆ ಇರಬೇಕು ಎಂದರೆ ನಿಮ್ಮ ಮನೆಯಲ್ಲಿ ಆಗಿರಬಹುದು ಅಥವಾ ಮನೆಗೆ ಸಮೀಪದಲ್ಲಿರುವಂತಹ ಯಾವುದಾದರೂ ದುರ್ಗಾದೇವಿಯ ಆಲಯದಲ್ಲಿ ಒಂದು ಚಿಕ್ಕ ಕಪ್ಪು ಬಣ್ಣದ ಅರಶಿಣದ ಕೊಂಬನ್ನು ಇರಿಸಿ ಪೂಜೆಯನ್ನು ಮಾಡಬೇಕು
ನಂತರ ನಿಮ್ಮ ಕೈಗೆ ದಾರದ ಸಹಾಯದಿಂದ ಕಟ್ಟಿಕೊಳ್ಳಬೇಕು. ಈ ಒಂದು ಕೆಲಸವನ್ನು ಮಾಡುವುದರಿಂದ ರಾಜಯೋಗ ಉಂಟಾಗುತ್ತದೆ ದುರ್ಗಾದೇವಿಯ ಅನುಗ್ರಹ ಹಾಗೂ ರಕ್ಷಣೆ ಅನ್ನೋದು ಸದಾ ನಿಮಗೆ ಸಿಗುತ್ತದೆ ಯಾವುದೇ ಅಡ್ಡಿ ಇಲ್ಲದೆ ಎಲ್ಲಾ ಕೆಲಸಗಳು ಸುಲಭವಾಗಿ ಈಡೇರುತ್ತವೆ ಕೋರಿಕೆಗಳು ಈಡೇರುತ್ತದೆ ಶತ್ರುಗಳ ಕಾಟ ನರ ದೃಷ್ಟಿ ಹಾಗೂ ನರದೋಷ ಕೆಟ್ಟ ದೃಷ್ಟಿಗಳು ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಅಂತಹ ವಿಶೇಷ ಶಕ್ತಿ ಕಪ್ಪು ಅರಿಶಿಣ ಕೊಂಬಿಗಿದೆ.
ಹಾಗೆಯೇ ದೃಷ್ಟಿ ದೋಷ ಸಂಪೂರ್ಣ ನಶಿಸಿ ಹೋಗಲು ಅರಿಶಿಣದ ಕೊಂಬನ್ನು ಹೂವಿನ ರೀತಿಯಾಗಿ ಕಟ್ಟಿ ಹಾರವನ್ನು ತಯಾರು ಮಾಡಿ ಕೊರಳಿಗೆ ಸ್ವಲ್ಪ ದಿನವಾದರೂ ಕೂಡ ನೀವು ಧರಿಸಿಕೊಳ್ಳಬೇಕು, ಇದರಿಂದ ನಿಮಗೆ ಇದ್ದಂತಹ ದಾರಿದ್ರ ದೋಷಗಳು, ದೃಷ್ಟಿ ದೋಷಗಳು ದೂರವಾಗುತ್ತವೆ ಇದನ್ನು ದೊಡ್ಡವರು ಮಾಡಿಕೊಳ್ಳಬೇಕು. ಇನ್ನು ಚಿಕ್ಕ ವರಿಗೆ ಅಂದರೆ ಮಕ್ಕಳಿಗೆ ಹಿಡಿದಂತಹ ದೃಷ್ಟಿ ದೋಷವನ್ನು ದೂರ ಮಾಡಲು ಒಂದು ಕಪ್ಪು ಬಣ್ಣದ ವಸ್ತ್ರಕ್ಕೆ ಕಪ್ಪು ಅರಿಶಿಣದ ಕೊಂಬನ್ನು ಇಟ್ಟು ವಿಶೇಷವಾಗಿ ಮೂಟೆಯ ರೀತಿಯಲ್ಲಿ ಕಟ್ಟಿ ಏಳು ಬಾರಿ ಎಡಭಾಗದಿಂದ ಏಳು ಬಾರಿ ಬಲಭಾಗದಿಂದ ಮಕ್ಕಳ ತಲೆಯ ಸುತ್ತ ಸುತ್ತಿ ಇಳಿಯನ್ನ ತೆಗೆದು ಅಂದರೆ ದೃಷ್ಟಿಯನ್ನು ತೆಗೆಯಬೇಕು.
ಯಾರು ಓಡಾಡದೆ ಇರುವಂತಹ ಜಾಗದಲ್ಲಿ ಅಥವಾ ಹರಿಯುವ ನೀರಿನಲ್ಲಿ ಈ ಒಂದು ಕಪ್ಪು ವಸ್ತ್ರದ ಮೂಟೆಯನ್ನು ಎಸೆದು ಬರಬೇಕು ಇದರಿಂದ ಮಕ್ಕಳಿಗೆ ದೃಷ್ಟಿತನ ಮಂಡುತನ ಕಡಿಮೆ ಆಗುತ್ತದೆ ಮಕ್ಕಳು ಹೇಳಿದ ಮಾತನ್ನು ಕೇಳುತ್ತಾರೆ, ಅವರ ಆರೋಗ್ಯ ಸದಾ ಚೆನ್ನಾಗಿರುತ್ತದೆ.
ಇನ್ನು ತುಂಬಾ ಅನಾರೋಗ್ಯದ ಯಾವ ಆಸ್ಪತ್ರೆಗೆ ತೋರಿಸಿದರು ಕೂಡ ಎಲ್ಲಾ ಸರಿ ಇದೆ ಎನ್ನುತ್ತಾರೆ ಅಮಾವಾಸ್ಯೆ ಮತ್ತು ಹುಣ್ಣಿಮೆ ಬಂದರೆ ನಮಗೆ ಅನಾರೋಗ್ಯದ ಸಮಸ್ಯೆ ತುಂಬಾ ಜಾಸ್ತಿಯಾಗುತ್ತದೆ ಅಂತ ಹೇಳುವವರು ನೆನೆಸಿದ ಕಡಲೆಕಾಳು ಸ್ವಲ್ಪ ಬೆಲ್ಲ ಹಾಗೂ ಒಂದು ಇಂಚಿಗಿಂತಲೂ ಕಡಿಮೆಯಾದ ಕಪ್ಪು ಅರಿಶಿನದ ಕೊಂಬನ್ನು ಸೇರಿಸಿ ಗೋಮಾತೆಗೆ ನಿಮ್ಮ ಕೈಯಿಂದ ತಿನಿಸಬೇಕು ಇದರಿಂದ ಸಕಲ ಅನಾರೋಗ್ಯದ ಸಮಸ್ಯೆಗಳು ದೂರವಾಗುತ್ತವೆ ದೀರ್ಘಕಾಲದ ಅನಾರೋಗ್ಯ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತವೆ.
ಹಾಗೆಯೇ ನಿಮಗೆ ಐಶ್ವರ್ಯ ಎನ್ನುವುದು ಪ್ರಾಪ್ತಿಯಾಗಿ ಏಳಿಗೆ ಆಗಬೇಕು ಎಂದರೆ ಶುಕ್ರವಾರದ ದಿನ ಈ ರೀತಿಯಾಗಿ ಮೃಷ್ಟಾನ್ನವನ್ನು ಮಾಡಿಕೊಳ್ಳಬೇಕು. ಶುಕ್ರವಾರದ ದಿನ ನಿಮ್ಮ ಮನೆ ದೇವರ ಕೋಣೆಯಲ್ಲಿ ಅರಿಶಿನದ ಕುಂಕುಮದ ಬರಣಿಯಲ್ಲಿ ಕುಂಕುಮದ ಮೇಲೆ ಒಂದು ಕಪ್ಪು ಅರಿಶಿನದ ಕುಂಬನ್ನು ಇರಿಸಬೇಕು ಕುಂಕುಮದ ಬರಣಿಯನ್ನು ಲಕ್ಷ್ಮಿ ದೇವಿಯ ಮುಂದೆ ಇಟ್ಟು ನಮಸ್ಕಾರ ಮಾಡಿಕೊಳ್ಳುತ್ತಾ ದೇವಿಗೆ ವಿಶೇಷವಾಗಿ ಪೂಜೆಯನ್ನು ಮಾಡಿಕೊಳ್ಳಬೇಕು.
ನಂತರ ಈ ಅರಿಶಿನದ ಕೊಂಬನ್ನು ನಿಮ್ಮ ಮನೆಯ ಬೀರುವಿನಲ್ಲಿ ಏರ್ಪಾಡು ಮಾಡಿಕೊಳ್ಳಬೇಕು. ಇದರಿಂದ ನಿಮ್ಮ ಮನೆಯಲ್ಲಿ ಹಣಕಾಸು ಚೆನ್ನಾಗಿ ವೃದ್ಧಿಯಾಗಿ ಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಇನ್ನು ವ್ಯಾಪಾರ ಅಭಿವೃದ್ಧಿಗೆ 11 ಹಳದಿ ಕವಡೆಗಳು ಅನ್ನುವುದು ಗೋಮತಿ ಚಕ್ರಗಳು ಹಾಗೂ ಒಂದು ಕಪ್ಪು ಅರಿಶಿನದ ಕೊಂಬನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ದುಡ್ಡು ಇಡುವಂತಹ ಜಾಗದಲ್ಲಿ ಇಟ್ಟುಕೊಳ್ಳಬೇಕು ಅಥವಾ ವ್ಯಾಪಾರ ಮಾಡುವ ಜಾಗದಲ್ಲಿ ಬರುವ ಜನರಿಗೆ ಕಾಣದಂತೆ ಏರ್ಪಾಡು ಮಾಡಿಕೊಳ್ಳಬೇಕು.
ಕಪ್ಪು ಅರಿಶಿನದ ಶಕ್ತಿಯಿಂದ ಮಂಗಳಕರ ವಸ್ತುವಿನಿಂದ ವ್ಯಾಪಾರ ಚೆನ್ನಾಗಿ ಆಗುತ್ತದೆ. ಆಗುತ್ತಿದ್ದಂತಹ ನಷ್ಟಗಳು ಸರಿ ಹೋಗಿ ಧನಾಕರ್ಷಣೆಯಾಗಿ ಲಕ್ಷ್ಮಿ ದೇವಿಯ ಅನುಗ್ರಹ ಸದಾ ಕಾಲ ನಿಮ್ಮ ಮೇಲೆ ಇರುತ್ತದೆ ಇಷ್ಟು ಕೆಲಸಗಳನ್ನು ಕಪ್ಪು ಅರಿಶಿನ ಕೊಂಬಿನಿಂದ ಮಾಡಿ ನೋಡಿ ಅದ್ಭುತವಾದ ಬೆಳವಣಿಗೆಗಳು ಕಾಣುತ್ತವೆ ಲಕ್ಷ್ಮಿ ದೇವಿಗೆ ಪ್ರಿಯವಾದ ಅರಿಶಿನ ಕೊಂಬಿನಲ್ಲಿ ಕಪ್ಪು ಅರಿಶಿನದ ಕೊಂಬು ಕೂಡ ಒಂದು ಇದರ ಪ್ರಯೋಜನ ಪಡೆದುಕೊಳ್ಳಿ ಎಂದು ಹೇಳಬಯಸುತ್ತೇವೆ. ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ, ಓಂ ಶ್ರೀ ಲಕ್ಷ್ಮಿ ದೇವಿಯೇ ನಮಃ ಕಮೆಂಟ್ ಮಾಡಿ ಎಲ್ಲರಿಗೂ ಒಳ್ಳಯದಾಗಲಿ. ಧನ್ಯವಾದಗಳು.