Ultimate magazine theme for WordPress.

money remedy ಈ ಒಂದು ವಿಗ್ರಹ ಮನೆಯಲ್ಲಿ ಪೂಜೆ ಮಾಡಿ.ಯಾವುದೇ ಸಮಸ್ಯೆ ಇದ್ದರೂ ದೂರವಾಗುತ್ತದೆ.

0 82

Worship at this idol house ನಮಸ್ಕಾರ ಸ್ನೇಹಿತರೆ, ಇವತ್ತಿನ ಈ ಸಂಚಿಕೆಯಲ್ಲಿ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಕೈಯಲ್ಲಿ ದುಡ್ಡು ನಿಲ್ಲುತ್ತಿಲ್ಲ, ಹಣದ ಸಮಸ್ಯೆಯಿಂದ ಮುಕ್ತಿ ಸಿಗುತ್ತಿಲ್ಲ

ಎಲ್ಲಾ ದಾರಿಗಳು ಕೂಡ ಮುಚ್ಚಿ ಹೋಗಿವೆ ದೇವರಿಗೆ ಬೇಡಿಕೊಂಡು ಸಾಕಾಗಿದೆ ಸಾಲದ ಸುಳಿ ಹಳದ ವಿಪರೀತ ಸಂಕಷ್ಟ ಮಾನಸಿಕ ನೋವು ನಾನಾ ರೀತಿ ಸಮಸ್ಯೆಯಿಂದ ನರಳುತ್ತಿದ್ದರೆ ಈ ಒಂದು ದೇವರ ವಿಗ್ರಹ ಮನೆಯಲ್ಲಿ ಇಟ್ಟು ಈ ನಿಯಮವನ್ನು ತಪ್ಪದೇ ಪಾಲಿಸಿದರೆ ಲಾಭ ಮತ್ತು ಮಾನಸಿಕ ನೆಮ್ಮದಿ ಎನ್ನುವುದು ನಿಮ್ಮದಾಗುತ್ತದೆ, ದೇವರ ಫೋಟೋ ಯಾವುದು ಮತ್ತು ಈ ವಿಗ್ರಹ ಯಾವುದು ಯಾವ ರೀತಿಯ ಪೂಜೆಯಿಂದ ಈ ಒಂದು ಸಂಕಷ್ಟದಿಂದ ಪಾರಾಗಬೇಕು ಈ ಒಂದು ದೇವರ ಅನುಗ್ರಹದಿಂದ ಬಡತನ ಕಷ್ಟಗಳು ಹೀಗೆ ದೂರವಾಗುತ್ತದೆ ಎಂದು ಇವತ್ತಿನ ಸಂಚಿಕೆಯಲ್ಲಿ ತಿಳಿಸಿಕೊಡುತ್ತೇವೆ.

ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ ಮನಸ್ಸಿಗೆ ನೆಮ್ಮದಿ ಬೇಕು ಎಂದರೆ ಬೇಕು ಚಂದ್ರನ ಬಲ ಇರಲೇಬೇಕು ನಿಮ್ಮದೇ ಇದ್ದಾಗ ಮಾತ್ರ ಕಷ್ಟ ಬಂದಾಗಲೂ ಎದುರಿಸುವಂತಹ ಶಕ್ತಿ ಇರುತ್ತದೆ ಅದರಲ್ಲೂ ಹಣಕಾಸಿನ ಸಮಸ್ಯೆ ಇರಬಹುದು ಶತ್ರುವಿನ ಬಾಧೆ ಇರಬಹುದು ಆರೋಗ್ಯನ ಸಮಸ್ಯೆ ಆಗಿರಬಹುದು ಎಲ್ಲದಕ್ಕೂ ಚಂದ್ರನ ಬಲ ಇರಲೇಬೇಕು, ಚಂದ್ರನ ಬಲ ನಿಮ್ಮ ಜೀವನದಲ್ಲಿ ಬೇಕು ಎಂದಾದರೆ ಏನು ಮಾಡಬೇಕು ಸಾಕ್ಷಾತ್ ಶ್ರೀ ಕೃಷ್ಣನ ಸ್ಮರಣೆಯನ್ನು ತಪ್ಪದೇ ಮಾಡಬೇಕು

ಆತನ ಪೂಜೆಯನ್ನು ಮಾಡಬೇಕು, ಸೂರ್ಯನ ಬಲಬೇಕು ಎಂದರೆ ರಾಮಚಂದ್ರ ಎಂದರೆ ಶ್ರೀ ರಾಮನ ಪೂಜೆಯನ್ನು ಮಾಡಿಕೊಳ್ಳಬೇಕು, ಚಂದ್ರನ ಬಲ ಬೇಕು ಎಂದರೆ ಶ್ರೀ ಕೃಷ್ಣನ ತಪ್ಪದೆ ಪೂಜಿಸಬೇಕು ಯಾವಾಗ ಚಂದ್ರ ಬಲ ಹೆಚ್ಚಾಗುತ್ತದೆ ಆಗ ಮಾನಸಿಕ ಪ್ರಶಾಂತತೆ ಹಾಗೂ ಆರ್ಥಿಕವಾಗಿ ಏಳಿಗೆ ಕಾಣುತ್ತದೆ ವ್ಯರ್ಥ ಖರ್ಚು ವೆಚ್ಚಗಳು ದೂರವಾಗುತ್ತವೆ ಸಂತಸ ಜೀವನವನ್ನು ಪಡೆಯಲು ಚಂದ್ರಬಲ ಕಾರಣವಾಗುತ್ತದೆ

ಚಂದ್ರನಿಗೆ ದೇವರು ಕೃಷ್ಣ ಪರಮಾತ್ಮ ಆದ ಕಾರಣ ಈ ವಿಧಾನವನ್ನು ಅನುಸರಿಸಿ ಆತನ ಪೂಜೆಯನ್ನು ಮಾಡಬೇಕು. ಉಳ್ಳವರು ಅಂದರೆ ಶಕ್ತಿ ಇರುವವರು ಶುದ್ಧ ಬೆಳ್ಳಿಯ ಲೋಹದಲ್ಲಿ ಶ್ರೀ ಗೋಪಾಲಕೃಷ್ಣನ ವಿಗ್ರಹವನ್ನು ಇಟ್ಟುಕೊಳ್ಳಬೇಕು, ಯಾಂದರೇ ಕೃಷ್ಣನ ಮುಂಭಾಗದಲ್ಲಿ ಗೋಮಾತೆಯ ನಿಂತಿರುವ ಹಾಗೆ ಕೃಷ್ಣನು ಕೊಳಲನ್ನು ಹಿಡಿದುಕೊಂಡಿರುವಂತಹ ಹಾಗೆಯೇ ಅಂದರೆ ಗೋಪಾಲಕೃಷ್ಣನು ತ್ರಿಮಂಗಿ ಮುದ್ರೆಯಲ್ಲಿ ನಿಂತಿರುವ ಹಾಗೆ ಒಂದು ಬೆಳ್ಳಿಯ ಮೂರ್ತಿಯನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಬೇಕು ಸಾಧ್ಯವಾಗದಿದ್ದರೆ ಗೋಪಾಲಕೃಷ್ಣನ ಚಿಕ್ಕ ಚಿತ್ರಪಟವನ್ನು ದೇವರು ಕೋಣೆಯಲ್ಲಿ ತಪ್ಪದೆ ಏರ್ಪಾಡು ಮಾಡಿ ಪೂಜೆಯನ್ನು ಮಾಡಬೇಕು .

ಬೆಳ್ಳಿಯ ಲೋಹದಲ್ಲಿ ಏಕೆ ಇಡಬೇಕು ಎಂದರೆ ಬೆಳ್ಳಿಯು ಕೂಡ ಚಂದ್ರ ಕಾರಕ ಚಂದ್ರನ ಅಂಶವನ್ನು ಇದು ಒಳಗೊಂಡಿರುತ್ತದೆ ಗೋಪಾಲಕೃಷ್ಣ ಫೋಟೋ ಅಥವಾ ವಿಗ್ರಹವನ್ನು ಯಾವುದಾದರೂ ಒಂದು ಸೋಮವಾರದ ದಿನ ಅಥವಾ ರೋಹಿಣಿ ನಕ್ಷತ್ರ ಯಾವಾಗ ಬರುತ್ತದೆ ಆ ದಿನವೇ ಮನೆಗೆ ತರಬೇಕು ಆ ಎರಡು ದಿನಗಳಲ್ಲಿ ಮನೆಗೆ ಬರಲು ಸಾಧ್ಯವಾಗದೇ ಇದ್ದಲ್ಲಿ ಯಾವುದೇ ದಿನ ತಂದು ಸೋಮವಾರ ಮನೆಯಲ್ಲಿ ರೋಹಿಣಿ ನಕ್ಷತ್ರ ಇರುವಂತಹ ದಿನ ದೇವರ ಕೋಣೆಯಲ್ಲಿ ಉಳಿದ ದೇವರುಗಳ ಜೊತೆ ಏರ್ಪಾಡು ಮಾಡಿಕೊಳ್ಳಬೇಕು.

ನಂತರ ರೋಹಿಣಿ ನಕ್ಷತ್ರದ ದಿನದಿಂದ ಅಥವಾ ಯಾವುದೇ ಸೋಮವಾರದಿಂದ ಆರಂಭ ಮಾಡಿ ಕೃಷ್ಣನ ಮುಂದೆ ತುಪ್ಪದಿಂದ ದೀಪಾರಾಧನೆಯನ್ನು ಮಾಡಿಕೊಳ್ಳಬೇಕು. ಪಾರಿಜಾತ ಪುಷ್ಪ ಸಿಕ್ಕರೆ ಕೃಷ್ಣನಿಗೆ ಅರ್ಪಿಸಬೇಕು ಸಿಗದಿದ್ದರೆ ಅತ್ಯಂತ ಶ್ರೇಷ್ಠ ಪುಷ್ಪ ಅಂದರೆ ತುಳಸಿಯ ಎಲೆಗಳನ್ನು ಗೋಪಾಲಕೃಷ್ಣನ ಮುಂದಿಡುತ್ತಾ ಕೃಷ್ಣನ ಅಷ್ಟೋತ್ತರವನ್ನು ಹೇಳುವುದಾಗಲಿ ಅಥವಾ ಹೇಳುವುದಾಗಲಿ ಮಾಡಿಕೊಳ್ಳಬೇಕು.

ಗೋಪಾಲಕೃಷ್ಣನ ಅನುಗ್ರಹಕ್ಕೋಸ್ಕರ ಆತನ ಪ್ರೀತಿಗೋಸ್ಕರ ಅವಲಕ್ಕಿ ಬೆಲ್ಲ ಹಸುವಿನ ಹಾಲನ್ನು ನೈವೇದ್ಯವಾಗಿ ಅರ್ಪಿಸಬೇಕು ಹೀಗೆ ಯಾವುದಾದರೂ ಸೋಮವಾರದ ದಿನ ಆರಂಭಿಸಿ ಅಥವಾ ರೋಹಿಣಿ ನಕ್ಷತ್ರದ ದಿನ ಆರಂಭಿಸಿ ಒಂದು ವರ್ಷದ ಒಳಗೆ 41 ದಿನ ಅಥವಾ ನಿರಂತರ 41 ದಿನ ಗೋಪಾಲಕೃಷ್ಣನ ಪೂಜೆಯನ್ನು ಮಾಡುತ್ತಾ ಬರಬೇಕು ಮಹಿಳೆಯರಿಗೆ ತಿಂಗಳ ಸಮಸ್ಯೆ ಬಂದಾಗ ಆ ದಿನವನ್ನು ಬಿಟ್ಟು ಉಳಿದ ದಿನವನ್ನು ಪೂಜಿಸಿ 41 ದಿನದ ವ್ರತವನ್ನು ಮುಗಿಸಬೇಕು.

ಈ ಪೂಜಾ ಆರಂಭಿಸಿದ ಎರಡು ಮೂರು ವಾರಗಳಲ್ಲಿಯೇ ನಿಮ್ಮ ಮನೆಯಲ್ಲಿ ಜೀವನದಲ್ಲಿ ನಿಮ್ಮ ಮನಸ್ಸಿನಲ್ಲಿ ಅನೇಕ ರೀತಿಯಾಗಿ ಬದಲಾವಣೆಗಳು ಉಂಟಾಗುತ್ತವೆ ಹಣಕಾಸಿನ ಲಾಭಗಳು ನಿಮಗೆ ಕಾಣಿಸುತ್ತಾ ಹೋಗುತ್ತವೆ ಗೋಪಾಲಕೃಷ್ಣನ ಪರಿಪೂರ್ಣ ಅನುಗ್ರಹದಿಂದ ಅಷ್ಟ ಐಶ್ವರ್ಯ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಿ ಜೀವನದಲ್ಲಿ ಅದ್ಭುತವಾದ ಯಶಸ್ಸು ಏಳಿಗೆ ಖಚಿತವಾಗಿ ಉಂಟಾಗುತ್ತದೆ ಮುಂದಿನ ದಿನಗಳಲ್ಲಿ ಕಾಲ ಮಾಂಸಹಾರವನ್ನು ಸೇವಿಸಬಾರದು ಬ್ರ

ಹ್ಮಚರ್ಯವನ್ನು ತಪ್ಪದೇ ಪಾಲಿಸಬೇಕು 41 ದಿನಗಳ ಕಾಲ ಶ್ರೀ ಕೃಷ್ಣ ಸ್ಮರಣೆಯನ್ನು ಮಾಡಿಕೊಳ್ಳಬೇಕು. ಸಾಧ್ಯವಾದರೆ ಸೋಮವಾರ ಒಂದು ದಿನ ಮಾತ್ರ ಉಪವಾಸವಿದ್ದು ಸಲ್ಲಿಸಬೇಕು. ಸೋಮವಾರ ಒಂದು ದಿನ ಉಪವಾಸವಿದ್ದ ಶ್ರೀ ಕೃಷ್ಣ ಪೂಜೆ ಮಾಡುವವರು ರಾತ್ರಿ ಸಮಯ ಪೂಜೆ ಮಾಡಿದರೆ ತುಂಬಾ ವೇಗವಾಗಿ ಹಣದ ಸಮಸ್ಯೆಗಳು ತೀರಿ ಕೃಷ್ಣನ ಅನುಗ್ರಹವಾಗಿ ಅಪನಂಬಿಕೆ ಮಾಡದೆ

ಗೋಪಾಲಕೃಷ್ಣನ ಆರಾಧನೆಯನ್ನು ಮಾಡಿ ನೋಡಿ ಯಾವುದೇ ಹೆಚ್ಚು ಖರ್ಚು ವೆಚ್ಚವಿಲ್ಲದೆ ಭತ್ತಿ,ತುಪ್ಪದ ದೀಪ, ತುಳಸಿಯ ದಳಗಳು, ಹಾಲು ಇವಿಷ್ಟನ್ನೇ ಮರ್ಪಿಸಿ ಭಗವಂತನಿಗೆ ನಿಮ್ಮ ಕೋರಿಕೆಗಳನ್ನ ತಲುಪಿಸುವಂತಹ ಸರಳ ಪೂಜಾ ವಿಧಾನವಿದು. ಈ ವಿಶೇಷ ಗೋಪಾಲಕೃಷ್ಣನ ಪೂಜೆಯ ಬಗೆಗಿನ ಈ ಒಂದು ಮಾಹಿತಿ ನಿಮಗೆ ಇಷ್ಟ ಆದರೆ ಲೈಕ್ ಮಾಡಿ, ಶೇರ್ ಮಾಡಿ ಹಾಗೂ ಜೈ ಗೋಪಾಲಕೃಷ್ಣ ಎಂದು ಕಾಮೆಂಟ್ ಮಾಡಿರಿ. ಧನ್ಯವಾದಗಳು.ಎಲ್ಲರಿಗೂ ಒಳ್ಳೆದಾಗಲಿ.

vastu tips ಯಾರೂ ನೋಡದಂತೆ ಅವುಗಳನ್ನು ಮರೆಮಾಡಿ, ಇಲ್ಲದಿದ್ದರೆ ಕಷ್ಟ ತಪ್ಪೋಲ್ಲ

bitter guard ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಹತ್ತಿರ ಹಾಗಾಲಕಾಯಿ ಗಿಡಗಳನ್ನು ಇಡಬಾರದು ಏಕೆ?

Leave A Reply

Your email address will not be published.