Ultimate magazine theme for WordPress.

Beauty enhancement tips ಸೌಂದರ್ಯ ವರ್ಧಕ ಟಿಪ್ಸ್ – ಸೌಂದರ್ಯ ತ್ವಜೆ ವರ್ದಿಸಬೇಕೆ?ಹೀಗೆ ಮಾಡಿ ಖಂಡಿತ ಚೆನ್ನಾಗಿ ಕಾಣಿಸುತ್ತೀರ

0 76

Beauty enhancement tips ನಮಸ್ಕಾರ ಸ್ನೇಹಿತರೆ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಸೌಂದರ್ಯ ಹೆಚ್ಚಾಗಬೇಕು? ಜನರು ನಿಮ್ಮತ್ತ ಸೆಳೆಯಬೇಕೆ? ಈ ಮಹಾ ಉಪಾಯವನ್ನು ತಪ್ಪದೇ ಮಾಡಿ ನೋಡಿ ಎನ್ನುವ ಈ ರಹಸ್ಯದ ಮಾಹಿತಿಯನ್ನು ಸಂಚಿಕೆಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ.

ಈಗಲೇ ಒಂದು ಸಂಚಿಕೆಗೆ ಲೈಕ್ ಕೊಟ್ಟು ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ ಎಂದು ಕಮೆಂಟ್ ಮಾಡಲು ಮರೆಯದಿರಿ. ನಟಿ ಐಶ್ವರ್ಯ ರೈ ಇವರನ್ನು ನೋಡಿದ್ದೀರಾ? ಆಕೆಯ ಸೌಂದರ್ಯ ನೋಡಿ ಇಡೀ ವಿಶ್ವವೇ ತಲೆಬಾಗಿತ್ತು ಸೌಂದರ್ಯದ ಗಣಿ ಎಂದು ಕೂಡ ಹೇಳಬಹುದು ಹಾಗೆಯೇ ನಟಿ ಶ್ರೀದೇವಿ, ನಟಿ ರೇಖಾ, ನಟಿ ಆಲಿಯಾ ಭಟ್ ಇನ್ನು ಅನೇಕ ನಟಿಯರ ತಿದ್ದು ತೀಡಿದಂತಹ ಮೂಗು , ಉಬ್ಬು, ಕೇಶರಾಶಿ, ಅವರ ಮೈ ಮಾಟ ದೇಹದ ಬಣ್ಣ ದೇವರೇ ಕುಳಿತವನ್ನು ಸೃಷ್ಟಿ ಮಾಡಿರಬಹುದು ಎಂದು ಎಷ್ಟೋ ಜನ ಎಂದುಕೊಂಡಿರುತ್ತಾರೆ

ಹಾಗಂತ ಬಾಲಿವುಡ್ ನಲ್ಲಿ ಮಾತ್ರ ಅಲ್ಲ ನಮ್ಮ ಚಂದನವನದಲ್ಲೂ ಸುಂದರ ನಟಿಯರಿದ್ದಾರೆ ನಟಿ ರುಕ್ಮಿಣಿ ವಸಂತ್, ಶ್ರೀ ಲೀಲಾ, ಶ್ರೀನಿಧಿ ಶೆಟ್ಟಿ, ಆಶಿಕಾ ರಂಗನಾಥ್, ಸಪ್ತಮಿ ಗೌಡ ಇವರೇನು ಕಡಿಮೆಯಾದ ಇವರೆಲ್ಲ ಇತ್ತೀಚಿನ ನಟಿಯರಾದರೆ ಇನ್ನೂ ನಟಿಯರಾದ ಆರತಿ, ಭಾರತಿ, ಸುಮಲತಾ, ಮಾಲಾಶ್ರೀ ಇವರು ಕೂಡ ತಮ್ಮ ರೂಪ ರಾಶಿಯಿಂದ ಪಡ್ಡೆ ಹೈಕಳ ನಿದ್ದೆಯನ್ನು ಕದ್ದವರೇ.

ಈಗ ಸೌಂದರ್ಯ ಎಂದರೆ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತ ಎನ್ನುವ ಕಾಲ ಬದಲಾಗಿದೆ ಈಗ ಹುಡುಗರು ಕೂಡ ಹೆಣ್ಣು ಮಕ್ಕಳ ಸೌಂದರ್ಯಕ್ಕೆ ಕಾಂಪಿಟೇಶನ್ ಕೊಡುತ್ತಿದ್ದಾರೆ, ಆದರೆ ಏನೇ ಆಗಲಿ ಇವರಲ್ಲಿ ಕೆಲವರು ತೆರೆಯ ಮೇಲೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಚಿಕ್ಕಪುಟ್ಟ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಹುಟ್ಟುವಾಗಲೇ ಅಂದ ಚಂದದಿಂದ ಹುಟ್ಟಿರುತ್ತಾರೆ ಹುಟ್ಟುವಾಗಲೇ ಅಂದ ಚಂದದ ವರವನ್ನು ಪಡೆದುಕೊಂಡೆ ಹುಟ್ಟಿರುತ್ತಾರೆ.

ಈ ಸಂಚಿಕೆಯಲ್ಲಿ ಸೌಂದರ್ಯದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿರುತ್ತಾರೆ ಅವರಿಗೆ ಕೆಲವು ವಿಚಾರಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ ನಾವು ನೋಡುವುದಕ್ಕೆ ಚೆನ್ನಾಗಿಲ್ಲ ಅಂದುಕೊಂಡು ರೆಪ್ರೆಶ್ ಗೆ ಹೋಗಿರುತ್ತಾರೆ ಅದಕ್ಕೆಲ್ಲ ಏನು ಕಾರಣ ಎನ್ನುವರಹಸ್ಯ ಕೂಡ ಈ ಸಂಚಿಕೆಯಲ್ಲಿ ಹೇಳುತ್ತೇವೆ ಹಾಗೂ ನಿಮ್ಮ ಸೌಂದರ್ಯ ಇನ್ನು ಹೆಚ್ಚು ಮಾಡಿಕೊಳ್ಳಲು ಏನು ಮಾಡಬೇಕು ಜನ ನಿಮ್ಮ ಕಡೆ ತಿರುಗಿ ನೋಡಬೇಕು ಅಂದ್ರೆ ಹೇಗೆ ಆಕರ್ಷಣೆ ಹೆಚ್ಚು ಮಾಡಿಕೊಳ್ಳಬೇಕು ಎಂದು ನಿಮಗೆ ತಿಳಿಸಿ ಕೊಡುತ್ತೇವೆ.

ಯಾರಿಗೆ ತಾನೇ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಲು ಇಷ್ಟ ಇಲ್ಲ ಹೇಳಿ ಕಪ್ಪಗಿರಲಿ ಬೆಳ್ಳಗಿರಲಿ ಉಳ್ಳವಿರಲಿ ಎತ್ತರವಿರಲಿ ದಪ್ಪವಿರಲಿ ಸಣ್ಣವಿರಲಿ ಹೀಗೆ ಇದ್ದರೂ ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂದು ಇರುತ್ತದೆ, ಕೆಲವರು ಅದಕ್ಕೆ ಅಂತಲೇ ಬ್ಯೂಟಿ ಪಾರ್ಲರ್ ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ ಇನ್ನೂ ಕೆಲವರು ಮನೆಯಲ್ಲಿ ಏನೇನೋ ಫೇಸ್ ಮಾಸ್ಕ್ ಮಾಡಿಕೊಳ್ಳುತ್ತಾರೆ ಕೇವಲ ಹೆಣ್ಣು ಮಕ್ಕಳೇ ಇದನ್ನು ಮಾಡುತ್ತಾರೆ ಎಂದು ಕೊಳ್ಳಬೇಡಿ

ಗಂಡು ಮಕ್ಕಳಿಗೆ ತಾವು ಸುಂದರವಾಗಿ ಕಾಣಿಸಿಕೊಳ್ಳಬೇಕು ಎಂದು ಆಸೆ ಇರುತ್ತದೆ ಕೆಲವರು ಮಾತ್ರ ಹೇಗೆ ಅಂದವಾಗಿ ಇರುತ್ತಾರೆ ಮುಖದಲ್ಲಿ ಚಿಕ್ಕ ಕಲೆಯು ಇರುವುದಿಲ್ಲ ಇನ್ನು ಕೆಲವರ ಮುಖವೇ ನೋಡುವುದಕ್ಕೆ ಆಗುವುದಿಲ್ಲ ಯಾಕೆ ಅದಕ್ಕೆ ಉತ್ತರವನ್ನು ಕೊಡುತ್ತೇವೆ ಅದಕ್ಕೂ ಮೊದಲು ಮುಖ್ಯವಾದ ಒಂದು ಮಾತು ಏನೆಂದರೆ ಮನುಷ್ಯನಿಗೆ ದೇಹ ತೊಂದರೆಗಿಂತ ಮನಸ್ಸು ಹಾಗೂ ಆತನ ವಿಚಾರಗಳು ಸುಂದರವಾಗಿರಬೇಕು ದೇಹ ಸೌಂದರ್ಯ ಒಂದಲ್ಲ ಒಂದು ದಿನ ಹೊರಟು ಹೋಗಿಬಿಡುತ್ತದೆ

ಆದರೆ ಮನಸ್ಸು ಹಾಗೂ ವಿಚಾರ ಆತ ಬದುಕಿರುವವರೆಗೂ ಇರುತ್ತದೆ ಆದರೂ ನಿಮ್ಮ ದೇಹ ಸೌಂದರ್ಯ ನಿಮಗೆ ಚೆನ್ನಾಗಿಲ್ಲ ಎಂದು ಅನಿಸಿದರೆ ಅದಕ್ಕೆ ಕಾರಣ ಏನೆಂದರೆ ನಿಮ್ಮ ಕುಂಡಲಿಯಲ್ಲಿರುವ ಗ್ರಹಗಳು ಹೌದು ಜ್ಯೋತಿಷ್ಯದಲ್ಲಿ ಗ್ರಹಗಳು ವ್ಯಕ್ತಿಗಳ ಜೀವನದಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಜಾತಕದಲ್ಲಿನ ಗ್ರಹಗಳು ಸ್ಥಳೀಯರಿಗೆ ಕೆಲವು ಗುಣಗಳು ಹಾಗೂ ವೈಶಿಷ್ಟ್ಯಗಳು ಅನುಕೂಲಗಳು ಅಥವಾ ಅನಾನುಕೂಲಗಳನ್ನು ನೀಡುತ್ತದೆ ಜಾತಕದಲ್ಲಿನ ಮುಖ್ಯಗ್ರಹವು ವ್ಯಕ್ತಿಯ ದೈಹಿಕ ಗುಣಲಕ್ಷಣಗಳನ್ನು ಮುಸುಕಾಗಿರುವಲ್ಲಿನ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಮಾನವನ ಮುಖವು ಒಬ್ಬರ ಆಂತರಿಕ ಭಾವನೆಗಳನ್ನು ಪ್ರತಿ ಬಿಂಬಿಸುತ್ತದೆ ಎಂದು ಹೇಳಲಾಗುತ್ತದೆ ಏಕೆಂದರೆ ವ್ಯಕ್ತಿಯು ಸಂತೋಷ, ದುಃಖ ಅಥವಾ ಕೋಪದಂತಹ ಯಾವುದೇ ಭಾವನೆಗಳನ್ನು ಹೊಂದಿದ್ದರು ಅದು ಮಾನವನ ಮುಖದ ಮೇಲೆ ಪ್ರತಿಫಲಿಸುತ್ತದೆ. ಇದೇ ಕಾರಣಕ್ಕೆ ಯಾರಾದರೂ ಖುಷಿಯಾಗಿದ್ದರು ದುಃಖದಲ್ಲಿ ಇದ್ದರೂ ಅವರವರ ಮುಖದಲ್ಲಿ ತಕ್ಷಣವೇ ವ್ಯಕ್ತವಾಗಿ ಬಿಡುತ್ತದೆ ಅದೇ ರೀತಿ ಯಾರ ದೇಹದ ಮೇಲಾದರೂ ಚರ್ಮರೋಗದ ಲಕ್ಷಣ ಇದ್ದರೆ ಅವರಿಗೆ ರಾಹು ಬೆನ್ನು ಬಿಡದ ಬೇತಾಳದಂತೆ ಕಾಡುತ್ತಿರುತ್ತದೆ ಎಂದು ಅರ್ಥ.

ರಾಹು ನಿಮ್ಮ ರಾಶಿ ಗ್ರಹಗಳ ಮೇಲೆ ಅಂದರೆ ಬುಧ ಗ್ರಹ, ಮಂಗಳ ಗ್ರಹ, ಸೂರ್ಯ ಹಾಗೂ ಶುಕ್ರ ಗ್ರಹಗಳ ಹೆಡೆಯುತ್ತಿ ಕೂತಿದ್ದರೆ ಅಂತವರಿಗೆ ಚರ್ಮರೋಗ ತಪ್ಪಿದ್ದಲ್ಲ ಕೆಲವರಿಗೆ ಮುಖದ ತುಂಬಾ ಪಿಗ್ಮಿಟೇಶನ್ ಇರುತ್ತದೆ ಅದಕ್ಕೆ ಏನು ಔಷಧಿ ಹೆಚ್ಚಿದರು, ಅದು ಹೋಗುತ್ತಿರಲ್ಲ ಬದಲಾಗಿ ಇನ್ನಷ್ಟು ಹರಡುತ್ತಾ ಹೋಗುತ್ತದೆ ಇನ್ನೂ ಕೆಲವರಿಗೆ 30 ವಯಸ್ಸಾದರೂ ಮೊಡವೆಗಳಿಂದ ಮುಖ ವಿಕಾರವಾಗಿರುತ್ತದೆ ಇದಕ್ಕೆ ಕಾರಣ ಶಕ್ತಿ ಕಳೆದುಕೊಂಡಿರುವ ಬುಧ ಗ್ರಹ ಈ ಗ್ರಹದ ಶಕ್ತಿ ಹೇಗೆ ಕಡಿಮೆ ಆಗುತ್ತದೆ ಎಂದು ಇದರಿಂದ ನಾನಾ ಚರ್ಮ ರೋಗದ ಸಮಸ್ಯೆಗಳು ಹುಟ್ಟಿಕೊಳ್ಳುತ್ತಾ ಹೋಗುತ್ತದೆ ಪಿಗ್ಮೆಂಟೇಷನ್ ಆಗೋದು ಕೂಡ ಬುಧ ಗ್ರಹ ಬಲಹೀನವಾಗುವುದರಿಂದ.
ಇನ್ನು ನಿಮ್ಮ ಬಣ್ಣ ಕಪ್ಪು ಆಗುತ್ತಿದ್ದರೆ ಅದನ್ನು ನೀವು ಟ್ಯಾನ್ ಎಂದು ಅಂದುಕೊಳ್ಳಬಹುದು ಅಸಲಿಗೆ ಅದು ಸೂರ್ಯ ಹಾಗೂ ರಾಹುವಿನ ಜೊತೆ ಸಂಬಂಧವನ್ನು ಬೆಳೆಸಿದರೆ ಪರಿಣಾಮವಿದು ಕೇವಲ ರಾಹುವಿನ ಜೊತೆ ಅಷ್ಟೇ ಅಲ್ಲ ಮಂಗಳನ ಜೊತೆ ಸೇರಿಕೊಂಡಿದ್ದೆ ಆದಲ್ಲಿ ಚಿತ್ರವಿಚಿತ್ರವಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗೇನೇ ಚರ್ಮ ಒಣಗಿದ ರೀತಿ ಇದ್ದರೆ ಹೊಟ್ಟಿನ ಸಮಸ್ಯೆ ಆಗುತ್ತಿದ್ದಲ್ಲಿ ಮೂಗಿನ ಮೇಲೆ ಬ್ಲ್ಯಾಕ್ ಹೆಡ್ ವೈಟ್ ಹೆಡ್ ಆಗುತ್ತಿದ್ದರೆ ಅದಕ್ಕೆಲ್ಲ ಗುರು ಗ್ರಹ ಕಾರಣವಾಗಿದೆ.

ಈ ಸಮಸ್ಯೆಗೆ ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ ಪಿಗ್ಮೆಂಟೇಶನ್ ದಿನಕ್ಕೆ ಹೆಚ್ಚಾಗುತ್ತಿದೆ ಇದರಿಂದ ನಿಮ್ಮ ಮನಸ್ಸಿಗೆ ನೋವಾಗಿದೆಯಾ ಜ್ಯೋತಿ ಶಾಸ್ತ್ರ ಹೇಳುವ ಪರಿಹಾರ ಏನೆಂದರೆ ಮೆಹಂದಿ ಎಲೆಯನ್ನು ರುಬ್ಬಿಕೊಂಡು ಪಾದಕ್ಕೆ ಹಚ್ಚಿಕೊಳ್ಳಿ ಜೊತೆಗೆ ಆದಷ್ಟು ನೀರನ್ನು ಕುಡಿದು ಹೊಟ್ಟೆಯನ್ನು ಚೆನ್ನಾಗಿ ಇಟ್ಟುಕೊಳ್ಳಿ ಹಸಿರು ಸೊಪ್ಪು ತರಕಾರಿಗಳನ್ನು ಚೆನ್ನಾಗಿ ತಿನ್ನಿರಿ, ಪಾಲಕ್ ಸೊಪ್ಪು ಆದಷ್ಟು ಹೆಚ್ಚು ತಿಂದಲ್ಲಿ ತುಂಬಾ ಒಳ್ಳೆಯದು .

ಹಾಗೆಯೇ ಚರ್ಮದ ಬಣ್ಣ ದಿನದಿಂದ ದಿನಕ್ಕೆ ಕಪ್ಪಾಗುತ್ತಿದ್ದಲ್ಲಿ ಯಾವುದೋ ಯಾವುದೋ ಕ್ರೀಮ್ಗಳನ್ನು ಹಚ್ಚದಿರಿ ಎರಡು ದಿನ ಬೆಳ್ಳಗನಿಸಿದರು ಮತ್ತೆ ಅದೇ ರೀತಿಯಾದ ಕಪ್ಪು ಬಣ್ಣ ಉಳಿದುಬಿಡುತ್ತದೆ ಅಲ್ಲದೆ ಅಲರ್ಜಿ ಕೂಡ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ನೀವು ಪ್ರತಿ ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರಿಟ್ಟು ಅದನ್ನು ಬೆಳಗ್ಗೆ ಕುಡಿಯಿರಿ ಇದರಿಂದ ಚರ್ಮದ ಸಮಸ್ಯೆ ಮಾತ್ರ ಅಲ್ಲ ನಾನಾ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಸೂರ್ಯೋದಯದ ಸಮಯದಲ್ಲಿ ತಾಮ್ರದ ಪಾತ್ರೆಯಿಂದ ಸೂರ್ಯನಿಗೆ ನೀರನ್ನು ಅರ್ಪಿಸಿ ಹಾಗೂ ಮನೆಯ ಹಿರಿಯರಿಂದ ತಾಮ್ರದ ಆಣೆ ಪಡೆದು ಆಶೀರ್ವಾದಗಳನ್ನು ಪಡೆಯುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಚಿಕ್ಕವರಿದ್ದಾಗ ಬಿದ್ದಾಗ ಆದ ಕಲೆಗಳು ದೊಡ್ಡವರಾದ ಮೇಲೂ ಆ ಕಲೆಗಳು ಹಾಗೆಯೇ ಇರುತ್ತವೆ ಇನ್ನು ಕೆಲವು ಬಾರಿ ಅಪಘಾತಕ್ಕೆ ಒಳಗಾದಾಗ ದೊಡ್ಡ ದೊಡ್ಡ ಗಾಯಗಳಾಗುತ್ತವೆ ಗಾಯ ಒಣಗಿದರು ಆ ಕಲೆಗಳು ಹಾಗೆ ಉಳಿದುಕೊಂಡು ಬಿಡುತ್ತವೆ ಅದಕ್ಕೆ ಮಂಗಳ ಗ್ರಹವನ್ನು ಮೊದಲು ಶಾಂತ ಮಾಡಿರಿ, ಹಾಗೆಯೇ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಅದಕ್ಕೆ ತೊಗರಿ ಬೇಳೆಯನ್ನು ಹಾಕಿ ಚೆನ್ನಾಗಿ ಹುರಿದುಕೊಂಡು ಅದನ್ನು ಆ ಕಲೆಯ ಮೇಲೆ ಹಚ್ಚಿಕೊಳ್ಳಿ ಅದು ಹಂತ ಹಂತವಾಗಿ ಮಾಯವಾಗಿ ಹೋಗುತ್ತದೆ.

ಗುರು ಗ್ರಹದಿಂದ ಸಮಸ್ಯೆಯಾಗುತ್ತಿದ್ದಲ್ಲಿ ನಿಮ್ಮ ಚರ್ಮವು ಕಪ್ಪು ಆಗುತ್ತದೆ, ಕಣ್ಣಿನ ಸುತ್ತಲೂ ಕಪ್ಪು ಆಗುತ್ತದೆ ತುಟಿಗಳು ಕಪ್ಪು ಆಗುತ್ತದೆ ಹಾಗೂ ಮೊಣ ಕೈ ಕಪ್ಪಗಾಗಿ ಹೋಗುತ್ತದೆ ಅದಕ್ಕೆ ಗುರುವಾರದಂದು ಗೋವಿಗೆ ರೊಟ್ಟಿಯನ್ನು ತಿನ್ನಿಸಿಬಿಡಿ ಹಾಗೆಯೇ ಪ್ರತಿದಿನ ಅರಿಶಿಣವನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಿ ಸ್ನಾನದ ನಂತರ ಮನೆಯಲ್ಲಿರುವ ದೇವರ ಫೋಟೋಗೆ ಹಳದಿ ಬಣ್ಣದ ಹೂಗಳನ್ನು ಅರ್ಪಿಸಿರಿ

ಜೊತೆಗೆ ದೇವಸ್ಥಾನಕ್ಕೆ ಹೋದಾಗ ಹಳದಿ ಬಣ್ಣದ ವಸ್ತ್ರವನ್ನು ದಾನ ಮಾಡಿ ಜೊತೆಗೆ ಎಳೆ ಬಿಸಿಲಿನಲ್ಲಿ ಸ್ವಲ್ಪ ನೀರನ್ನು ಇಟ್ಟು ಅದು ಬೆಚ್ಚಗಾದ ಮೇಲೆ ಆ ನೀರನ್ನು ಕುಡಿಯಿರಿ ಇದರಿಂದ ಚರ್ಮ ಹೊಳೆಯುವುದಲ್ಲದೆ ಮುಖದ ಚರ್ಮ ಕಾಂತಿಯುತವಾಗುತ್ತದೆ. ಆದಷ್ಟು ಗುರು ತನ್ನ ವರ್ಚಸ್ಸು ಕಾಪಾಡಿಕೊಳ್ಳುವಂತೆ ಮಾಡಿಕೊಳ್ಳಬೇಕು. ಅದಕ್ಕಾಗಿ ಹಿತ್ತಾಳೆ ಪಾತ್ರೆಯಲ್ಲಿ ನೀರಿಟ್ಟು ಕುಡಿಯಬೇಕು

ನಿಮ್ಮ ಕೈಯ ಮೊದಲ ಬೆರಳಿನಲ್ಲಿ ಉಂಗುರವನ್ನು ಧರಿಸಿ ಜೊತೆಗೆ ನಿಮ್ಮ ಅಮ್ಮನಿಂದ ಹಳದಿ ಬಣ್ಣದ ವಸ್ತುವನ್ನು ದಾನದ ರೂಪದಲ್ಲಿ ಪಡೆದು ಅದನ್ನು ತಲೆಯ ಬಳಿ ಇಟ್ಟುಕೊಂಡು ಮಲಗಿಬಿಡಿ ಹೀಗೆ ಮಾಡುವುದರಿಂದ ನಿಮ್ಮ ಕುಂಡಲಿಯಲ್ಲಿರುವ ಗುರು ಗ್ರಹ ಅಷ್ಟೇ ಅಲ್ಲ ಬೇರೆ ಯಾವ ಗ್ರಹಗಳಿದ್ದವು ಅವು ನಿಮ್ಮ ಎಲ್ಲಾ ಸಮಸ್ಯೆಗಳನ್ನು ದೂರ ಮಾಡಿಬಿಡುತ್ತವೆ. ಲೈಕ್ ಮಾಡಿ ಶೇರ್ ಮಾಡಿ ಹಾಗೂ ತಪ್ಪದೇ ಕಮೆಂಟ್ ಮಾಡಿ ಧನ್ಯವಾದಗಳು.

Leave A Reply

Your email address will not be published.