In whose house ಹೆಣ್ಣುಮಕ್ಕಳು ಯಾರ ಮನೆಯಲ್ಲಿ ಜನಿಸುತ್ತಾರೆ?
In whose house are girls born?ಇವತ್ತಿನ ಲೇಖನದಲ್ಲಿ ಹೆಣ್ಣು ಮಕ್ಕಳು ಯಾರ ಮನೆಯಲ್ಲಿ ಜನ್ಮವನ್ನು ಪಡೆದುಕೊಳ್ಳುತ್ತಾರೆ? ಯಾರ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರು ಎಷ್ಟು ಭಾಗ್ಯಶಾಲಿಗಳಾಗಿರುತ್ತಾರೆ ಈ ಮಾತು ಸರಿಯೇ ಆಗಿದೆ. ಸ್ಕಂದ ಪುರಾಣ ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದಾಗಿದೆ. ಇದರಲ್ಲಿ ಒಂದು ಮಾತು ಇದೆ. ಒಂದು ಹೆಣ್ಣು ಮಗುವನ್ನು ದಿವ್ಯತಾಯಿಯ ಅವತಾರ ಎಂದು ತಿಳಿಯಲಾಗಿದೆ.
ಮಾಹಿತಿಯ ಅನುಸಾರವಾಗಿ ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಸೌಭಾಗ್ಯ, ಸಂಮೃದ್ಧಿ ಮನೆಗೆ ಬರುತ್ತವೆ. ಇವರು ಪ್ರೀತಿ, ಕರುಣೆ, ಕಾಳಜಿಯನ್ನು ತೋರಿಸುವಂತಹವರು ಆಗಿರುತ್ತಾರೆ. ಸ್ಕಂದ ಪುರಾಣದಲ್ಲಿ ಒಂದು ಮಾತು ಇದೆ ಯಾವ ತಂದೆ ತನ್ನ ಮಗಳನ್ನು ಪ್ರೀತಿ, ಸ್ನೇಹದಿಂದ ಬೆಳೆಸುತ್ತಾರೋ ಅಂತಹವರಿಗೆ ಮಹಾನ್ ಯೋಗ್ಯತೆ ಸಿಗುತ್ತದೆ. ಈ ಜನ್ಮ ಮತ್ತು ಮುಂದಿನ ಜನ್ಮದಲ್ಲಿ ಒಳ್ಳೆಯದಾಗುತ್ತದೆ. In whose house
ಇಂದಿಗೂ ನಾವು ಯಾವ ರೀತಿಯ ಸಮಾಜದಲ್ಲಿ ಬದುಕುತ್ತಿದ್ದೀವಿ ಎಂದರೆ ಇಂದಿಗೂ ಪುರುಷರು ಪ್ರಧಾನರಾಗಿದ್ದಾರೆ. ಈಗಲೂ ಹೆಣ್ಣು ಮಕ್ಕಳು ಹುಟ್ಟಿದ ಮನೆಯಲ್ಲಿ ಹೆಚ್ಚಿನ ಜನರಲ್ಲಿ ನಿರಾಶೆ ಮೂಡುತ್ತದೆ. ಆದರೇ ಹೆಣ್ಣು ಮಕ್ಕಳ ಜನನ ಪ್ರತಿಯೊಂದ ಮನೆಯಲ್ಲೂ ಆಗುವುದಿಲ್ಲ. ಅವರು ಯಾವ ರೀತಿಯ ಮನೆಯಲ್ಲಿ ಜನ್ಮವನ್ನು ಪಡೆದುಕೊಳ್ಳುತ್ತಾರೆಂದರೆ ಅಂತಹವರು ಅದೃಷ್ಠಶಾಲಿಗಳಾಗಿರುತ್ತಾರೆ. ಅವರು ತಮ್ಮ ಹಿಂದಿನ ಜನ್ಮದಲ್ಲಿ ಪುಣ್ಯವನ್ನು ಗಳಿಸಿರುತ್ತಾರೆ. In whose house
ಭಗವಂತನಾದ ಕೃಷ್ಣನ ಬಳಿ ಅರ್ಜುನನು ಒಂದು ಮಾತನ್ನು ಕೇಳುತ್ತಾನೆ. ಯಾವ ಕಾರಣಗಳಿಂದ ಜನರ ಮನೆಗಳಲ್ಲಿ ಪುತ್ರಿ ಜನನವಾಗುತ್ತದೆ. ಈ ಮಾತಿನ ಅರ್ಥ ಯಾವ ರೀತಿಯ ಮನೆಗಳಲ್ಲಿ ಹೆಣ್ಣು ಮಕ್ಕಳು ಹುಟ್ಟುತ್ತಾರೆ? ಆಗ ಶ್ರೀಕೃಷ್ಣನು ಅರ್ಜುನನಿಗೆ ಒಂದು ಮಾತನ್ನು ಹೇಳುತ್ತಾನೆ. ಯಾವುದಾದರೂ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೇ ಹೆಣ್ಣು ಮಕ್ಕಳು ಸೌಭಾಗ್ಯವಂತರ ಮನೆಗಳಲ್ಲಿ ಹುಟ್ಟುತ್ತಾರೆ. In whose house
ಯಾವ ಪುರುಷ ಮತ್ತು ಸ್ತ್ರೀಯರು ತಮ್ಮ ಪೂರ್ವಜನ್ಮದಲ್ಲಿ ಪುಣ್ಯವನ್ನು ಗಳಿಸಿರುತ್ತಾರೋ ಅಂತಹವರಿಗೆ ಮಾತ್ರ ಒಬ್ಬ ಹೆಣ್ಣು ಮಗುವಿನ ತಂದೆತಾಯಿ ಆಗುವ ಸೌಭಾಗ್ಯ ಸಿಗುತ್ತದೆ. ಭಗವಂತ ಹೆಣ್ಣು ಮಕ್ಕಳಿಗೆ ಯಾವ ರೀತಿಯ ಮನೆಗಳನ್ನು ಆಯ್ಕೆ ಮಾಡುತ್ತಾನೆಂದರೆ ಅಂತಹವರು ಹೆಣ್ಣು ಮಕ್ಕಳ ಭಾರವನ್ನು ಸಹಿಸಿಕೊಳ್ಳುವವರು ಆಗಿರುತ್ತಾರೆ. ಹೆಣ್ಣು ಮಕ್ಕಳ ಭಾರವನ್ನು ಎಲ್ಲರಿಗೂ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸೃಷ್ಠಿಯನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದಾರೆ. In whose house
ಒಬ್ಬ ಹೆಣ್ಣು ಮಗಳು ತಾನು ತಾಯಿಯಾಗಲು ತನ್ನ ಸರ್ವಸ್ವವನ್ನೇ ಬಿಟ್ಟುಬಿಡುತ್ತಾಳೆ. ತನ್ನ ಸಂತಾನಕ್ಕೋಸ್ಕರ ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನೆಲ್ಲಾ ಸಹಿಸಿಕೊಳ್ಳುತ್ತಾಳೆ ತಾಯಿ. ಯಾವ ಕರ್ಮಗಳನ್ನು ಮಾಡುವುದರಿಂದ ಆತ್ಮವು ಯಾರ ಮನೆಯಲ್ಲಿ ಹೆಣ್ಣು ಮಗುವಾಗಿ ಹುಟ್ಟುತ್ತದೆ. ಅವರ ಮನೆಗೋಸ್ಕರ ಅವರು ಲಕ್ಷ್ಮಿಯ ರೂಪವಾಗಿ ಬಿಡುತ್ತಾರೆ.
ಗರುಡ ಪುರಾಣದಲ್ಲಿ ತಿಳಿಸಿದಂತೆ ಯಾವಾಗ ಒಂದು ಆತ್ಮಕ್ಕೆ ಹೊಸ ಜನ್ಮ ಸಿಗುತ್ತದೆಯೋ ಆಗ ಆತ್ಮವು ತನ್ನ ಶರೀರದ ಅನುಸಾರವಾಗಿ ತನ್ನ ಕರ್ಮಗಳನ್ನ ಮಾಡಬೇಕಾಗಿರುತ್ತದೆ. ಶರೀರದ ಮೂಲಕ ಆತ್ಮ ತನ್ನ ಕರ್ಮಗಳನ್ನ ಮಾಡಿ ಆತ್ಮವು ತನ್ನ ಜನ್ಮದ ಉದ್ದೇಶಗಳನ್ನು ಸಾರ್ಥಕ ಮಾಡುತ್ತದೆ. ಇಲ್ಲಿ ನಿರ್ಥಕವೂ ಆಗಬಹುದು. ಒಂದು ವೇಳೆ ಪುರುಷರು ಮಹಿಳೆಯರಂತೆ ನಡೆದುಕೊಳ್ಳುತ್ತಿದ್ದರೆ, ಸ್ವಭಾವದಲ್ಲಿ ಅವರಲ್ಲಿ ಮಹಿಳೆಯರ ಗುಣವಿದ್ದರೆ ಅಥವಾ ಮಹಿಳೆಯರು ಮಾಡುವಂತಹ ಕೆಲಸ ಕಾರ್ಯಗಳನ್ನು ಮಾಡಲು ಇಷ್ಟಪಡುತ್ತಿದ್ದರೆ In whose house
ಇಂತಹ ಆತ್ಮಗಳಿಗೆ ಈ ನರ ಜನ್ಮ ಮುಗಿದ ನಂತರ ಸ್ತ್ರೀಯರ ಜನ್ಮವನ್ನು ಧರಿಸಿಕೊಳ್ಳುತ್ತಾರೆ. ಜೊತೆಗೆ ಗರುಡ ಪುರಾಣದಲ್ಲಿ ತಿಳಿಸಿದ ಹಾಗೆ ಯಾವ ವ್ಯಕ್ತಿಗಳು ತನ್ನ ಮೃತ್ಯುವಿನ ಅಂತಿಮ ಕ್ಷಣದಲ್ಲಿ ಯಾರಾದರೂ ಸ್ತ್ರೀಯರನ್ನು ನೆನೆಯುತ್ತಾ ತನ್ನ ಪ್ರಾಣವನ್ನು ತ್ಯಾಗ ಮಾಡಿದರೆ ಅಂತಹವರು ಮುಂದಿನ ಜನ್ಮದಲ್ಲಿ ಸ್ತ್ರೀಯರಾಗಿ ಹುಟ್ಟುತ್ತಾರೆ. ಅವರು ಅಂತಿಮ ಕ್ಷಣದಲ್ಲಿ ಪರಮಾತ್ಮನನ್ನು ನೆನೆದರೆ ಇವರು ಮುಕ್ತಿಯ ದಾರಿಯಲ್ಲಿ ನಡೆದು ಹೋಗುತ್ತಾರೆ. ವೇದ ಮತ್ತು ಶಾಸ್ತ್ರಗಳು ಸ್ತ್ರೀ ಸಂತಾನದ ಪ್ರಾಪ್ತಿಯೋಗದಿಂದ ತುಂಬಿಕೊಂಡಿದೆ.
ಶಾಸ್ತ್ರದ ಪ್ರಕಾರ ಯಾವ ವ್ಯಕ್ತಿಗಳು ಗೃಹಸ್ಥ ಜೀವನವನ್ನು ನಡೆಸಲು ಇಷ್ಟಪಡುತ್ತಿದ್ದರೆ ಅವರ ಬಳಿ ಒಂದು ಮಗು ಇರಬೇಕು ಇಲ್ಲವಾದರೇ ಅವರು ಮರಳಿ ನರಕವನ್ನು ಎದುರಿಸಬೇಕಾಗುತ್ತದೆ. ಹಿಂದೆ ಮಹಾರಾಜರು ಒಬ್ಬ ಹೆಣ್ಣು ಮಗಳನ್ನ ಪಡೆಯಲು ತಪಸ್ಸನ್ನ ಮಾಡಿದ್ದಾರೆ. ಯಾವ ಮನೆಯಲ್ಲಿ ಹೆಣ್ಣು ಮಗು ಜನನವಾಗಿರುತ್ತದೆಯೋ ಆ ಮನೆಯು ಸ್ವರ್ಗಕ್ಕೆ ಸಮಾನವಾಗಿರುತ್ತದೆ. In whose house
ಏಕೆಂದರೆ ಗಂಡು ಮಗು ಕೇವಲ ಕುಲವನ್ನ ಬೆಳಗಿದರೆ ಹೆಣ್ಣು ಮಕ್ಕಳು ಎರಡು ಕುಲಗಳನ್ನು ಬೆಳಗುತ್ತಾರೆ. ತಂದೆತಾಯಿಯ ರೂಪದಲ್ಲಿ ಅವರು ಮಗಳ ರೂಪದಲ್ಲಿದ್ದರೆ ಗಂಡನ ಮನೆಗೆ ಬಂದು ಸೊಸೆಯ ರೂಪದಲ್ಲಿ ಎಲ್ಲಾ ಕರ್ತವ್ಯಗಳನ್ನು ಪಾಲಿಸುತ್ತಾರೆ. ಯಾರ ಮನೆಯಲ್ಲಿ ಒಬ್ಬರಿಗಿಂತ ಹೆಚ್ಚು ಜನರು ಹೆಣ್ಣು ಮಕ್ಕಳು ಇರುತ್ತಾರೋ ಅಂತಹವರ ಮನೆಯವರು ಅದೃಷ್ಠಶಾಲಿಗಳಾಗಿರುತ್ತಾರೆ. ಇದೇ ಕಾರಣಕ್ಕಾಗಿ ಹೆಣ್ಣು ಮಕ್ಕಳನ್ನ ತಾಯಿ ಲಕ್ಷ್ಮಿದೇವಿಯ ಸ್ವರೂಪ ಎಂದು ಹೇಳಲಾಗುತ್ತದೆ. ಹೆಣ್ಣು ಮಕ್ಕಳು ತಂದೆತಾಯಿಗೆ ಭಾರವಾಗಿ ಹುಟ್ಟುವುದಿಲ್ಲ ಬದಲಾಗಿ ಅವರ ಅದೃಷ್ಠವನ್ನೇ ಬದಲಾಯಿಸಲು ಹುಟ್ಟಿರುತ್ತಾರೆ.