Ultimate magazine theme for WordPress.

Aloe vera ಅಲೋ ವೆರ ಗಿಡದ ವಿಶೇಷ ಲಾಭಗಳು 

0 782

Aloe vera health benefits in kannada ಅಲೋವೆರ ಅಥವಾ ಲೋಳೆಸರದ ಔಷಧಿಯ ಗುಣಗಳ ಬಗ್ಗೆ ನಿಮಗೆ ಗೊತ್ತಿದೆ ಹಾಗೆಯೇ ಇದರ ದೈವಿಕ ಗುಣದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಮತ್ತು ಆರೋಗ್ಯ ಮತ್ತು ದೈವಿಕ ದೃಷ್ಠಿಯಿಂದ ಯಾವೆಲ್ಲಾ ಉಪಾಯಗಳನ್ನು ಮಾಡಿದರೇ ಒಳ್ಳೆದಾಗುತ್ತದೆ ಎಂಬುದನ್ನ ತಿಳಿಸಿಕೊಡುತ್ತೇವೆ. ಮನುಷ್ಯನ ದೇಹದಲ್ಲಿ ಅಗ್ನಿತತ್ತ್ವ, ಜಲತತ್ತ್ವ ಹೀಗೆ ಬಹಳಷ್ಟು ಇರುತ್ತವೆ. ನಮ್ಮ ದೇಹದಲ್ಲಿ ಅಗ್ನಿತತ್ತ್ವವು ಕಡಿಮೆಯಾದರೇ ಅದಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರುತ್ತವೆ.

ಅಗ್ನಿತತ್ತ್ವವು ಕಡಿಮೆಯಾಗುವುದರಿಂದ ಕಾಯಿಲೆಗಳು ಬರುತ್ತವೆ ಮತ್ತು ಆರ್ಥಿಕ ಪರಿಸ್ಥಿತಿಯು ಹದಗೆಡುತ್ತದೆ. ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು, ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆಗಳು, ಚಿಕ್ಕ ಚಿಕ್ಕ ವಿಷಯಕ್ಕೆ ಒತ್ತಡಕ್ಕೆ ಒಳಗಾಗುವುದು ಇಂತಹ ಸಮಸ್ಯೆಗಳು ನಮ್ಮ ದೇಹದಲ್ಲಿ ಅಗ್ನಿತತ್ತ್ವವು ಕಡಿಮೆಯಾದರೇ ಬರುತ್ತದೆ. ಅಲೋವೆರಾ ಗಿಡದ ಸಂಪೂರ್ಣ ಬೆಳವಣಿಗೆ ಎರಡರಿಂದ ಮೂರು ವರ್ಷ ತೆಗೆದುಕೊಳ್ಳುತ್ತದೆ. ಆರೋಗ್ಯಕ್ಕೂ ಈ ಗಿಡ ತುಂಬಾ ಉಪಯೋಗಕಾರಿ ಮತ್ತು ಮಂತ್ರ ತಂತ್ರಗಳಿಗೂ ಇದು ಉಪಯೋಗಕಾರಿಯಾಗಿದೆ. Aloe vera

ಅಲೋವೆರಾ ಗಿಡಕ್ಕೆ ಮೂರರಿಂದ ನಾಲ್ಕು ವರ್ಷವಾದ ಮೇಲೆ ಹೂವು ಬೆಳೆಯುತ್ತದೆ. ಈ ಹೂವು ಅಪರೂಪಕ್ಕೆ ಹುಡುತ್ತದೆ. ಈ ಹೂವನ್ನು ಮಂತ್ರತಂತ್ರಕ್ಕೆ ಬಳಸಲಾಗುತ್ತದೆ. ಅಲೋವೆರಾವನ್ನು ತುಂಬಾ ಜನರು ಬಳಸುತ್ತಾರೆ ಆದರೇ ಈ ಹೂವಿನ ಬಗ್ಗೆ ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಈ ಹೂವು ಎಲ್ಲಿ ಸಿಕ್ಕರೂ ಇದನ್ನು ತೆಗೆದುಕೊಂಡು ಬಂದು ಯಾರು ಬೇಕಾದರೂ ಉಪಯೋಗ ಮಾಡಿಕೊಳ್ಳಬಹುದು. Aloe vera

ಈ ಹೂವು ಸಿಕ್ಕಿದರೇ ನೀವು ಮಾಡಬಹುದಾದ ಉಪಾಯವೇನೆಂದರೆ ಮನೆಗೆ ತಂದು ಲಕ್ಷ್ಮಿದೇವಿಯ ಪೋಟೋ ಅಥವಾ ಮೂರ್ತಿಯ ಮುಂದೆ ಇಟ್ಟು ದೇವರಿಗೆ ಮುಡಿಸಿ ಈ ಮಂತ್ರವನ್ನು 21 ಬಾರಿ ಹೇಳಬೇಕು. ಅದು ಯಾವುದು ಎಂದರೆ ಓಂ ಶ್ರೀಂ ಶ್ರೀಯೇ ನಮಃ. ಯಾರೂ ಬೇಕಾದರೂ ಈ ಮಂತ್ರವನ್ನು ಹೇಳುವುದರಿಂದ ಲಕ್ಷ್ಮಿ ದೇವಿಯು ಬಹಳ ಬೇಗ ಒಲಿಯುತ್ತಾಳೆ. Aloe vera

ಈ ಹೂವಿನಲ್ಲಿ ಸಣ್ಣ ಸಣ್ಣ ಬೀಜಗಳು ಸಿಗುತ್ತದೆ ಆ ಬೀಜಗಳನ್ನು ಹೂವು ದೇವರಿಗೆ ಮುಡಿಸಿದ ನಂತರದ ದಿನ ಕೆಂಪು ಹಾಳೆಗೆ ಹೂವು, ಬೀಜ ಮತ್ತು ಸ್ವಲ್ಪ ಕುಂಕುಮವನ್ನು ಹಾಕಿ ನೀಟಾಗಿ ಮಡಿಚಿ ನೀವು ಎಲ್ಲಿ ಹಣವಿಡುತ್ತೀರೋ ಆ ಜಾಗದಲ್ಲಿ ನೀವು ಮಡಿಚಿ ಇಟ್ಟಿರುವ ಈ ಪೇಪರ್ ಗಂಟನ್ನು ಇಡಿ. ಲಾಕರ್ ಅಥವಾ ಗಾಡ್ರೇಜ್ ಬೀರೂವಿನಲ್ಲಿ ಇಡುವುದರಿಂದ ನಿಮಗೆ ಹಣಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತದೆ. ಈ ಹೂವಿನಿಂದ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳು ನಿವಾರಣೆಯಾಗುತ್ತದೆ. Aloe vera

ಈ ಹೂವನ್ನು ಮಂತ್ರತಂತ್ರಕ್ಕೆ ಹೇಗೆ ಬಳಸಬಹುದು ಎಂದರೆ ವಿಶೇಷವಾಗಿ ಕಾಮಾಕ್ಯದೇವಿಗೆ ಅರ್ಪಿಸಬೇಕಾಗುತ್ತದೆ. 11 ದಿನಗಳ ಕಾಲ ಅಥವ 21 ದಿನಗಳ ಕಾಲ ಹೇಳಬೇಕು. ಒಂದು ದಿನಕ್ಕೆ 11 ಅಥವಾ 21 ಬಾರಿ ಹೇಳಬೇಕು. ಓಂ ನಮೋ ಕಾಮಾಕ್ಯದೇವಿ ಅಮುಕ್ಮೇ ವರ್ಷಂ ಕುರುಕುರುಸ್ವಾಹ ಈ ಮಂತ್ರವನ್ನು ಪಠಿಸಿದರೇ ನೀವು ನೀವು ಇಷ್ಟಪಟ್ಟವರನ್ನು ನಿಮ್ಮ ವಶಕ್ಕೆ ಪಡೆದುಕೊಳ್ಳಬಹುದು. Aloe vera

ಕಾಮಾಕ್ಯ ದೇವಿಯ ಪೋಟೋ ಇಲ್ಲದಿದ್ದರೂ ದೇವರ ಪೋಟೋವನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಈ ಮಂತ್ರವನ್ನು ಪಠಿಸಿದರೂ ಸಾಕು. 21 ದಿನ ಆದ ನಂತರ ಈ ಹೂವಿನ ಬೀಜವನ್ನು ಯಾವ ರೂಪದಲ್ಲಾದರೂ ಅವರಿಗೆ ತಿನ್ನಿಸಬೇಕಾಗುತ್ತದೆ. ಯಾವ ವ್ಯಕ್ತಿಗೆ ಈ ಉಪಾಯವನ್ನು ಮಾಡಿರುತ್ತೀರೋ ಆ ವ್ಯಕ್ತಿಗಳು ನೀವು ಹೇಳಿದಂತೆ ಕೇಳುತ್ತಾರೆ ಮತ್ತು ನಿಮಗೆ ಎಂದಿಗೂ ಮೋಸ ಮಾಡುವುದಿಲ್ಲ, ನಿಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.

ಈ ತಂತ್ರದಿಂದ ಯಾರನ್ನು ಬೇಕಾದರೂ ನಿಮ್ಮ ವಶಕ್ಕೆ ಪಡೆದುಕೊಳ್ಳಬಹುದು, ನಿಮಗೆ ಈ ತಂತ್ರದಿಂದ ಒಳ್ಳೆಯದೇ ಆಗುತ್ತದೆಂದು ಹೇಳಬಹುದು. ಇನ್ನೊಂದು ಎಚ್ಚರಿಕೆ ನೀವು ಯಾವತ್ತು ಎಂದಿಗೂ ಇದರಿಂದ ಕೆಟ್ಟ ಕೆಲಸವನ್ನು ಮಾಡಬೇಡಿ. ಏಕೆಂದರೆ ಅದು ನಿಮಗೇ ತೊಂದರೆಯಾಗುವ ಸಂಭವವಿರುತ್ತದೆ. ಕುಟುಂಬದಲ್ಲಿ ಸಮಸ್ಯೆ ಇದ್ದರೇ ಮಾತ್ರ ಈ ಉಪಾಯ ಮಾಡಬೇಕೇ ಹೊರತು ಬೇರೆಯವರಿಗೆ ಮಾಡಬಾರದು. ಅನ್ಯಪುರುಷ ಅಥವಾ ಅನ್ಯಸ್ತ್ರೀಯ ಮೇಲೆ ಈ ತಂತ್ರವನ್ನು ಬಳಸಬಾರದು. ದೇವಿಯ ಕೋಪಕ್ಕೆ ಗುರಿಯಾಗಿ ತೊಂದರೆಗೆ ಸಿಲುಕಬಹುದು. ಈ ಉಪಾಯವನ್ನು ಒಳ್ಳೆಯದಕ್ಕೆ ಬಳಸಿದರೇ ತಪ್ಪಾಗುವುದಿಲ್ಲ.

Leave A Reply

Your email address will not be published.