Coconut ಮನೆಯಲ್ಲಿ ಕೊಬ್ಬರಿ ಎಣ್ಣೆ ದೀಪ ಇಟ್ಟರೆ ಮನೆಯಲ್ಲಿ ಸಿರಿ
Coconut Deepam in Kannadatopten ಸಾಮಾನ್ಯವಾಗಿ ಪ್ರತಿನಿತ್ಯ ನಾವು ಮಾಡುವ ಮೊದಲ ಕೆಲಸವೆಂದರೆ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುವುದು. ಕೆಲವರು ಪೂಜೆಗಳನ್ನ ಮಾಡಿ ನಿಯಮ, ನಿಷ್ಠೆಗಳನ್ನ ಆಚರಿಸಿಕೊಳ್ಳುತ್ತಾ ತಮ್ಮ ಭಕ್ತಿಯನ್ನು ಸಾರುತ್ತಾರೆ. ಸಾಮಾನ್ಯವಾಗಿ ಭಗವಂತನನ್ನು ಪೂಜಿಸಬೇಕಾದರೆ ನಾವು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಶುಚಿರ್ಭೂತರಾಗಿರಬೇಕು.
ಭಗವಂತನಿಗೆ ಪ್ರತಿನಿತ್ಯ ದೀಪವನ್ನು ಹಚ್ಚುವುದರ ಮೂಲಕ ನಾವು ಪೂಜೆಯನ್ನು ಮಾಡಿಕೊಳ್ಳುತ್ತೇವೆ. ಸಾಮಾನ್ಯವಾಗಿ ದೀಪವನ್ನು ಹಚ್ಚಲು ಎಣ್ಣೆಯನ್ನು ಬಳಸುತ್ತೇವೆ ಅಥವಾ ತುಪ್ಪವನ್ನು ಉಪಯೋಗಿಸುತ್ತೇವೆ. ಆದರೆ ಹಸುವಿನ ತುಪ್ಪ ದೀಪಕ್ಕೆ ಬಲು ಉತ್ತಮವೆಂದು ಹೇಳುತ್ತಾರೆ ಪಂಡಿತರು. ಇನ್ನು ದೀಪ ಪ್ರಾತಃ ಕಾಲದಲ್ಲಿ ಅಂದರೆ ಸೂರ್ಯೋದಯದ ಸಮಯದಲ್ಲಿ ಅಥವಾ ಸಂಜೆ ಹೊತ್ತು ಗೋದೂಳಿ ಸಮಯದಲ್ಲಿ Coconut
ದೀಪ ಹಚ್ಚುವುದು ಆಚಾರ. ಸಂಜೆ ವೇಳೆಗೆ ದೀಪ ಹಚ್ಚುವುದರಿಂದ ಶ್ರೀ ಮಹಾಲಕ್ಷ್ಮಿ ಆಗಮನವಾಗುತ್ತದೆ. ತುಪ್ಪದ ದೀಪ ಹಚ್ಚುವುದರಿಂದ ಶ್ರೀ ಮಹಾಲಕ್ಷ್ಮಿಗೆ ಪ್ರೀತಿಪಾತ್ರರಾಗುತ್ತಾರೆ. ಸಾಮಾನ್ಯವಾಗಿ ಎಣ್ಣೆ ಮತ್ತು ತುಪ್ಪ ಇವುಗಳನ್ನು ಬಳಸಿ ದೀಪವನ್ನು ಹಚ್ಚುತ್ತೇವೆ. Coconut
ಆದರೆ ಕೊಬ್ಬರಿ ಎಣ್ಣೆಯನ್ನು ಉಪಯೋಗಿಸಿ ಯಾವೆಲ್ಲ ಪ್ರಯೋಜನಗಳಿವೆ ಗೊತ್ತಾ. ಯಾವ ಮನೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿ ದೀಪವನ್ನು ಹಚ್ಚುತ್ತೇವೋ ಆ ಮನೆಯಲ್ಲಿ ಶುಭಕಾರ್ಯಗಳು ಬಹುಬೇಗ ಜರುಗುತ್ತವೆ. ಯಾವ ಮನೆಯಲ್ಲಿ ಮನೆ ದೇವರಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಸಿರಿಸಂಪತ್ತು ಹೆಚ್ಚಿಗೆ ಆಗುತ್ತದೆ. ಯಾರ ಮನೆಯಲ್ಲಿ ಮದುವೆಯಾಗದ ಗಂಡು ಹೆಣ್ಣು ಇರುತ್ತಾರೆ
ಆ ಮನೆಯಲ್ಲಿ ಕಾತ್ಯಾಯಿನಿ ದೇವಿಯನ್ನು ಪೂಜೆ ಮಾಡುವಾಗ ಕೊಬ್ಬರಿ ಎಣ್ಣೆಯಲ್ಲಿ ದೀಪ ಹಚ್ಚುತ್ತಾರೋ ಆ ಮನೆಯಲ್ಲಿ ಮದುವೆ ಮುಂಜಿ ಕಾರ್ಯಗಳು ಜರುಗುತ್ತವೆ ಮತ್ತು ಶುಭಮಂಗಳಕಾರ್ಯಗಳು ಜರುಗುತ್ತವೆ. ಇನ್ನು ಮಂಗಳವಾರ ಸುಬ್ರಮಣ್ಯಸ್ವಾಮಿಗೆ ಕೊಬ್ಬರಿಎಣ್ಣೆ ದೀಪ ಹಚ್ಚಿದರೆ ಸಂತಾನ ಇಲ್ಲದವರಿಗೆ ಸಂತಾನ ಭಾಗ್ಯ ಒದಗಿ ಬರುತ್ತದೆ. ಹಾಗೆಯೇ ಅಶ್ವತಾಮರದ ಕೆಳಗೆ ಇರುವ ನಾಗರಕಲ್ಲಿಗೆ
ತನಿ ಎರೆದು ಶ್ರೀ ಅಶ್ವತಾ ನಾರಾಯಣನಿಗೆ ಕೊಬ್ಬರಿ ಎಣ್ಣೆ ದೀಪ ಹಚ್ಚಿದರೆ ದಾಂಪತ್ಯ ಜೀವನ ಕಲಹ ರಹಿತವಾಗಿರುತ್ತದೆ. ಕುಲದೇವತೆಗೆ ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಅಂದುಕೊಂಡಂತಹ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ. ಮನೆಯಲ್ಲಿ ಶುಭಕಾರ್ಯ ನಡೆಯದಿದ್ದರೆ ಕೊಬ್ಬರಿಎಣ್ಣೆ ದೀಪ ಹಚ್ಚಿದರೆ ಶುಭಕಾರ್ಯ ಜರುಗುತ್ತದೆ. Coconut
ಅಷ್ಟೇ ಅಲ್ಲದೆ ಆರ್ಥಿಕ ಸಮಸ್ಯೆಗಳು ಕಾಡೋದಿಲ್ಲ. ಹಣಕಾಸಿನ ಸಮಸ್ಯೆಗಳು ನಿವಾರಣೆಯಾಗುತ್ತವೆ. ಮುಖ್ಯವಾಗಿ ಸುಬ್ರಮಣ್ಯಸ್ವಾಮಿಯನ್ನು ಪೂಜಿಸುವಾಗ ಮಾತ್ರ ಕೊಬ್ಬರಿ ಎಣ್ಣೆ ದೀಪ ಹಚ್ಚುವುದರಿಂದ ಸಂತಾನ ಭಾಗ್ಯ ಒದಗಿ ಬರುತ್ತದೆ. ಅದನ್ನು ಸರಿಯಾದ ಪೂಜಾವಿಧಾನ ತಿಳಿದು ಮಾಡಬೇಕು. ಹಾಗೆಯೇ ಜಾತಕದಲ್ಲಿ ಕುಜದೋಷವಿರುವವರು ಮಂಗಳವಾರ ಅಥವಾ ಶುಕ್ರವಾರ ದೇವಿ ಪೂಜೆ ಮಾಡಿ
ಒಬ್ಬಟ್ಟು ನೈವೇದ್ಯ ಮಾಡಿ, ಮೊರದ ಬಾಗಿನವನ್ನು ದಾನಮಾಡಿದರೆ ಕುಜದೋಷ ನಿವಾರಣೆಯಾಗುತ್ತದೆ.
ಪ್ರತಿ ಶನಿವಾರದ ದಿವಸ ಶ್ರೀನಿವಾಸನ ದೇವರಿಗೆ ಯಾರು ಕೊಬ್ಬರಿ ಎಣ್ಣೆಯಲ್ಲಿ ದೀಪ ಹಚ್ಚಿ ತುಳಸಿಯನ್ನು ಹಾಕಿ ಪೂಜಿಸುತ್ತಾರೋ ಅವರಿಗೆ ಜೀವನವಿಡೀ ಹಣದ ಸಮಸ್ಯೆ ಬರುವುದಿಲ್ಲ. ಹಾಗೇ ಕೊಬ್ಬರಿ ಎಣ್ಣೆಯನ್ನು ಬಳಸಿ ದೀಪ ಹಚ್ಚುವುದರಿಂದ ಒಳ್ಳೆಯ ಫಲಗಳಿವೆ. Coconut
ತುಪ್ಪದ ದೀಪ ಅಥವಾ ಎಣ್ಣೆ ದೀಪ ಹಚ್ಚುವುದು ನಮ್ಮ ಭಕ್ತಿ ಶ್ರದ್ಧೆಗಳನ್ನು ದೇವರಿಗೆ ತೋರಿಸುವುದಕ್ಕೆ. ಕೆಲವೊಮ್ಮೆ ಕೆಲವೊಂದು ಕೆಲಸಗಳು ಆಗದೇ ತೊಂದರೆ, ಸಮಸ್ಯೆಗಳು ಉಂಟಾದಾಗ ಇಂತಹ ಪರಿಹಾರವನ್ನು ಪಾಲಿಸುವುದರಿಂದ ಬಹು ಬೇಗ ಮನೆಗಳಲ್ಲಿ ಮನಗಳಲ್ಲಿ ಸಂತೋಷ ಉಂಟಾಗುತ್ತದೆ. ಆದರೆ ಚಿಂತೆ ಯಾಕೆ ಕೊಬ್ಬರಿಎಣ್ಣೆ ದೀಪ ಹಚ್ಚಿ ಉತ್ತಮ ಫಲಿತಾಂಶವನ್ನು ಪಡೆಯಿರಿ.Coconut