Ultimate magazine theme for WordPress.

Money loan astrology ಒಂದು ಮಂತ್ರ ಸಾಕು ಸಾಲ ತೀರುತ್ತೆ.

0 24,291

Money loan astrology ಒಂದು ಮಂತ್ರ ಸಾಕು ಸಾಲ ತೀರುತ್ತೆ. ಈ ಮಂತ್ರ ಹೇಳಿದರೆ ಮೂವತ್ತು ದಿನಗಳಲ್ಲಿ ಸಾಲ ತೀರುತ್ತೆ ಅನ್ನೋ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನು ಇಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಕಾಲಭೈರವ ಅಂದ್ರೆ ಶಿವನ ಸ್ವರೂಪ. 64 ಭೈರವ ರೂಪದಲ್ಲಿ ಕಾಲಭೈರವನೇ ಪ್ರಮುಖವಾದವನು. ಕಾಲ ಅಂದ್ರೆ ಸಮಯವನ್ನು ಸೂಚಿಸುವವನು ಎಂದರ್ಥ. ಭೈರವನ ಪೂಜೆ ಮಾಡೋದ್ರಿಂದ

ಏನು ಪ್ರಯೋಜನ ಅನ್ನೋದ್ರ ಬಗ್ಗೆ ನಾವು ಇವಾಗ ತಿಳ್ಕೊಳೋಣ. ಒಂದು ಕೈಯಲ್ಲಿ ತ್ರಿಶೂಲ ಮತ್ತೊಂದು ಕೈಯಲ್ಲಿ ಭಿಕ್ಷಾ ಪಾತ್ರೆ ಹಿಡಿದ ಕಾಲಭೈರವ ಕಪ್ಪುಶ್ವಾನವನ್ನು ತನ್ನ ವಾಹನವನ್ನಾಗಿಸಿ ಕೊಂಡಿರುತ್ತಾನೆ. ಇಂತಹ ಕಾಲಭೈರವನನ್ನು ಪೂಜಿಸುವುದರಿಂದ ಜೀವನದಲ್ಲಿ ನಿಮ್ಮ ಸಮಯ ಸರಿಯಾಗಿಲ್ಲದಿದ್ರೆ ಕಾಲಭೈರವನ ಕೃಪೆಯಿಂದ ನಿಮ್ಮ ಸಮಯ ಉತ್ತಮವಾಗತ್ತೆ, Money loan

ಹಿಡಿದ ಕೆಲಸದಲ್ಲಿ ಯಶಸ್ಸು ಸಿಗುತ್ತೆ, ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ, ವ್ಯಾಪಾರ ವ್ಯವಹಾರದಲ್ಲಿ ಅಭಿವೃದ್ಧಿ ಹೊಂದುತ್ತೀರಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗತ್ತೆ. ಹಾಗೆ ಶನಿವಾರದ ದಿನ ಕಾಲಭೈರವನಿಗೆ ಪೂಜೆ ಸಲ್ಲಿಸುವುದರಿಂದ ಶನಿಯ ಕಾಟ ಏನಾದ್ರೂ ಇದ್ರೆ ಕಡಿಮೆಯಾಗುತ್ತೆ ಅನ್ನೋ ನಂಬಿಕೆ ಇದೆ. ನಿಮಗೆ ಶತ್ರುಭಾಧೆ, ಜೀವಭಯ ಏನಾದರೂ ಇದ್ದರೆ ನೀವು ಕಾಲಭೈರವನನ್ನು ಆರಾಧಿಸುವುದು ಸೂಕ್ತ. ಇದರಿಂದ ನಿಮಗೆ ಧೈರ್ಯ ಬರುತ್ತೆ Money loan

ಮತ್ತು ನಿಮ್ಮ ಮನಸ್ಸಿನಲ್ಲಿರೋ ನಕಾರಾತ್ಮಕ ಶಕ್ತಿಗಳ ಪ್ರಭಾವ ದೂರವಾಗಿ ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗುತ್ತೆ. ಶತ್ರುಭಾಧೆ ಜೀವ ಭಯವೆಲ್ಲಾ ಕಡಿಮೆಯಾಗುತ್ತೆ. ಸಾಲ ಮಾಡಿಕೊಂಡು ತೀರ್ಸೋದಿಕ್ಕಾಗದೆ ಒದ್ದಾಡ್ತಾ ಇದ್ರೆ, ಹಣಕಾಸಿನ ಸಮಸ್ಯೆ ಹೆಚ್ಚಾಗಿದ್ದರೆ, ಮನೆಯಲ್ಲಿ ಯಾವಾಗಲೂ ಕಲಹವೇ ಹೆಚ್ಚಾಗಿದ್ದರೆ, ಕಾಲಭೈರವನ ಪೂಜೆ ಮಾಡಿದರೆ

ಎಲ್ಲ ಸಮಸ್ಯೆಗಳು ದೂರವಾಗುತ್ತವೆ. ಕಾಲಭೈರವನಿಗೆ ಸಂಬಂಧಿಸಿದ ಸ್ತೋತ್ರವನ್ನು ಪ್ರತಿದಿನ ಪಠಿಸೋದು ಅಥವಾ ಆಲಿಸುವುದು ಕೂಡ ಉತ್ತಮ. ಇದನ್ನ ಕೇಳೋದ್ರಿಂದ ಸಕಲ ಪಾಪಗಳು ನಾಶವಾಗುತ್ತದೆ ಮತ್ತು ಕಾಲಭೈರವನ ಕೃಪೆ ಸದಾ ಕಾಲ ನಿಮ್ಮ ಮೇಲಿರತ್ತೆ. ಈಗ ನಾವು ಹೇಳುವ ಮಂತ್ರವನ್ನ ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಿ. ಈ ಮಂತ್ರವನ್ನು ಹೇಳಿದ್ರೆ ಯಾವುದೇ ರೀತಿಯ ಸಮಸ್ಯೆಯನ್ನಾದರೂ ನೀವು ಬಗೆಹರಿಸಿಕೊಳ್ಳಬಹುದು. Money loan

ಈ ಮಂತ್ರವನ್ನು ಒಂದು ಬಾರಿ ನೀವು ಪಠಿಸಿದರೆ ಸಾಕು. ನಿಮ್ಮ ಕಷ್ಟವೆಲ್ಲ ದೂರವಾಗುತ್ತೆ. ನಿಮ್ಮ ಜೀವನ ಬದಲಾಗುವುದು ನೂರಕ್ಕೆ ನೂರು ಸತ್ಯ. ನೀವು ಎಲ್ಲಿಯೂ ಈ ಮಂತ್ರವನ್ನು ಕೇಳಿರುವುದಕ್ಕೆ ಸಾಧ್ಯನೇ ಇಲ್ಲ. ಯಾಕೆಂದರೆ ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ. ನೀವು ಮೊದಲು ಈ ಮಂತ್ರವನ್ನು ಒಂದು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳಬೇಕು. Money loan

ಹಾಗೇನೇ ಅದಕ್ಕೆ ಅರಿಶಿನ ಕುಂಕುಮ ಹಾಕಿ ಪೂಜೆಯನ್ನು ಮಾಡಬೇಕು. ನಂತರ ಒಂದು ಹೂವನ್ನಿಟ್ಟು ಭಕ್ತಿಯಿಂದ ಪೂಜೆಯನ್ನು ಮಾಡಿದ ನಂತರ ಈ ಮಂತ್ರವನ್ನು ಹೇಳುವುದಕ್ಕೆ ಶುರು ಮಾಡಬೇಕು. ಆದರೆ ಈ ಮಂತ್ರ ಜಪ ಮಾಡುವುದಕ್ಕೆ ಕೆಲವು ನಿಯಮಗಳಿವೆ. ಮೊದಲನೆಯದಾಗಿ ಸ್ನಾನ ಮಾಡಿ ಮಡಿಯಾಗಿರಬೇಕು. ಪ್ರತಿ ದಿನ ಒಂದೇ ಜಾಗದಲ್ಲಿ ಕೂತು ಈ ಮಂತ್ರವನ್ನು ಜಪ ಮಾಡಬೇಕು. ಬೇರೆ ಬೇರೆ ಜಾಗದಲ್ಲಿ ಈ ಮಂತ್ರವನ್ನು ಹೇಳುವುದು ತಪ್ಪು. ಮಂತ್ರ ಹೀಗಿದೆ,

” ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ ಶೀಘ್ರ ಧನ ಧಾನ್ಯಂ ಸ್ವರ್ಣಂ ದೇಹಿ ದೇಹಿ ವ್ಯಸ್ಯ ವ್ಯಸ್ಯ ಕುರು ಕುರು ಸ್ವಾಹ ” ಇದು ಅತ್ಯಂತ ವಿಶೇಷವಾದ ಶಕ್ತಿಶಾಲಿ ಮಂತ್ರ. ಇದಕ್ಕೆ ವಿಶೇಷವಾದ ಶಕ್ತಿ ಇದೆ. ಈ ಮಂತ್ರವನ್ನು ಯಾರು ಬೇಕಾದರೂ ಪಠಿಸಬಹುದು. ಈ ಮಂತ್ರ ಪಠಣೆಗೆ ಲಿಂಗ ಭೇದವಿಲ್ಲ. ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳು ಯಾರೇ ಆಗಲಿ ಈ ಮಂತ್ರವನ್ನು ಪಠಿಸಬಹುದು. ನಿಮ್ಮ ಯಾವ ಕೋರಿಕೆ ಈಡೇರಬೇಕು ಅಂದುಕೊಂಡಿದ್ದೀರೋ ಅದನ್ನ ನೆನೆಸಿಕೊಂಡು Money loan

ಈ ಮಂತ್ರವನ್ನು ಪಠಿಸಿದರೆ ವಿಶೇಷವಾಗಿ ನಿಮಗೆ 24 ಗಂಟೆಗಳಲ್ಲಿ ಸಮಸ್ಯೆಯ ಪರಿಹಾರಕ್ಕೆ ಯಾವುದಾದರೂ ದಾರಿ ಸಿಕ್ಕೇ ಸಿಗುತ್ತೆ. ಆದರೆ ಈ ಮಂತ್ರವನ್ನು ಪಠಿಸಲು ಸೂಕ್ತ ವಾರಗಳನ್ನು ನೆನಪಿಟ್ಟುಕೊಳ್ಳಿ. ಸೋಮವಾರ, ಶುಕ್ರವಾರ ಅಥವಾ ಗುರುವಾರ ಇದನ್ನ ಪಠಿಸೋದು ಸೂಕ್ತ. ಇನ್ನು ಬೆಳಗ್ಗೆಯಾದರೂ ಸರಿ ಸಂಜೆಯಾದರೂ ಸರಿ ಪೂಜೆ ಮಾಡಿದ ನಂತರ ವಿಶೇಷವಾದ ಕಾಲಭೈರವನ ಮಂತ್ರವನ್ನು ಪಠಿಸಬೇಕು, ಧ್ಯಾನವನ್ನು ಮಾಡಬೇಕು. ಈ ಶಕ್ತಿಶಾಲಿ ಮಂತ್ರವನ್ನ ಶ್ರದ್ಧಾಭಕ್ತಿಯಿಂದ ಪಠಿಸಿದರೆ

ಕಾಲಭೈರವನ ಕೃಪೆಯಿಂದ ನಿಮಗೆ ಒಳ್ಳೆಯ ಫಲ ಸಿಕ್ಕೇ ಸಿಗುತ್ತೆ. ಈ ಕಾಲಭೈರವನ ಮಂತ್ರವನ್ನು ಮರದ ಪೀಠದ ಮೇಲೆ ಪೂರ್ವಾಭಿಮುಖವಾಗಿ ಕೂತ್ಕೊಂಡು ದಿನ 108 ಬಾರಿ ಜಪಿಸಿ ನಿಮ್ಮ ಕೆಲಸಗಳಿಗೆ ಹೊರಡಬೇಕು. ಇದು ಖಂಡಿತ ನಿಮ್ಮ ಜೀವನದಲ್ಲಿ ಪ್ರಗತಿಯ ಭರವಸೆ ಹಾಗೂ ಸಂಕಷ್ಟಗಳಿಂದ ಪಾರಾಗೋಕೆ ಸಹಕಾರ ನೀಡುವುದು ನಿಶ್ಚಿತ. ಈ ಇನ್ನೊಂದು ಮಂತ್ರ ಹೇಳ್ತೀವಿ ನೋಡಿ

ಈ ಮಂತ್ರಕ್ಕೆ ನಿಮ್ಮ ಜೀವನದಲ್ಲಿರೋ ಸಾಲ ಬಾಧೆ ನಿವಾರಿಸಿ ಆರ್ಥಿಕವಾಗಿ ನಿಮ್ಮನ್ನ ಸದೃಢನನ್ನಾಗಿ ಮಾಡುವ ಸಾಮರ್ಥ್ಯ ಇರೋದ್ರಿಂದ ಇದನ್ನ ಸ್ವರ್ಣಾಕರ್ಷಣ ಭೈರವ ಮಂತ್ರ ಅಂತ ಕರೆಯುತ್ತಾರೆ. ಮಂತ್ರ ಹೀಗಿದೆ, ” ಓಂ ಶ್ರೀಂ ಹ್ರೀಂ ಕ್ಲೀಂ ಓಂ ನಮೋ ಭಗವತೇ ಸ್ವರ್ಣಾಕರ್ಷಣ ಭೈರವಾಯ ಹಿರಣ್ಯಂ ದಾಪಯ ದಾಪಯ ಶ್ರೀಂ ಹ್ರೀಂ ಕ್ಲೀಂ ಸ್ವಾಹಾ ” ನಮ್ಮ ಎಲ್ಲಾ ಕಷ್ಟಗಳು ತೊಲಗಬೇಕು. Money loan

ಜೀವನದಲ್ಲಿ ನಾಲ್ಕು ಜನರ ಹಾಗೆ ಸ್ವಲ್ಪವಾದರೂ ಸುಖ, ಶಾಂತಿ, ನೆಮ್ಮದಿಯಿಂದ ಬದುಕಬೇಕು ಅನ್ನೋ ಆಸೆ ಇರುವವರು ನಾವು ಹೇಳೋ ಈ ನಿಯಮಗಳನ್ನು ಪಾಲನೆ ಮಾಡಬೇಕು. ಬೆಳಗ್ಗೆ ಎದ್ದ ತಕ್ಷಣ ಈ ಮಂತ್ರವನ್ನು ಹೇಳ್ಕೋಬೇಕು. ಕೈಕಾಲು ಮುಖವನ್ನು ತೊಳೆದು ಸ್ನಾನವನ್ನ ಮಾಡ್ಕೊಂಡು ಮನೇಲಿ ಯಾವ ಜಾಗ ಚೆನ್ನಾಗಿ ನಿಶ್ಯಬ್ಧವಾಗಿರುತ್ತೋ ಅಲ್ಲಿ ಹೋಗಿ ಕೂತ್ಕೋಬೇಕು. ನಂತರ ಶ್ರೀಕಾಲ ಭೈರವೇಶ್ವರ ಸ್ವಾಮಿಯನ್ನ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು.

ಆಮೇಲೆ ಈ ಮಂತ್ರವನ್ನು 21 ಬಾರಿ ಹೇಳ್ಕೋಬೇಕು. ಕಾಲಭೈರವನ ಈ ಶಕ್ತಿಶಾಲಿ ಸ್ವರ್ಣಾಕರ್ಷಣ ಮಂತ್ರದಿಂದ ನಿಮಗಿರೋ ಆರೋಗ್ಯ ಸಮಸ್ಯೆ, ಹಣದ ಸಮಸ್ಯೆ, ಆರ್ಥಿಕ ಸಮಸ್ಯೆ ಮತ್ತು ಇನ್ಯಾವುದೇ ಸಮಸ್ಯೆಗಳಿದ್ದರೂ ಮುಕ್ತಿಯನ್ನು ಪಡೆದುಕೊಳ್ಳಬಹುದು. ಒಂದು ವೇಳೆ ನಿಮ್ಮ ಮನೆಯಲ್ಲಿ ದುಷ್ಟ ಶಕ್ತಿಗಳು ವಾಸವಾಗಿವೆ ಅನ್ಸಿದ್ರೆ ಈ ಮಂತ್ರವನ್ನು ಜಪಿಸಿದ್ರೆ ಸಾಕು, ಎಲ್ಲಾ ದುಷ್ಟ ಶಕ್ತಿಗಳು ಮನೆಯಿಂದ ಹೊರ ಹೋಗುತ್ತವೆ. ಅದೇ ರೀತಿ ಭೈರವ ದೀಪಂ ಅನ್ನು ಹಚ್ಚುವುದರಿಂದ ಮನೆಯಲ್ಲಿರೋ ಸಕಲ ಕಷ್ಟಗಳು ನಿವಾರಣೆಯಾಗುತ್ತವೆ.

ಇದನ್ನ ಹೇಗ್ ಮಾಡೋದು ನೋಡೋಣ. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಳ್ಳಬೇಕು. ಈ ತಟ್ಟೆಯ ಸುತ್ತ ಗಂಧವನ್ನ ಹಚ್ಚಬೇಕು, ಕುಂಕುಮವನ್ನು ಹಚ್ಚಬೇಕು. ನಂತರ ತೆಂಗಿನ ಕಾಯಿಯನ್ನು ಎರಡು ಹೋಳು ಮಾಡಿಕೊಂಡು ಅಕ್ಕಿ ತಟ್ಟೆಯಲ್ಲಿ ಇಡಬೇಕು. ಇದಕ್ಕೂ ಕೂಡ ಗಂಧವನ್ನ ಹಚ್ಚಿ ದೀಪದ ಎಣ್ಣೆಯನ್ನು ಹಾಕಬೇಕು. ನಂತರ ಬತ್ತಿಯನ್ನ ಅದರೊಳಗೆ ಹಾಕಿ ದೀಪವನ್ನು ಹಚ್ಚಬೇಕು. Money loan

ಈ ರೀತಿಯಾಗಿ ಭೈರವ ದೀಪಂ ಅನ್ನು ನೀವು ಅಕ್ಕಿ ತಟ್ಟೆಯಲ್ಲಿ ತೆಂಗಿನಕಾಯಿ ಮೇಲೆ ದೀಪವನ್ನು ಹಚ್ಚಿ ನಿಮ್ಮ ಮನೆಯಲ್ಲಿ ಇಟ್ಟರೆ ಮನೆಯಲ್ಲಿರುವ ಸಮಸ್ಯೆಗಳೆಲ್ಲವೂ ನಿವಾರಣೆಯಾಗುತ್ತದೆ. ನೀವು ಕಣ್ಣು ಮುಚ್ಚಿ ತೆಗೆಯೋ ಅಷ್ಟರಲ್ಲಿ ಚಮತ್ಕಾರ ನಡೆಯುತ್ತೆ. ನಿಮ್ಮ ಮನೆಯಲ್ಲಿರೋ ಪ್ರತಿಯೊಂದು ಸಮಸ್ಯೆಗಳು, ಜಗಳ, ಕಿರಿಕಿರಿ, ಆರೋಗ್ಯ ಸಮಸ್ಯೆಗಳು, ಶತ್ರುಗಳ ಸಮಸ್ಯೆ ಇದ್ರೆ ಈ ದೀಪಾರಾಧನೆಯಿಂದ ಖಂಡಿತ ಪರಿಹಾರ ಕಂಡುಕೊಳ್ಳಬಹುದು.

Leave A Reply

Your email address will not be published.