ಕುಂಭ ರಾಶಿಯ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯ
Kumbha Rashi Bhavishya ಕುಂಭ ರಾಶಿಯ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯವನ್ನು ತಿಳಿದುಕೊಳ್ಳೋಣ. ಈ ತಿಂಗಳಿನಲ್ಲಿ ಏನೆಲ್ಲಾ ಶುಭವಾಗಲಿದೆ? ಏನು ಲಾಭವಾಗುತ್ತಿದೆ? ಧನಪ್ರಾಪ್ತಿಯೋಗವಿದೆಯಾ? ಯಾವ ರೀತಿಯಲ್ಲಿ ಪ್ರಯತ್ನಪಟ್ಟಾಗ ಸಕ್ಸಸ್ ಎನ್ನುವುದು ಸಿಗುತ್ತದೆ? ನಿಮ್ಮ ಸಮಸ್ಯೆಗೆ ಪರಿಹಾರದ ಬಗ್ಗೆ ಸಂಪೂರ್ಣವಾದ ವಿಚಾರವನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಶನಿ ಪರಮಾತ್ಮರು ರಾಶ್ಯಾಧಿಪತಿಯಾದರೇ, ಅದೃಷ್ಟದ ಬಣ್ಣ ನೀಲಿ ಮತ್ತು ಕಪ್ಪು ಆಗಿದೆ. ಶನಿವಾರ ಮತ್ತು ಶುಕ್ರವಾರ ಅದೃಷ್ಟದ ದಿನವಾಗಿರುತ್ತದೆ. ಅದೃಷ್ಟದ ದೇವತೆ ಶ್ರೀಶನಿದೇವರು ಆಗಿರುತ್ತಾರೆ. 3,6,4 ಮತ್ತು 8 ಅದೃಷ್ಟದ ಸಂಖ್ಯೆಯಾಗಿದೆ. ಮಿತ್ರರಾಶಿಗಳು ವೃಷಭ, ಮಕರ ಮತ್ತು ಮೀನಾರಾಶಿಗಳು, ಶತೃರಾಶಿಗಳು ಮೇಷ, ಕಟಕ, ಸಿಂಹರಾಶಿಗಳು ಶತೃರಾಶಿಗಳಾಗಿವೆ.
8,17 ಮತ್ತು 26 ಅದೃಷ್ಟದ ದಿನಾಂಕಗಳಾಗಿವೆ. ಕುಂಭರಾಶಿಯವರು ಯಾವಾಗಲೂ ಸತ್ಯವನ್ನು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳು ಹೇಳಲು ಮನಸ್ಸು ಒಪ್ಪುವುದಿಲ್ಲ. ಕುಂಭರಾಶಿಯವರು ನಂಬಿಕಸ್ಥರು ಯಾವಾಗಲೂ ಕೈ ಬಿಡುವುದಿಲ್ಲ. ಮಾತು ಕೊಟ್ಟರೇ ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಸೂಕ್ಷ್ಮವಾದ ಮನಸ್ಸಿನವರು ಈ ಕುಂಭರಾಶಿಯವರಾಗಿರುತ್ತಾರೆ.Kumbha Rashi Bhavishya
ನೀವು ಮಾಡುವ ಚಿಕ್ಕ ಕೆಲಸವಾದರೂ ಸರಿ, ದೊಡ್ಡ ಕೆಲಸವಾದರೂ ಸರಿ ಏನೇ ಕೆಲಸ ಮಾಡುತ್ತಿದ್ದರೂ ನಿಮ್ಮ ಕೆಲಸ ಕಾರ್ಯಗಳಲ್ಲಿ ನೀವು ಮುಂಚೂಣಿಯಲ್ಲಿರುತ್ತೀರಿ. ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಒಳ್ಳೆ ರೀತಿಯಲ್ಲಿ ಗುರುತಿಸಿಕೊಳ್ಳುತ್ತೀರಿ. ಹಣಕಾಸಿನ ವಿಷಯದಲ್ಲಿ ಎಂತಹ ಕೊರತೆಗಳು ಇರುವುದಿಲ್ಲ. ಕುಂಭರಾಶಿಯವರು ಸಕ್ರಿಯವಾಗಿ ಇರುವುದು, ಸದಾ ಚಟುವಟಿಕೆಯಿಂದ ಇರುವಂತಹ ವ್ಯಕ್ತಿತ್ವದವರಾಗಿದ್ದು, ಸಾರ್ವಜನಿಕ ಮತ್ತು ಸಮಾಜ ಸೇವೆಯಲ್ಲಿ ಗುರುತಿಸಿಕೊಳ್ಳುತ್ತೀರಿ.
ರಾಜಕೀಯ ಮತ್ತು ಸಂಘಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿರುತ್ತೀರಿ. ನಿಮ್ಮ ಬಗ್ಗೆ ಮಾತುಕತೆಗಳು ಇರುತ್ತವೆ. ನೀವು ಮಾತನಾಡಬೇಕಾದರೇ ಮಾತಿನ ಮೇಲಿನ ಸ್ವಲ್ಪ ಹಿಡಿತವಿರಲಿ. ನಿಮ್ಮಗೆ ಆಗದೇ ಇರುವ ಜನ ಸರಿಯಾದ ಸಮಯವನ್ನು ಕಾದು ನೋಡಿ ಪಿತೂರಿಯನ್ನು ಮಾಡುತ್ತಾರೆ ಆಗಾಗಿ ಎಚ್ಚರಿಕೆಯಿಂದ ಮಾತನಾಡಿರಿ. ನಿಮ್ಮ ವೃತ್ತಿ ಜೀವನದ ಬಗ್ಗೆ ಕಾಳಜಿಯನ್ನು ಇಟ್ಟುಕೊಂಡು ಕೆಲಸವನ್ನು ಮಾಡಿಕೊಂಡರೇ ಒಳ್ಳೆಯದು. ಕುಟುಂಬದ ಸದಸ್ಯರು ಮತ್ತು ಸಂಬಂಧಿಕರ ನಡುವೆ ಕೆಲವು ಗೊಂದಲಗಳು ಇರುತ್ತವೆ. Kumbha Rashi Bhavishya
ಅನ್ಯೋನತೆಗಳಿಗೆ ಸ್ವಲ್ಪ ಕೊರತೆ ಉಂಟಾಗುವ ಸಂಭವವಿರುತ್ತದೆ. ನೀವು ಆಲೋಚನೆ ಮಾಡಿಕೊಂಡು ಸಮಸ್ಯೆ ಬಂದಾಗ ತಾಳ್ಮೆಯಿಂದ ಆ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಬೇಕು. ಜೀವನ ಎಂದರೆ ಕಷ್ಟಗಳು, ಸಮಸ್ಯೆಗಳು ಬರುತ್ತವೆ ಬುದ್ಧಿವಂತಿಕೆಯಿಂದ ಬಗೆಹರಿಸಿಕೊಳ್ಳಬೇಕಾಗುತ್ತದೆ. ಸ್ತ್ರೀಯರಿಗೆ ಉದ್ಯೋಗದಲ್ಲಿ ಬಹಳಷ್ಟು ಸವಾಲುಗಳು ಇರುತ್ತವೆ.
ಮೈ ಎಲ್ಲಾ ಕಣ್ಣು ಇಟ್ಟುಕೊಂಡು ಕೆಲಸ ಮಾಡುವಂತಹ ಅನಿವಾರ್ಯತೆ ಇರುತ್ತದೆ. ಎಚ್ಚರಿಕೆಯ ವಿಷಯವೇನೆಂದರೆ ಈಗ ಮಾಡುವಂತಹ ಉದ್ಯೋಗವನ್ನು ಬದಲಾವಣೆ ಮಾಡದೇ ಇರುವುದು ಒಳ್ಳೆಯದು. ಇರುವಂತಹ ಉದ್ಯೋಗವನ್ನು ಅಭಿವೃದ್ಧಿ ಮಾಡುವುದು ಒಳ್ಳೆಯದು. ಇರುವಂತಹ ದುಡ್ಡನ್ನು ಜೋಪಾನವಾಗಿ ಖರ್ಚು ಮಾಡಿರಿ ಮತ್ತು ಈ ಸಮಯವು ಹೂಡಿಕೆಗೆ ಯೋಗ್ಯವಾಗಿಲ್ಲ. ಸ್ವಲ್ಪ ಹಣಕಾಸಿನ ಮೇಲೆ ಹಿಡಿತವನ್ನು ಇಟ್ಟುಕೊಳ್ಳಿ. Kumbha Rashi Bhavishya
ವಿಶೇಷವಾಗಿ ಶಾಲಾ, ಕಾಲೇಜುಗಳನ್ನು ನಡೆಸುವಂತರಾಗಿದ್ದರೇ ಧೈರ್ಯವಾಗಿ ಮುನ್ನುಗ್ಗಿದರೇ ಅನುಕೂಲಕರವಾಗಿದೆ. ವಕೀಲರಿಗೆ ಬಹಳಷ್ಟು ಕೀರ್ತಿ, ಗೌರವಗಳು ಸಿಗಲಿವೆ. ನೀವು ಕೆಲಸ ಹುಡುಕುತ್ತಿದ್ದರೇ ಕೆಲಸ ಸಿಗುತ್ತದೆ ಮತ್ತು ವಿಶೇಷವಾಗಿ ನೀವು ಕಲಾವಿದರಾಗಿದ್ದರೇ ವಿಶೇಷವಾಗಿ ಆ ಕಲೆಗೆ ಗೌರವ ಸಿಗುತ್ತದೆ. ಸೋಶಿಯಲ್ ಮೀಡಿಯಾ, ಚಿತ್ರೋದ್ಯಮ, ಮೀಡಿಯಾ ಯಾವುದೇ ಕ್ಷೇತ್ರದಲ್ಲಿ ಕಲೆಗಾರರಿದ್ದರೇ ಆ ಕಲೆಗೆ ತಕ್ಕ ಹಾಗೇ ಗೌರವ ಮತ್ತು ನೆಲೆ ಸಿಗುತ್ತದೆ.
ಪೊಲೀಸ್ ಇಲಾಕೆ ಮತ್ತು ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತಿರುವವರಿಗೆ ವಿವಾದಗಳು ಸಂಭವವಾಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಎಚ್ಚರಿಕೆಯಿಂದಿರಿ. ಸಣ್ಣ ಉದ್ಯಮದಿಂದ ಬೃಹತ್ ಉದ್ಯಮ ಮಾಡುತ್ತಿರುವವರಿಗೆ ಬಹಳಷ್ಟು ಲಾಭಗಳಿವೆ. ಹೆಚ್ಚಾಗಿ ಪ್ರಯತ್ನ ಪಟ್ಟರೇ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಲಾಭಗಳನ್ನು ಪಡೆಯುತ್ತೀರಿ. ಕುಂಭ ರಾಶಿಯವರ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಶ್ರೀರಾಮನಾಮ ಜಪವನ್ನು ಮಾಡಿಕೊಳ್ಳಿ. ಮಹಾಲಕ್ಷ್ಮಿ ದೇವಿಯ ಪೂಜೆ ಮತ್ತು ಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ದರ್ಶನವನ್ನು ಮಾಡಿರಿ, ಮನೆ ದೇವರ ಪ್ರಾರ್ಥನೆಯನ್ನು ಮಾಡಿಕೊಳ್ಳಿರಿ ಈ ತಿಂಗಳಿನಲ್ಲಿ ಶುಭ ಫಲಗಳು ಸಿಗುತ್ತದೆ.