Ultimate magazine theme for WordPress.

Tula Rashi  ತುಲಾರಾಶಿಯ ಫೆಬ್ರವರಿ ತಿಂಗಳಿನ ಮಾಸಭವಿಷ್ಯ

0 638

Tula Rashi Bhavishya February ತುಲಾರಾಶಿಯ ಫೆಬ್ರವರಿ ತಿಂಗಳಿನ ಮಾಸಭವಿಷ್ಯವನ್ನು ತಿಳಿದುಕೊಳ್ಳೋಣ. ಈ ತಿಂಗಳಿನಲ್ಲಿ ಏನೆಲ್ಲಾ ಲಾಭಗಳು ಇವೆ? ಏನೆಲ್ಲಾ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು? ಸಮಸ್ಯೆಗಳ ಪರಿಹಾರ ಮಾಡಿಕೊಳ್ಳುವ ಬಗೆ ಇತ್ಯಾದಿಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ತುಲಾರಾಶಿಯ ರಾಶಿಯ ಅಧಿಪತಿ ಶುಕ್ರಗ್ರಹವಾಗಿದೆ. ತಕ್ಕಡಿಯನ್ನು ಹಿಡಿದುಕೊಂಡಿರುವ ಲಾಂಛನವನ್ನು ಹೊಂದಿರುವುದು ತುಲಾರಾಶಿ. ಬಿಳಿ ಮತ್ತು ನೀಲಿ ಅದೃಷ್ಟದ ಬಣ್ಣವಾಗಿರುತ್ತದೆ. ಅದೃಷ್ಟದ ದಿನ ಶುಕ್ರವಾರ ಮತ್ತು ಸೋಮವಾರವಾಗಿರುತ್ತದೆ.

ಲಕ್ಷ್ಮಿದೇವಿಯು ಅದೃಷ್ಟದ ದೇವರಾಗಿರುತ್ತದೆ. 4,6,7, ಮತ್ತು 9 ಅದೃಷ್ಟದ ಸಂಖ್ಯೆಯಾಗಿರುತ್ತದೆ. ಮಿಥುನ, ಕಟಕ, ಕುಂಭ ಮಿತ್ರ ರಾಶಿಯಾದರೇ ಶತೃ ರಾಶಿ ಸಿಂಹರಾಶಿಯಾಗಿರುತ್ತದೆ. ಅದೃಷ್ಟದ ದಿನಾಂಕಗಳು 6,15 ಮತ್ತು 24 ಆಗಿದೆ. ತುಲಾರಾಶಿಯವರು ಬುದ್ಧಿವಂತರು ಮತ್ತು ಅಧ್ಯಯನಶೀಲರಾಗಿರುತ್ತಾರೆ. ಯಾವುದೇ ವಿಚಾರವನ್ನು ಆಳವಾಗಿ ಅಧ್ಯಯನವನ್ನು ಮಾಡುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ. ಫೆಬ್ರವರಿ ತಿಂಗಳಿನಲ್ಲಿ ಹೆಚ್ಚಾಗಿ ಮಾತನಾಡುವುದು ಬೇಡ, Tula Rashi

ನಿಮ್ಮ ಮಾತು ತಪ್ಪಾಗಿ ಭಾವಿಸುವಂತಾಗುತ್ತದೆ ಮತ್ತು ಶತೃಗಳ ಬಾಧೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆಗಾಗಿ ಮಾತಿನ ಮೇಲೆ ಹಿಡಿತವಿಟ್ಟುಕೊಳ್ಳಬೇಕಾಗುತ್ತದೆ. ಯಾವಾಗ, ಎಷ್ಟು ಮಾತನಾಡಬೇಕೆಂಬ ಚಾಕಚಕ್ಯತೆಯ ಕಲೆಯನ್ನು ಕಲಿತುಕೊಳ್ಳುವುದು ಒಳ್ಳೆಯದು. ಇತ್ತೀಚಿನ ದಿನಗಳಲ್ಲಿ ನನ್ನನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವಲ್ಲ ಎಂಬ ಮನಸ್ಥಿತಿ ಮೂಡುತ್ತಿದೆ. ತಾಳ್ಮೆ ಮತ್ತು ಸಹನೆಯಿಂದ ಮಾತಿನ ಮೇಲೆ ಹಿಡಿತವನ್ನು ಇಟ್ಟುಕೊಂಡು ಕೆಲಸವನ್ನ Tula Rashi

ಮಾಡುವ ಪ್ರಯತ್ನವನ್ನು ಮಾಡಿದರೇ ಖಂಡಿತವಾಗಿ ನೀವು ಅಂದುಕೊಂಡ ರೀತಿಯಲ್ಲಿ ನಿಮಗೆ ಸಕ್ಸಸ್ ಎನ್ನುವುದು ಸಿಗುತ್ತದೆ. ಮನೆ, ಸೈಟ್, ಬೆಲೆ ಮಾಡುವ ವಸ್ತುಗಳನ್ನು ಖರೀದಿ ಮಾಡಬಹುದು. ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡಬಹುದು. ಇದರಿಂದ ದುಡ್ಡು ಖರ್ಚಾಗುತ್ತದೆ. ಅವಶ್ಯಕತೆಗೆ ತಕ್ಕಂತೆ ಖರ್ಚು ಮಾಡಿಕೊಂಡು ನಿಮ್ಮ ಕೆಲಸದ ಕಡೆ ಹೆಚ್ಚಿನ ಗಮನವನ್ನು ಅರಿಸುವುದು ಒಳ್ಳೆಯದು. ತುಲಾರಾಶಿಯ ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಗಳಿವೆ.

ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ರೂಢಿಸಿಕೊಳ್ಳುವಂತದ್ದು, ಅಧ್ಯಯನದಲ್ಲಿ ತೊಡಗುವುದರಿಂದ ಹೆಚ್ಚಿನ ಅಂಕಗಳ ನಿರೀಕ್ಷೆ ಮಾಡಬಹುದು. ಮದುವೆಯ ಬಗ್ಗೆ ಚಿಂತೆ ಮಾಡುತ್ತಿದ್ದರೇ ಮದುವೆಗೆ ಸಂಬಂಧಪಟ್ಟ ಶುಭ ಕಾರ್ಯ ಮನೆಯಲ್ಲಿ ನಡೆಯುತ್ತದೆ. ಉದ್ಯೋಗದಲ್ಲಿ ಅನುಕೂಲತೆಗಳು ಇರುತ್ತವೆ. ಈಗ ಮಾಡುವ ಉದ್ಯೋಗವನ್ನು ಬದಲಾಯಿಸುವ ಕೆಲಸವನ್ನು ಮಾಡಬೇಡಿ. ಇರುವಂತಹ ಉದ್ಯೋಗವನ್ನು ಅಭಿವೃದ್ಧಿ ಮಾಡುವ ಪ್ರಯತ್ನವನ್ನು ಮಾಡಿ. ನೀವು ನಿಮ್ಮ ಜೀವನದ ಸ್ಪರ್ಧೆಯಲ್ಲಿ ಗೆಲ್ಲುತ್ತೀರಿ Tula Rashi

ನಿಮಗೆ ಯಾರು ಸ್ಪರ್ಧೆ ಮಾಡಲು ಇರುವುದಿಲ್ಲ. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಅರ್ಥಮಾಡಿಕೊಂಡರೇ ಸಾಕು ಒಳ್ಳೆಯ ಫಲ ಸಿಗುತ್ತದೆ. ವಿದ್ಯಾರ್ಥಿಗಳು ವಿದೇಶಕ್ಕೆ ಹೋಗುವ ಸಂಭವವಿದೆ ಅದು ಒಳ್ಳೆಯ ಫಲಿತಾಂಶವನ್ನು ತಂದುಕೊಡುತ್ತದೆ. ಡಾಕ್ಟರ್ ಗಳು ಸರ್ಕಾರಿ ಮತ್ತು ಅರೆಸರ್ಕಾರಿ ಕೆಲಸಗಾರರಿಗೆ, ಬ್ಯುಸಿನೆಸ್ ಮಾಡುವವರು,ಕೃಷಿಕರು ಕೆಲಸದ ಕಡೆ ಹೆಚ್ಚು ಗಮನ ಕೊಟ್ಟರೇ ಒಳ್ಳೆಯ ಫಲಗಳು ಸಿಗುತ್ತದೆ. ತುಲಾರಾಶಿಯವರು ರಕ್ಷಣಾ ಇಲಾಖೆ ಮತ್ತು ಸರ್ಕಾರಿ ಕೆಲಸ ಮಾಡುತ್ತಿದ್ದರೇ ಬಡ್ತಿ ಯೋಗವಿದೆ.

ಆರೋಗ್ಯಕ್ಕೆ ಸಂಬಂಧಪಟ್ಟಂತೆ ಎಚ್ಚರಿಕೆಯನ್ನು ಪಾಲಿಸಬೇಕಾಗುತ್ತದೆ. ಎಲುಬು ಮತ್ತು ಹಿಮ್ಮಡಿ ನೋವಿನ ಸಮಸ್ಯೆಗಳು ಬಾಧಿಸುವುದರಿಂದ ಸ್ವಲ್ಪ ಆರೋಗ್ಯದ ಕಡೆ ಕಾಳಜಿ ವಹಿಸಿರಿ. ಪತಿ ಪತ್ನಿಯರಲ್ಲಿ ತುಂಬಾ ಹೊಂದಾಣಿಕೆ ಇರುತ್ತದೆ. ಗೊಂದಲಗಳನ್ನು ಬಗೆಹರಿಸಿಕೊಂಡು ಹೋಗುವುದರಿಂದ ಉತ್ತಮವಾದ ಫಲ ಸಿಗುತ್ತದೆ. ಮನೆಯಲ್ಲಿ ಶಾಂತಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿರುತ್ತದೆ. ಬೇರೆ ಕಡೆಯಿಂದ ಸಾಲವನ್ನು ತೆಗೆದುಕೊಂಡು ಬಂದು ಹೂಡಿಕೆ Tula Rashi

ಮಾಡಬಹುದು ಆದರೇ ಸಾಲವನ್ನು ಮಾಡಿ ಹೂಡಿಕೆ ಮಾಡುವುದು ಸರಿಯಲ್ಲ. ನಿಮ್ಮ ಬಳಿ ಎಷ್ಟು ಇದೆಯೋ ಅಷ್ಟನ್ನು ಮಾತ್ರ ಹೂಡಿಕೆ ಮಾಡಿರಿ. ಅನಾವಶ್ಯಕ ಸಾಲಗಳಿಗೆ ಕಡಿವಾಣವನ್ನು ಹಾಕಿರಿ. ನಿಮ್ಮ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದರ್ಶನದಿಂದ ಒಳ್ಳೆಯ ಫಲ ಸಿಗುತ್ತದೆ ಮತ್ತು ನಿಮಗೆ ಅನುಕೂಲವಾದರೇ ನವಗ್ರಹ ಶಾಂತಿ ಹೋಮವನ್ನು ಮಾಡಿಸಿಕೊಳ್ಳಿರಿ. ಹಿರಿಯರಿಗೆ ಗೌರವ ಮತ್ತು ಸಾಧುಸಂತರ ದರ್ಶನ ಮಾಡುವಂತದ್ದು, ಗುರುವಿನ ಸೇವೆಯನ್ನು ಮಾಡುವುದರಿಂದ ಗುರುವಿನ ಅನುಗ್ರಹವಾಗುತ್ತದೆ ಮತ್ತು ಒಳ್ಳೆಯದಾಗುತ್ತದೆ.

Leave A Reply

Your email address will not be published.