Ultimate magazine theme for WordPress.

Vrischika Rashi ವೃಶ್ಚಿಕ ರಾಶಿಯ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯ

0 10,431

Vrischika Rashi Bhavishya February ವೃಶ್ಚಿಕ ರಾಶಿಯ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯವನ್ನು ತಿಳಿಸಿಕೊಡುತ್ತೇವೆ. ಈ ತಿಂಗಳಿನಲ್ಲಿ ಏನೆಲ್ಲಾ ಲಾಭಗಳು ಇವೆ? ಏನೆಲ್ಲಾ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು? ಸಮಸ್ಯೆಗಳ ಪರಿಹಾರ ಮಾಡಿಕೊಳ್ಳುವ ಬಗೆ ಇತ್ಯಾದಿಗಳನ್ನು ಈ ಲೇಖನದ ಮೂಲಕ ತಿಳಿಸಿಕೊಡುತ್ತೇನೆ. ವೃಶ್ಚಿಕ ರಾಶಿಯ ಅಧಿಪತಿ ಕುಜಗ್ರಹ. ಲಾಂಛನ ಚೇಳು. ಕೆಂಪು ಮತ್ತು ಕಿತ್ತಳೆಯಾಗಿರುತ್ತದೆ.

ಮಂಗಳವಾರ ಮತ್ತು ಗುರುವಾರ ಅದೃಷ್ಟದ ವಾರವಾಗಿರುತ್ತದೆ. ಶಿವ ಮತ್ತು ಆಂಜನೇಯಸ್ವಾಮಿ ಅದೃಷ್ಟ ದೇವರಾಗಿದ್ದಾರೆ. 3,7 ಮತ್ತು 9 ಅದೃಷ್ಟ ಸಂಖ್ಯೆಗಳು. ಕಟಕ, ಮೀನಾ ಮಿತ್ರರಾಶಿಗಳಾದರೇ ಶತೃರಾಶಿಗಳು ಮೇಷ, ಸಿಂಹ ಮತ್ತು ಧನಸ್ಸು ರಾಶಿಯಾಗಿದೆ. 9, 8 ಮತ್ತು 27 ಅದೃಷ್ಟ ದಿನಾಂಕಗಳಾಗಿವೆ. ವೃಶ್ಚಿಕ ರಾಶಿಯವರು ವಿಮರ್ಶಾವಂತರು, ನ್ಯಾಯಪ್ರಿಯರು ಮತ್ತು ಯಾವುದಾದರೂ ಒಂದು ವಿಚಾರಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದರ ಬಗ್ಗೆ ಮಾತನಾಡುವಂತಹ ವ್ಯಕ್ತಿಗಳು ಮತ್ತು ರಸಿಕರು ಕೂಡ ಆಗಿದ್ಧಾರೆ.

ಯಾವುದೇ ಒತ್ತಡವಿದ್ದರೂ ಅದನ್ನು ಸರಿಯಾಗಿ ನಿಭಾಯಿಸುವಂತಹ ವ್ಯಕ್ತಿಗಳು ಈ ವೃಶ್ಚಿಕರಾಶಿಯವರು ಆಗಿರುತ್ತಾರೆ. ಗುರು ಮತ್ತು ಪಿತೃ ವರ್ಗದಿಂದ ಹಿರಿಯರಿಂದ ಲಾಭಗಳಾಗುವ ಸಾಧ್ಯತೆಗಳಿವೆ. ಅನೇಕ ಸವಾಲು, ಸಮಸ್ಯೆಗಳಿವೆ ಸಾಕಷ್ಟು ಎಷ್ಟೇ ಒತ್ತಡಗಳಿದ್ದರೂ ಅದನ್ನು ಎದುರಿಸುವಂತಹ ಮಾನಸಿಕ ಸ್ಥೈರ್ಯ ನಿಮ್ಮಲ್ಲಿ ಇದೆ. ಕೆಲವು ಸಲ ತೊಂದರೆಗಳಿಂದ ತಪ್ಪಿಸಿಕೊಳ್ಳುತ್ತೀರಿ ಆಗಾಗಿ ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಪಿತೃ ವರ್ಗದಿಂದ ಧನ ಸಹಾಯವಾಗುತ್ತದೆ. ಅನಿರೀಕ್ಷಿತವಾಗಿ ದುಡ್ಡು ಕೂಡ ಬರುತ್ತದೆ.

ಆದ್ದರಿಂದ ನಿಮಗೆ ಇರುವ ಸಾಲಗಳು, ಗೊಂದಲಗಳು, ಒತ್ತಡಗಳು, ತೊಂದರೆಗಳಿಂದ ಮುಕ್ತರಾಗುವ ಸಾಧ್ಯತೆ ಇದೆ. ವಿಶೇಷವಾಗಿ ಸಾರ್ವಜನಿಕ ವಲಯಗಳಲ್ಲಿ ಗುರುತಿಸಿಕೊಂಡವರಿಗೆ, ಸಂಘ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುವವರಿಗೆ ರಾಜಕಾರಣಿಗಳಿಗೆ ಜನರ ಗೌರವಕ್ಕೆ ಪಾತ್ರರಾಗುತ್ತೀರಿ. ವಾಹನ ಚಲಾವಣೆ ಮಾಡುವಾಗ ಮತ್ತು ಏನೇ ಕೆಲಸ ಮಾಡಬೇಕಾದರೂ ಎಚ್ಚರಿಕೆಯಿಂದ ಇದ್ದರೇ ಒಳ್ಳೆಯದು. ಖರ್ಚನ್ನು ಕಡಿಮೆ ಮಾಡಿ ಮತ್ತು ಕುಟುಂಬ ಸದಸ್ಯರ ಆರೋಗ್ಯದ ಕಡೆ ಮತ್ತು ನಿಮ್ಮ ಆರೋಗ್ಯದ ಬಗ್ಗೆಯೂ ಕೂಡ ಹೆಚ್ಚಿನ ಗಮನವನ್ನು ಕೊಡಬೇಕು.

ನೀವು ವ್ಯಾಪಾರಸ್ಥರೇ ಆಗಿರಿ, ಉದ್ಯೋಗಿಯೇ ಆಗಿರಿ, ಸರ್ಕಾರಿ, ಅರೆಸರ್ಕಾರಿ ಯಾವ ಕೆಲಸ ಮಾಡುವವರಾಗಿದ್ದರೂ ಯಾರನ್ನು ಬೇಗನೇ ನಂಬಬೇಡಿ. ದುಡ್ಡು ಕೊಡುವುದು ಮತ್ತು ತೆಗೆದುಕೊಳ್ಳುವುದು ಮಾಡಬೇಡಿ. ಮಧ್ಯಸ್ಥಿಕೆ ವ್ಯವಹಾರದಲ್ಲಿ ಬಹಳ ಜಾಗರೂಕರಾಗಿರಿ. ವೃಶ್ಚಿಕ ರಾಶಿಯವರು ಬಹಳ ಆತ್ಮೀಯವಾಗಿ ಎಲ್ಲರನ್ನು ನಂಬಿಬಿಡುತ್ತಾರೆ.

ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕವಾಗಿರುವುದು ಮುಖ್ಯವಾಗಿರುತ್ತದೆ. ಪತಿಪತ್ನಿಯ ವಿಚಾರದಲ್ಲಿ ಹೊಂದಾಣಿಕೆ ಇರುತ್ತದೆ. ಪ್ರೇಮಿಗಳಲ್ಲಿ ಸಣ್ಣ ಪುಟ್ಟ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಕೂಡ ನಿಧಾನವಾಗಿ ಸರಿ ಹೋಗುತ್ತದೆ. ವಿದ್ಯಾರ್ಥಿಗಳ ವಿಚಾರಕ್ಕೆ ಬಂದರೆ ಓದಿನಲ್ಲಿ ಸ್ವಲ್ಪ ನಿರಾಸಕ್ತಿ ಇರುತ್ತದೆ. ಹೆಚ್ಚಿನ ಕಾಳಜಿ ತೆಗೆದುಕೊಂಡು ಓದಿನ ಕಡೆ ಗಮನವನ್ನು ಕೊಡಬೇಕು. ವೃಶ್ಚಿಕ ರಾಶಿಯ ತಂದೆ ತಾಯಿಗಳು ಮಕ್ಕಳ ಓದಿನ ಕಡೆ ಗಮನ ಕೊಡಬೇಕು.

ವಿದ್ಯುತ್ ಕೆಲಸ ಮತ್ತು ಕಟ್ಟಡ ಕೆಲಸ ಮಾಡುವವರು ಎಚ್ಚರಿಕೆಯಿಂದ ಕೆಲಸವನ್ನು ಮಾಡಬೇಕಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಕಾಳಜಿಯನ್ನು ವಹಿಸಿರಿ. ಕೆಲವೊಂದು ವಿಚಾರಗಳಲ್ಲಿ ಮಕ್ಕಳಿಂದ ಭಿನ್ನಾಭಿಪ್ರಾಯಗಳು ಹುಟ್ಟುವ ಸಾಧ್ಯತೆ ಇರುತ್ತದೆ. ನಿಮ್ಮ ಯೋಚನೆ, ಯೋಜನೆ ನೀವು ಅಂದುಕೊಂಡತೆ ಆಗುವುದಿಲ್ಲ ಅದನ್ನು ಸರಿಮಾಡಿಕೊಂಡು ಹೋಗಬೇಕಾಗುತ್ತದೆ. ಸರ್ಕಾರಿ ಮತ್ತು ಅರೆಸರ್ಕಾರಿಯಲ್ಲಿ ಕೆಲಸ ಮಾಡುತ್ತಿದ್ದರೆ,

ವ್ಯಾಪಾರ ವಹಿವಾಟು ಮಾಡುತ್ತಿದ್ದರೆ ಸ್ವಲ್ಪ ಒತ್ತಡದ ವಾತಾವರಣವಿರುತ್ತದೆ. ನಿಮ್ಮ ಜೊತೆ ಕೆಲಸ ಮಾಡುತ್ತಿರುವವರಿಂದ ಸ್ವಲ್ಪ ಒತ್ತಡ ಎನಿಸುತ್ತದೆ. ಜನರ ವಿಚಾರದಲ್ಲಿ ಎಚ್ಚರಿಕೆ ವಹಿಸಿ ಮತ್ತು ಹಿತ ಶತೃಗಳಿಂದ ಕೆಲವು ಸಂಚುಗಳು ನಡೆಯುವ ಸಾಧ್ಯತೆ ಇರುತ್ತದೆ. ವ್ಯಾಪಾರ ವ್ಯವಹಾರಕ್ಕೆ ಹೆಚ್ಚಿನ ಸಮಯ ಮತ್ತು ಪ್ರಯತ್ನವನ್ನು ಮಾಡಿದರೇ ಮಾತ್ರ ಹಣಕಾಸಿನಲ್ಲಿ ಪ್ರಗತಿಯಾಗುತ್ತದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರವೇನೆಂದರೆ ಶ್ರೀ ದುರ್ಗಾದೇವಿಯ ಆರಾಧನೆಯನ್ನು ಮಾಡಿರಿ ಮತ್ತು ನವಗ್ರಹ ಶಾಂತಿಯನ್ನು ಮಾಡಿಸಿಕೊಳ್ಳಿ ಮತ್ತು ಮನೆದೇವರ ಪ್ರಾರ್ಥನೆಯನ್ನು ಮಾಡಿಕೊಳ್ಳಿ ಖಂಡಿತವಾಗಿಯೂ ಶುಭಕರವಾಗುತ್ತದೆ.

Leave A Reply

Your email address will not be published.